Ad Widget

ಸುಳ್ಯ ಗಾಂಧಿನಗರ : ಮಹಾತ್ಮಾ ಗಾಂಧಿ ಆಟೋ ನಿಲ್ದಾಣ ಉದ್ಘಾಟನೆ ; “ನಾಡಿನ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರು ಸಹಕರಿಸಿದಾಗ ಅನುದಾನಗಳ ಸದ್ಬಳಕೆ ಸಾಧ್ಯ” : ಟಿ.ಎಂ ಶಹೀದ್

ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿಯವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ, ಸುಳ್ಯ ನಗರ ಪಂಚಾಯತ್ ಸಹಕಾರದೊಂದಿಗೆ ಸ್ಥಳೀಯ ಸದಸ್ಯ ಶರೀಫ್ ಕಂಠಿ ಯವರ ವಿಶೇಷ ಮುತುವರ್ಜಿಯಿಂದ ಸುಳ್ಯ ಗಾಂಧಿನಗರ ಗಾಂಧಿ ಪಾರ್ಕ್ ಬಳಿ ಆಧುನಿಕ ಶೈಲಿ ಯಲ್ಲಿ ನಿರ್ಮಿಸಿದ ಆಟೋ ರಿಕ್ಷಾ ತಂಗುದಾಣವನ್ನು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ....

ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಲ್ಲ ಖಾಯಂ ವೈದ್ಯಾಧಿಕಾರಿಗಳು – ಖಾಯಂ ವೈದ್ಯಾಧಿಕಾರಿಗಳನ್ನು ನೇಮಕಗೊಳಿಸದ ಸರ್ಕಾರ, ಸಮಸ್ಯೆ ಅನುಭವಿಸುತ್ತಿರುವ ಸಾರ್ವಜನಿಕರು ; ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಿದ ಗ್ರಾಮಸ್ಥರು ; ✍️ಉಲ್ಲಾಸ್ ಕಜ್ಜೋಡಿ

“ಊರಿನಲ್ಲೊಂದು ಸರ್ಕಾರಿ ಆರೋಗ್ಯ ಕೇಂದ್ರವಿರಬೇಕು, ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವರಕ್ಷಣೆಗೆ ಅದು  ಸಹಕಾರಿಯಾಗಬೇಕು” ಆದರೆ ಕೊಲ್ಲಮೊಗ್ರದಲ್ಲಿ ಕಲ್ಮಕಾರು, ಹರಿಹರ ಪಳ್ಳತ್ತಡ್ಕ, ಬಾಳುಗೋಡು ಸೇರಿದಂತೆ ನಾಲ್ಕು ಗ್ರಾಮಗಳಿಗೆ ಸಹಕಾರಿಯಾಗುವಂತೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಅಲ್ಲಿ ಖಾಯಂ ಅಥವಾ ಪರ್ಮನೆಂಟ್ ವೈದ್ಯಾಧಿಕಾರಿಗಳಿಲ್ಲದೇ ಸಾರ್ವಜನಿಕರು ಹಾಗೂ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ...
Ad Widget

ಸುಳ್ಯ ಆರಕ್ಷಕ ಠಾಣೆಗೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳು ಕರ್ತವ್ಯಕ್ಕೆ

ಸುಳ್ಯ ಆರಕ್ಷಕ ಠಾಣೆಗೆ ಇಬ್ಬರು ಹೊಸ ಪೊಲೀಸ್ ಕಾನ್ಸ್ಟೇಬಲ್ ಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹಾಸನದ ಸಚಿನ್ ಎ.ಬಿ ಹಾಗೂ ಧರ್ಮಸ್ಥಳದ ವಿಖ್ಯಾತ್.ಜೆ ಅವರು ಪೊಲೀಸ್ ಕಾನ್ಸ್ಟೇಬಲ್ ಗಳಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

