- Saturday
- March 7th, 2026
ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಣೆ ಅ.02 ರಂದು ನಡೆಯಿತು. ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಪೂರ್ವಾಧ್ಯಕ್ಷೆ ದಿವ್ಯ ರಮೇಶ್ ಪಡ್ಪು, ಅಂಗನವಾಡಿ ಸಹಾಯಕಿ ಸುಜಾತ ಬಸ್ತಿಗುಡ್ಡೆ, ಪೋಷಕರು ಉಪಸ್ಥಿತರಿದ್ದರು ಅಂಗನವಾಡಿ ಕಾರ್ಯಕರ್ತೆ ಭಾರತಿ ಕೆ ಸ್ವಾಗತಿಸಿ ವಂದಿಸಿದರು.
ಅರಂತೋಡು ಗ್ರಾಮದ ಜೀವನ್ ಮೇಲಡ್ತಲೆ ಯವರ ಕಿರ್ಲಾಯದಲ್ಲಿರುವ ಕೃಷಿ ಜಾಗಕ್ಕೆ ಕಳೆದ ರಾತ್ರಿ ಆನೆಗಳ ಹಿಂಡು ದಾಳಿ ನಡೆಸಿದ್ದು, ಸುಮಾರು 10 ತೆಂಗಿನಗಿಡ ಹಾಗೂ 20 ಕ್ಕೂ ಹೆಚ್ಚು ಗೇರು ಗಿಡಗಳನ್ನು ನಾಶಪಡಿಸಿದೆ. ಅಡಿಕೆಯ ಹಳದಿ ರೋಗದಿಂದ ತತ್ತರಿಸಿರುವ ಜನಕ್ಕೆ ಕಾಡಾನೆ ದಾಳಿಯು ಇನ್ನಷ್ಟು ಸಂಕಷ್ಟವನ್ನು ತಂದಿದೆ ಎಂದು ಜೀವನ್ ಮೇಲಡ್ತಲೆ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿ ರವರು ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ “ಕಾಂತಾರ ಚಾಪ್ಟರ್ 01” ಸಿನಿಮಾ ಇಂದು(ಅ.02) ವಿಶ್ವದಾದ್ಯಂತ ಏಳು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಮೊದಲ ದಿನವೇ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ “ಮಿಥುನ್ ಕುಮಾರ್ ಸೋನ” ರವರು “ರಾಜವೈದ್ಯ”ರ ಪಾತ್ರದಲ್ಲಿ...
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರಗಿತು ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ವಹಿಸಿದ್ದರು.ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಬ್ಲಾಕ್ ಪ್ರದಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ್, ರಾಜ್ಯ ಕಾರ್ಮಿಕ ಮಂಡಳಿ ಸದಸ್ಯ ಕೆ.ಪಿ. ಜೋನಿ,...
ಸುಳ್ಯದ ಮುಖ್ಯ ರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣ ಖರೀದಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗಿದ್ದು ಪ್ರತೀ ಪವನ್ ನ ಮೇಲೆ ರೂ. 1,600 ರಿಯಾಯಿತಿ ಹಾಗೂ ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ. 100...
ಬೆಳ್ಳಾರೆಯ ಕಾಮಧೇನು ಟವರ್ಸ್ ನಲ್ಲಿ ಪೂಜಾ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಅ 2ರಂದು ಶುಭಾರಂಭಗೊಂಡಿತು.ಬೆಳ್ಳಾರೆ ಕಾಮಧೇನು ಟವರ್ಸ್ ಮಾಲಕರಾದ ಮಾಧವ ಗೌಡ ಕಾಮಧೇನು ದೀಪ ಬೆಳಗಿಸಿ ಉಧ್ಘಾಟಿಸಿದರು. ಅತಿಥಿಗಳಾಗಿ ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷೆ ನಮಿತಾ ಎಲ್.ರೈ, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ವ್ಯವಸ್ಥಾಪಕರಾದ ಎಂ.ಪಿ ಉಮೇಶ್, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ...
