Ad Widget

ಮಡಪ್ಪಾಡಿ : “ಪಂಚಸಪ್ತತಿ ಅಭಿಯಾನ”ದ ಅಂಗವಾಗಿ ರಾತ್ರಿ ನಿಲುಗಡೆ ಬಸ್ ಸ್ವಚ್ಚತೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇದರ ಆಶ್ರಯದಲ್ಲಿ "ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ)" ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ನಾಲ್ಕನೇ ಸ್ವಚ್ಛತಾ ಕಾರ್ಯಕ್ರಮದಲ್ಲಿ, ಇವತ್ತು ದಿನಾಂಕ 24/10/25ರ ಶುಕ್ರವಾರದಂದು ರಾತ್ರಿ ಗಂಟೆ 7.30ರಿಂದ ಮಡಪ್ಪಾಡಿಯ "ರಾತ್ರಿ ನಿಲುಗಡೆ ಬಸ್" ನ್ನು ಸ್ವಚ್ಛಗೊಳಿಸಲಾಯಿತು.ಬಸ್ಸನ್ನು ತೊಳೆದು, ಶುಚಿಗೊಳಿಸಿ, ಅಲಂಕರಿಸಿ ವಿಭಿನ್ನ ರೀತಿಯಲ್ಲಿ...

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಾಧಕರಿಗೆ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ

ಸುಬ್ರಹ್ಮಣ್ಯ ಅಕ್ಟೋಬರ್ 24 : ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲೀಜನ್ ವತಿಯಿಂದ ಖ್ಯಾತ ಉದ್ಯಮಿ, ಸಮಾಜಸೇವಕ, ಚಲನಚಿತ್ರ ನಟ, ನಿರ್ಮಾಪಕ, ಅಖಿಲ ಭಾರತ ಬಿಲ್ಲವ ಮಹಾಮಂಡಲದ ಮುಲ್ಕಿಯ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಅವರನ್ನು ಸುಬ್ರಹ್ಮಣ್ಯದ ದೋಣಿಮಕ್ಕಿ ಕುಕ್ಕೆ ಶ್ರೀ ನಿಲಯದ ...
Ad Widget

ಕಸ ಎಸೆದವರ ಬೆಂಬೆತ್ತಿ ಜಾಗೃತಿ…!

ಕುಕ್ಕೆ ಸುಬ್ರಹ್ಮಣ್ಯ : ಕುಮಾರಧಾರೆಗೆ ತ್ಯಾಜ್ಯ ಎಸೆದ ಬೆಂಗಳೂರಿನ ಪ್ರವಾಸಿಗರಿಗೆ ದಂಡ

ಸುಬ್ರಹ್ಮಣ್ಯ ಅ.23 : ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಗೆ ತ್ಯಾಜ್ಯ ಎಸೆದು ಯಾರೂ ನೋಡಿಲ್ಲವೆಂದು ಭಾವಿಸಿಕೊಂಡು ತೆರಳಿದ ಪ್ರವಾಸಿಗರ ಬೆನ್ನುಹಿಡಿದು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಅವರಿಂದ ದಂಡ ವಸೂಲಿ ಮಾಡಿ ಜಾಗೃತಿ ಮೂಡಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ಗುರುವಾರ ನಡೆದಿದೆ.ಕುಕ್ಕೆಗೆ ಬಂದಿದ್ದ ಯಾತ್ರಿಕರು ಅ.23ರಂದು ಬೆಳಿಗ್ಗೆ ಕಾರಿನಲ್ಲಿ ಮರಳಿ ಹೋಗುವಾಗ ತ್ಯಾಜ್ಯದ ಕಟ್ಟೊಂದನ್ನು ನದಿಗೆ ಎಸೆದು ಹೋಗಿದ್ದರು. ಇದನ್ನು...

ಬೆಳ್ಳಾರೆ : ಅಮ್ಮ ಸ್ವೀಟ್ಸ್‌ ಮತ್ತು ಬೇಕರಿ ಶುಭಾರಂಭ

ಬೆಳ್ಳಾರೆಯ ಕೆಳಗಿನ ಪೇಟೆಯ  ಶ್ರೀರಾಂ ಕಾಂಪ್ಲೆಕ್ಸ್ ಎದುರುಗಡೆ ದಿನೇಶ್ ಬಾಳಿಲ ಮಾಲಕತ್ವದ ಅಮ್ಮ ಸ್ವೀಟ್ಸ್ ಮತ್ತು ಬೇಕರಿ ಅ.24 ರಂದು ಶುಭಾರಂಭಗೊಂಡಿತು. ಬೆಳ್ಳಾರೆ ಅಜಪಿಲಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ  ಉದಯಕುಮಾರ್ ಭಟ್ ರವರ ಗಣಪತಿ ಹವನದ ಮೂಲಕ ಈ ಸಂಸ್ಥೆಯು ಶುಭಾರಂಭಗೊಂಡಿತು. ಶುಭಾರಂಭದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸ್ವೀಟ್ ಐಟಂಗಳನ್ನು ನೀಡಲಾಗಿದೆ. ಸಭೆ ಸಮಾರಂಭಗಳಿಗೆ ಇಲ್ಲಿ...