“ಕೇಂದ್ರದ ಬಿಜೆಪಿ ಸರ್ಕಾರ ಗ್ರಾಮೀಣ ಭಾಗದ ರೈತರ  ಮತ್ತು ಗ್ರಾಮಗಳ ಅಂತ್ಯದ ಕನಸು ಕಾಣುತ್ತಿದೆ” ; “ನರೇಗಾ ಯೋಜನೆ ಹೆಸರು ಬದಲಾಯಿಸಿ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಗೆ ಬಿಜೆಪಿ  ತಡೆಯೊಡ್ಡಿದೆ” ; “ಬಿಜೆಪಿಯ ವಿ.ಬಿ ರಾಂಜೀ ಕಾಯ್ದೆ ಕಾರ್ಮಿಕ ವರ್ಗ ಹಾಗೂ ಗ್ರಾಮಗಳ ಅಭಿವೃದ್ಧಿಗೆ  ಹೊಡೆತ ಕೊಡಲಿದೆ” – ಕಾರ್ಮಿಕ ಮುಖಂಡ ಕೆ.ಪಿ. ಜಾನಿ ಅವರಿಂದ ಪತ್ರಿಕಾಗೋಷ್ಠಿ

“ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷವು ಸಂಶೋದನೆ ಮಾಡಿ ಕಂಡುಕೊಂಡ ಮಹಾತ್ಮ ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆಗೆ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ತಡೆಯೊಡ್ಡಿದ್ದು, ಕೃಷಿಕೂಲಿ ಕಾರ್ಮಿಕರನ್ನು ಮತ್ತು ಕಟ್ಟಡ ಕಾರ್ಮಿಕ ವರ್ಗ ಹಾಗೂ ಗ್ರಾಮೀಣ ಭಾಗದ ಬಡ ರೈತರ ಮತ್ತು ಗ್ರಾಮಗಳ ಅತ್ಯದ...

ವಳಲಂಬೆ : ಪೋಷಣ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸೀಮಂತ ಕಾರ್ಯಕ್ರಮ

ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸೀಮಂತ ಕಾರ್ಯಕ್ರಮ ಹಾಗೂ ಬಾಲ ವಿಕಾಸ ಸಮಿತಿ ಸಭೆ ಇಂದು ನಡೆಯಿತು. ಕಾರ್ಯಕ್ರಮವನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಸ್ವಾತಿ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ‌. ಸದಸ್ಯ ವೆಂಕಟ್ ವಳಲಂಬೆ, ಬಾಲವಿಕಾಸ ಸಮಿತಿ ಸದಸ್ಯರಾದ ವಿಜಯಲಕ್ಷ್ಮಿ , ಆಶಾ ಕಾರ್ಯಕರ್ತೆ ಸರಸ್ವತಿ ಕಾಜಿಮಡ್ಕ, ಶಾಲಾ ಮುಖ್ಯ...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ನಕ್ಷತ್ರದಂದು 1,400 ಆಶ್ಲೇಷ ಬಲಿ ಸೇವೆ

ಸುಬ್ರಹ್ಮಣ್ಯ ಜನವರಿ 6 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರವಾದ ಜ.06ರಂದು ದಾಖಲೆಯ 1,400 ಆಶ್ಲೇಷ ಬಲಿ ಸೇವೆಗಳು ನಡೆದವು. ಸುಬ್ರಹ್ಮಣ್ಯನಿಗೆ ಮಂಗಳವಾರ ವಿಶೇಷ ದಿನವೂ ಆಗಿದ್ದರಿಂದ ಆಶ್ಲೇಷ ನಕ್ಷತ್ರವು ಈ ದಿನವೇ ಬಂದಿದ್ದರಿಂದ ಅಧಿಕ ಸಂಖ್ಯೆಯಲ್ಲಿ ವಿವಿಧ ಭಾಗಗಳಿಂದ ಭಕ್ತರು ಸೇವೆಗಾಗಿ ಶ್ರೀ...

