- Saturday
- March 7th, 2026
ಪಂಚಸಪ್ತತಿ 75 ದಿನಗಳ ಸ್ವಚ್ಚತಾ ಆಂದೋಲನದಡಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಆಶ್ರಯದಲ್ಲಿ ಶುಚಿ 2025 ಆರೋಗ್ಯ ಮಾಹಿತಿ ಕಾರ್ಯಕ್ರಮ ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಸರಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರು ಡಾ| ಶಾಲಿನಿ ವಿ.ಎಲ್ ಇವರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ ನೀಡಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಶ್ರೀಮತಿ...
ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ "ಸ್ವರ್ಣಂ ಜ್ಯುವೆಲ್ಸ್" ನಲ್ಲಿ "ಗೋಲ್ಡ್ ಎಕ್ಸ್ ಚೇಂಜ್ ಮೇಳ"ಕ್ಕೆ ಗ್ರಾಹಕರ ಉತ್ತಮ ಸ್ಪಂದನೆ ನೀಡಿದ್ದು, ಚಿನ್ನ ಎಕ್ಸ್ ಚೇಂಜ್ ಗೆ ಗ್ರಾಹಕರು ಮುಗಿಬಿದ್ದ ಕ್ಷಣ ಕಂಡುಬಂದಿತು.ಸುಳ್ಯದ ಗ್ರಾಹಕರಿಗೋಸ್ಕರ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನ.24 ಡಿ.4 ರವರೆಗೆ ಗೋಲ್ಡನ್ ಎಕ್ಸ್ ಚೇಂಜ್ ಮೇಳ ನಡೆಯುತ್ತಿದ್ದು,...
ಸುಳ್ಯ ಬೆಳ್ಳಾರೆ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಕೆಲವೆಡೆ ಒಂದು ಭಾಗದಲ್ಲಿ ಮಾತ್ರ ಮರವನ್ನು ತೆರವು ಮಾಡಲಾಗಿದ್ದು, ಇನ್ನೊಂದು ಭಾಗದ ಮರಗಳು ರಸ್ತೆಗೆ ಸಮೀಪದಲ್ಲಿದೆ. ತಿರುವು ರಸ್ತೆಯಿರುವ ಕಾರಣ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹಾಗೂ ತಿರುವಿನಲ್ಲಿ ರಸ್ತೆ ಕಾಣದೇ ಅಪಘಾತಗಳಿಗೆ ಎಡೆ ಮಾಡಿಕೊಡುವ ಮುನ್ನ ತೆರವುಗೊಳಿಸುವುದು ಒಳಿತು. ಈ ರಸ್ತೆ ವೀಕ್ಷಣೆಯನ್ನು...
ಶ್ರೀ ದುರ್ಗಾ ಭಜನಾ ಮಂಡಳಿ ಹಾಗೂ ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಇವರ ನೇತೃತ್ವದಲ್ಲಿ ನಡುಗಲ್ಲು ಪ್ರಾಥಮಿಕ ಶಾಲೆಯಲ್ಲಿ “ಮಕ್ಕಳ ಕುಣಿತ ಭಜನಾ ತರಬೇತಿ ಕಾರ್ಯಾಗಾರ” ನಡೆಯಲಿದ್ದು, ಇದರ ಉದ್ಘಾಟನೆಯನ್ನು ಶ್ರೀ ಮಹಾಮೃತ್ಯುಂಜಯೇಶ್ವರ ಪಾರ್ವತಿ ಕ್ಷೇತ್ರ ನಡುಗಲ್ಲು ಇದರ ಸೇವಾ ಟ್ರಸ್ಟ್ ಅಧ್ಯಕ್ಷರಾದ ರಾಮಚಂದ್ರ ಭಟ್ ನಡುಗಲ್ಲು ರವರು ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ...
ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಇತ್ತೀಚೆಗೆ ಕೆ.ಎಸ್.ಗೌಡ ವಿದ್ಯಾ ಸಂಸ್ಥೆ ನಿಂತಿಕಲ್ಲು ಇಲ್ಲಿ ನಡೆಯಿತು. ಸರಕಾರಿ ಪ್ರೌಢ ಶಾಲೆ ಎಣ್ಮೂರು ಏಳು ಪ್ರಥಮ, ಮೂರು ದ್ವಿತೀಯ ಹಾಗೂ ಎರಡು ತೃತೀಯ ಸ್ಥಾನ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕಡಬ ತಾಲೂಕು ಎಣ್ಮೂರು ಗ್ರಾಮದ ಚಾಮೆತಡ್ಕ ಖಂಡಿಗೆ ಶ್ರೀಮತಿ ಲೀಲಾವತಿ ಮತ್ತು ದಿ|ಪದ್ಮಯ್ಯ ಗೌಡರ ಸುಪುತ್ರ ದೀಪಕ್ ರವರ ವಿವಾಹವು ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ದಾತಡ್ಕ ಮನೆಯ ಇಡಾಲ ಶ್ರೀಮತಿ ಚಂದ್ರಕಲಾ ಮತ್ತು ಶ್ರೀ ಪುರುಷೋತ್ತಮ ಗೌಡರ ಸುಪುತ್ರಿ ನವ್ಯಶ್ರೀ ರವರೊಂದಿಗೆ ಸುಳ್ಯ ಅಮರಶ್ರೀಭಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನ.30ರಂದು ಜರುಗಿತು.
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇದರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025 (75 ದಿನಗಳ ಸ್ವಚ್ಛತಾ ಅಭಿಯಾನ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಈ ದಿನ ಸ್ವಚ್ಛತಾ ಕಾರ್ಯಕ್ರಮವನ್ನು ಮಡಪ್ಪಾಡಿಯ ಬಸ್ ನಿಲ್ದಾಣ ಮತ್ತು ಮಡಪ್ಪಾಡಿ ಪೇಟೆಯಲ್ಲಿ ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರು, ಸದಸ್ಯರು ಮತ್ತು ಯುವಜನ...