ಅಜ್ಜಾವರ : ಗೋಪೂಜಾನಾ ಕಾರ್ಯಕ್ರಮ ಹಾಗೂ ಪಂಚಸಪ್ತತಿ 2025 ಸ್ವಚ್ಛತಾ ಅಭಿಯಾನ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕಾರ

ಚೈತ್ರ ಯುವತಿ ಮಂಡಲ ಅಜ್ಜಾವರ,ಪ್ರತಾಪ ಯುವಕ ಮಂಡಲ ಅಜ್ಜಾವರ,ಏಕದಂತ ಗಣೇಶೋತ್ಸವ ಸಮಿತಿ ಇವುಗಳ ಸಹಯೋಗದೊಂದಿಗೆ 5 ನೇ ವರ್ಷದ ಗೋಪೂಜನಾ ಕಾರ್ಯಕ್ರಮ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನ ಮಾವಿನಪಳ್ಳದಲ್ಲಿ ಅ. 23 ರಂದು ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಗುರುರಾಜ್ ವಹಿಸಿದ್ದರು.ಮುಖ್ಯ ಅತಿಥಿಯಾಗಿ ರಾಜೇಶ್ ಶೆಟ್ಟಿ ಮೇನಾಲ ರವರು ಗೋಪೂಜೆಯ ಮಹತ್ವವನ್ನು ತಿಳಿಸಿದರು.ಈ...

ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ  ಧನ ಸಹಾಯ ಹಸ್ತಾಂತರ

ಕಳೆದ ಮೂರು ವರುಷಗಳಿಂದ “ಕಮರಿದ ಕನಸು-ಮಿಡಿಯುವ ಮನಸ್ಸು” ಎಂಬ ಧ್ಯೇಯದೊಂದಿಗೆ ನವರಾತ್ರಿಯ ಒಂದು ದಿನ ವೇಷ ಧರಿಸಿ ಸಂಗ್ರಹಿಸಿದ ಧನವನ್ನು ಬಡ ಅಶಕ್ತ ಕುಟುಂಬಗಳಿಗೆ ನೀಡುತ್ತಾ ಬಂದಿರುವ  ಫ್ರೆಂಡ್ಸ್ ಬೆಳ್ಳಾರೆ ತಂಡವು ಈ ವರುಷ ಕಣ್ಣಿನ ಚಿಕಿತ್ಸೆಗಾಗಿ ಬೆಳ್ಳಾರೆ ಗ್ರಾಮದ ದರ್ಖಾಸ್ತು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಡ ಅಶಕ್ತ ಕುಟುಂಬವೊಂದಕ್ಕೆ ನೀಡಿರುತ್ತದೆ.ತಾಯಿ ಮತ್ತು ಇಬ್ಬರು...

ಪಂಜ ಹೋಬಳಿ ಸಾಹಿತ್ಯ ಸಮ್ಮೇಳನದ ಸಂಘಟನಾ ಸಮಿತಿ ಹಾಗೂ ಉಪಸಮಿತಿಗಳ ರಚನೆ ; ಸಂಘಟನಾ ಸಮಿತಿಯ ಗೌರವಾಧ್ಯಕ್ಷರಾಗಿ ಕು| ಭಾಗೀರಥಿ ಮುರುಳ್ಯ – ಅಧ್ಯಕ್ಷರಾಗಿ ವೆಂಕಟ್ ದಂಬೆಕೋಡಿ – ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಬಿ ಕೇಶವ ಹೊಸೊಳಿಕೆ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪಂಜ ಹೋಬಳಿ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ “ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ” ನಡೆಯಲಿದ್ದು, ಇದರ ಸಂಘಟನಾ ಸಮಿತಿ ಹಾಗೂ ಉಪಸಮಿತಿಗಳ ರಚನೆಯು ಇತ್ತೀಚೆಗೆ ನಡೆಯಿತು.ಸಂಘಟನಾ...

ನಡುಗಲ್ಲು : ಜವಾಹರ್ ಯುವಕ ಮಂಡಲದ ವತಿಯಿಂದ ಕ್ರೀಡಾ ಸಮವಸ್ತ್ರ ವಿತರಣೆ

ಜವಾಹರ್ ಯುವಕ ಮಂಡಲ(ರಿ.) ನಡುಗಲ್ಲು, ಇದರ ವತಿಯಿಂದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿನ ಕ್ರೀಡಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಯುವಕ ಮಂಡಲ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದವನಜಾಕ್ಷಿ ಮುತ್ಲಾಜೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವರಾಮ ಉತ್ರಂಬೆ, ಯುವಕ ಮಂಡಲದ ಅಧ್ಯಕ್ಷರಾದ ಕುಶನ್ ಉತ್ರಂಬೆ ಹಾಗೂ ಯುವಕ ಮಂಡಲದ ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ...

ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ವಿಶ್ವ ದಾಖಲೆ ಸಾಧನೆ ಮಾಡಿದ ಸುಳ್ಯದ ಮಹಮ್ಮದ್ ರುವೈದ್ ಗೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಂದ ಸನ್ಮಾನ

16 ವರ್ಷದ ವಯೋಮಾನದ ವಿಭಾಗ ದಲ್ಲಿ ಕ್ಯಾಲ್ಕುಲೇಟರ್ನಲ್ಲಿ 1 ರಿಂದ 10 ರ ವರೆಗೆ 10 ಬಾರಿ 42 ಸೆಕೆಂಡ್ಸ್ ಗಳಲ್ಲಿ ಅತೀ ವೇಗವಾಗಿ ಬಳಸಿ ಬುಕ್ಸ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಯ ಸಾಧನೆ ಮಾಡಿದ ಕೇರಳ ದ ಅಂತಾರಾಷ್ಟ್ರೀಯ ಶೈಕ್ಷಣಿಕ ಕೇಂದ್ರ ಪುನೂರ್ ಗಾರ್ಡನ್ ನ ವಿದ್ಯಾರ್ಥಿ ಸುಳ್ಯ ಜಟ್ಟಿಪ್ಪಳ್ಳ ನಿವಾಸಿ...
error: Content is protected !!