ಚಲನಚಿತ್ರ ನಟ ಸುಮನ್ ತಲ್ವಾರ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ಸುಬ್ರಹ್ಮಣ್ಯ ಜನವರಿ 6 : ಕನ್ನಡ, ತೆಲುಗು, ತುಳು ಭಾಷೆಗಳಲ್ಲಿ ನಟಿಸಿರುವ  ಖ್ಯಾತ ಹಿರಿಯ ಚಲನಚಿತ್ರ ನಟ ಸುಮನ್ ತಲ್ವಾರ್, ಪತ್ನಿ ಸಿರಿಶಾ ಹಾಗೂ ಮಗಳು ಅತೀಶ್ವರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದರು. ದೇವಸ್ಥಾನದಲ್ಲಿ ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಮತ್ತು ಪಂಚಾಮೃತ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು.ಶ್ರೀ ದೇವಳದ ಆಡಳಿತ ಕಚೇರಿಗೆ...

ಎನ್.ಎಸ್.ಯು.ಐ ಹೇಳಿಕೆಗೆ  ಎ.ಬಿ.ವಿ.ಪಿ ಖಂಡನೆ ; “ನಮ್ಮನ್ಮು ಪ್ರಶ್ನಿಸುವ ಯಾವುದೇ ನೈತಿಕತೆ‌ ಇಲ್ಲ” ಎಂದ ಎ.ಬಿ.ವಿ.ಪಿ

“ವಿದ್ಯಾರ್ಥಿಗಳ ನೈಜ ಸಮಸ್ಯೆಗಳ ಕುರಿತು ಧ್ವನಿ ಎತ್ತಿದಾಗ ಅದಕ್ಕೆ ಧನಿಗೂಡಿಸುವ ಬದಲು ಆಡಳಿತದ ಚೇಲಾಗಳಂತೆ ವರ್ತಿಸಿರುವ ಎನ್‌.ಎಸ್‌.ಯು.ಐ ನಾಯಕರ ಹೇಳಿಕೆ ಬಾಲಿಷವಾಗಿದ್ದು, ಅದು ಅವರ ಸ್ವಂತ ಆಲೋಚನೆಯಲ್ಲ, ಯಾರೋ ಬರೆದು ಕೊಟ್ಟ ಹೇಳಿಕೆಯಂತೆಯೇ ಕಾಣುತ್ತದೆ. ವಿದ್ಯಾರ್ಥಿಗಳ ಸಂಕಷ್ಟವನ್ನು ಅರಿಯದೇ, ಹೋರಾಟದ ಉದ್ದೇಶವನ್ನೇ ಮರೆತಿದ್ದು, ಇಂತಹ ಪ್ರತಿಕ್ರಿಯೆ ದೌರ್ಭಾಗ್ಯಕರವಾಗಿದೆ. ಇಂತಹ ಹೇಳಿಕೆಗಳಿಂದ ಆ ವಿದ್ಯಾರ್ಥಿ ನಾಯಕರು ಅಥವಾ...

ತಾಲೂಕು ಮಟ್ಟದ ಅಕ್ಷರ ದಾಸೋಹ ಅಡುಗೆ ಸ್ಪರ್ಧೆ ; ಹರಿಹರ ಪಳ್ಳತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೃತೀಯ

ಪಿ.ಎಂ ಪೋಷಣ್ ಯೋಜನೆಯ ಅಡಿಯಲ್ಲಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಜ.04ರಂದು ನಡೆದ ಸುಳ್ಯ ತಾಲೂಕು ಮಟ್ಟದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳ ಅಡುಗೆ ಸ್ಪರ್ಧೆಯಲ್ಲಿ ಹರಿಹರ ಪಳ್ಳತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ಕುಸುಮಾ ಹಾಗೂ ಶ್ರೀಮತಿ ಅನುಪಮಾ ರವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)
error: Content is protected !!