ಸುಳ್ಯದ ಶಿವಕೃಪ ಕಲಾಮಂದಿರದ ಸಭಾಂಗಣದಲ್ಲಿ ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷರಾದ ಅಶೋಕ ಎಡಮಲೆ ವಹಿಸಿದ್ದರು.ಕಾರ್ಯಕ್ರಮವು ಸಂವಿಧಾನ ಪೀಠಿಕೆ ವಾಚನದೊಂದಿಗೆ ಆರಂಭಗೊಂಡಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗಾಂಧೀಜಿಯವರ ತತ್ವ-ಆದರ್ಶಗಳನ್ನು ಸ್ಮರಿಸಿ, ಅವುಗಳನ್ನು ಅನುಸರಿಸುವ ಸಂಕಲ್ಪದೊಂದಿಗೆ ಗೋಪಾಲ್ ಪೆರಾಜೆ ಪ್ರಸ್ತಾವಿಕವಾಗಿ ಮಾತನಾಡಿದರು. ಜಾನಿ ಕೆ.ಪಿ....
ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಈ ಕೆಳಗೆ ವಿವರ ಕಾಣಿಸಿದ ಅಂಗಡಿ ಕಟ್ಟಡವನ್ನು ಮೂರು ವರ್ಷದ ಅವಧಿಗೆ ಬಾಡಿಗೆ ನೆಲೆಯಲ್ಲಿ ನೀಡಲು ಅ. 10 ಶುಕ್ರವಾರದಂದು ಪೂರ್ವಾಹ್ನ ಗಂಟೆ 9.30 ಕ್ಕೆ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಬಹಿರಂಗ ಏಲಂ ನಡೆಯಲಿದೆ. ದೇವಚಳ್ಳ ಗ್ರಾ. ಪಂ. ಕಛೇರಿ ಸಮೀಪದ ಅಂಗಡಿ ಕಟ್ಟಡ, ತಳೂರು ಬಸ್ ತಂಗುದಾಣದ...
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದಿಂದ ಪ್ರಭು ಗ್ರೌಂಡ್ಸ್ ನಲ್ಲಿ ಪ್ರಥಮ ವರ್ಷದ ಆಯುಧ ಪೂಜಾ ಕಾರ್ಯಕ್ರಮ ಬಹಳ ವಿಜ್ರಂಭಣೆಯಿಂದ ನೆರವೇರಿತು. ವಲಯದ ಎಲ್ಲಾ ಸದಸ್ಯರು ಕುಟುಂಬ ಸಮೇತ ರಾಗಿ ಆಗಮಿಸಿ ಆಯುಧ ಪೂಜೆಯನ್ನು ವಿಶೇಷವಾಗಿ ತಮ್ಮ ವಾಹನಗಳನ್ನು ಸಿಂಗರಿಸಿ ಆಚರಿಸಿದರು. ಪುರೋಹಿತ ಶ್ರೀ ನಟರಾಜ ಶರ್ಮಾ ಅವರು, ದೀರ್ಘಕಾಲದ ಸಂಪ್ರದಾಯ ಹಾಗೂ ದುರ್ಗಾದೇವಿಯ...
ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ಇದರ ವತಿಯಿಂದ 38ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.02ರಂದು ಬೆಳ್ಳಾರೆ ಮೇಲಿನ ಪೇಟೆ ಅಚಲಾಪುರ ಕಟ್ಟೆಯಲ್ಲಿ ಜರುಗಲಿದೆ.ಬೆಳಿಗ್ಗೆ ಘಂಟೆ 10:00ರಿಂದ ಸಂಜೆ 4:00ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಸಂಜೆ 4:00 ಘಂಟೆಯಿಂದ 6:00ರ ವರೆಗೆ ವಾಹನ ಪೂಜೆ ನಡೆಯಲಿದೆ.ಸಂಜೆ 6:00ರಿಂದ ಕಲರ್ಸ್ ಕನ್ನಡ ಖ್ಯಾತಿಯ,...
Loading posts...
All posts loaded
No more posts
