Ad Widget

ಮಂಡೆಕೋಲು: ರಬ್ಬರ್ ಬೆಳೆಗಾರರ ಹಾಗೂ ಉತ್ಪಾದಕರ ಸಂಘ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗಣೇಶ್ ಮಾವಂಜಿ, ಕಾರ್ಯದರ್ಶಿಯಾಗಿ ಮುರಳೀಧರ ರೈ ಪೇರಾಲು ಆಯ್ಕೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ರಬ್ಬರ್ ಬೆಳೆಗಾರರ ಹಾಗೂ ಉತ್ಪಾದಕರ ಸಂಘದ ಪದಾಧಿಕಾರಿಗಳ ಆಯ್ಕೆ ಶನಿವಾರ ಗ್ರಾಮದ ಅರಿವು ಕೇಂದ್ರದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಗಣೇಶ್ ಮಾವಂಜಿ ಹಾಗೂ ಕಾರ್ಯದರ್ಶಿಗಳಾಗಿ ಮುರಳೀಧರ ರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಲ್ಲದೆ ಉಪಾಧ್ಯಕ್ಷರಾಗಿ ರಾಮಚಂದ್ರ ಯದುಗಿರಿ, ಜತೆಕಾರ್ಯದರ್ಶಿಯಾಗಿ ಶಶಿಧರ ಮಾವಜಿ, ಕೋಶಾಧಿಕಾರಿಯಾಗಿ ಭಾರತಿ ಉಗ್ರಾಣಿಮನೆ ಆಯ್ಕೆಯಾದರು....

ರಾಯಚೂರು ಬೆಳಕು ಟ್ರಸ್ಟ್ ನ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ ವಿಜಯಕುಮಾ‌ರ್ ಸುಳ್ಯ ಆಯ್ಕೆ

ಬೆಳಕು ಸಾಹಿತ್ಯ, ಶೈಕ್ಷಣಿಕ,ಸಾಂಸ್ಕೃತಿಕ ಟ್ರಸ್ಟ್ ರಾಯಚೂರು ಇದರ ಬೆಳಕು ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾಗಿ ವಿಜಯಕುಮಾ‌ರ್ ಸುಳ್ಯ ರವರು ಆಯ್ಕೆಗೊಂಡಿದ್ದಾರೆ. ಗಾಯಕರಾಗಿರುವ ವಿಜಯಕುಮಾರ್ ರವರು ಸುಳ್ಯ ಟಿಎಪಿಸಿಎಂಎಸ್ ಉದ್ಯೋಗಿ ಮತ್ತು ಕಸಾಪ ಸುಳ್ಯ ಹೋಬಳಿ ಘಟಕದ ನಿರ್ದೇಶಕರಾಗಿದ್ದಾರೆ.
Ad Widget
error: Content is protected !!