Ad Widget

ಬೆಳ್ಳಾರೆಯಲ್ಲಿ ಅ.24ರಂದು ಅಮ್ಮ ಸ್ವೀಟ್ಸ್ ಮತ್ತು ಬೇಕರಿ ಶುಭಾರಂಭ

ಬೆಳ್ಳಾರೆಯ ಕೆಳಗಿನ ಪೇಟೆ ಮುಖ್ಯರಸ್ತೆಯ ಬದಿಯಲ್ಲಿ ದಿನೇಶ್ ಬಾಳಿಲ ಮಾಲಕತ್ವದ ಅಮ್ಮ ಸ್ವೀಟ್ಸ್ ಮತ್ತು ಬೇಕರಿ ಅ.24 ರಂದು ಶುಭಾರಂಭಗೊಳ್ಳಲಿದೆ.ಇಲ್ಲಿ ರಖಂ ಹಾಗೂ ಚಿಲ್ಲರೆಯಾಗಿ ಸ್ವೀಟ್ಸ್ ಮತ್ತು ಬೇಕರಿ ಐಟಂಗಳು ಲಭ್ಯವಿದೆ. ಶುಭಾರಂಭದಂದು ತಿಂಡಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದುಮಾಲಕರು ತಿಳಿಸಿದ್ದಾರೆ.ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

ಬೆಳ್ಳಾರೆ ಜ್ಞಾನದೀಪ ಸಂಸ್ಥೆಯಿಂದ ನೂಜಿಬಾಳ್ತಿಲದ ಮರಿಯಾಳಮ್ ಸೇವಾಶ್ರಮದಲ್ಲಿ ದೀಪಾವಳಿ ಆಚರಣೆ

ಪ್ರತಿ ವರ್ಷ ವಿಭಿನ್ನ ಪರಿಕಲ್ಪನೆಯಲ್ಲಿ ದೀಪಾವಳಿ ಆಚರಿಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಈ ವರ್ಷ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಮತ್ತು ಇಂಟರ್ಯಾಕ್ಟ್ ಕ್ಲಬ್ ಜ್ಞಾನದೀಪ ಬೆಳ್ಳಾರೆಯ ಸಹಯೋಗದಲ್ಲಿ ಕಡಬ ಸಮೀಪದ ನೂಜಿಬಾಳ್ತಿಲ ಮರಿಯಾಳಮ್ ಸೇವಾಶ್ರಮದಲ್ಲಿರುವ ನಿರ್ಗತಿಕ ಮತ್ತು ಅನಾಥರ ಆಶ್ರಮಮ ವಾಸಿಗಳೊಂದಿಗೆ ಆಚರಿಸಲಾಯಿತು. ಆಶ್ರಮದ ಮುಖ್ಯ ಮೇಲ್ವಿಚಾರಕಿ ಸಿಸ್ಟರ್ ವೀಣಾ...
Ad Widget

ಮುಅಲ್ಲಿಂ ರಾಜ್ಯ ಪ್ರಶಸ್ತಿ ಪುರಸ್ಕೃತ ಲತೀಫ್ ಸಖಾಫಿ ಯವರಿಗೆ ಸೂಡ ಅಧ್ಯಕ್ಷರಿಂದ ಸನ್ಮಾನ

15 ವರ್ಷ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದ್ರಸ ದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ, ಕಳೆದ 2 ವರ್ಷಗಳಿಂದ ಜಟ್ಟಿಪ್ಪಳ್ಳ ಬುಸ್ತಾ ನುಲ್ ಉಲೂo ಮದ್ರಸ ದಲ್ಲಿ ಸದರ್ ಉಸ್ತಾದ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಇವರಿಗೆ ಇತ್ತೀಚೆಗೆ ಸಮಸ್ತ 100 ನೇ ವಾರ್ಷಿಕ ಸೆಂಟಿನರಿ ಸೆಲೆಬ್ರೇಷನ್ ಮುಅಲ್ಲಿಮ್ ಅವಾರ್ಡ್ ಅಂಗವಾಗಿ ಸುನ್ನೀ...

ಕಂದ್ರಪ್ಪಾಡಿ : ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ, ದೇವಚಳ್ಳ ಯುವಕ ಮಂಡಲ(ರಿ.), ಕಂದ್ರಪ್ಪಾಡಿ ಶೃತಿ ಯುವತಿ ಮಂಡಲ(ರಿ.), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂದ್ರಪ್ಪಾಡಿ ಹಾಗೂ ಅಂಗನವಾಡಿ ಕೇಂದ್ರ ಕಂದ್ರಪ್ಪಾಡಿ ಇವುಗಳ ಸಂಯುಕ್ತಾಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ.20 ರಂದು ಕಂದ್ರಪ್ಪಾಡಿ ಶಾಲಾ ಮೈದಾನದಲ್ಲಿ “ಗ್ರಾಮೀಣ ಕ್ರೀಡಾಕೂಟ” ನಡೆಯಿತು.ದೈವ ನರ್ತಕರಾದ ವಾಸು ಪರವ ಕಂದ್ರಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ದೇವಚಳ್ಳ ಯುವಕ...

ಕುಲ್ಕುಂದ : ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಗೋಪೂಜೆ ಹಾಗೂ ತಂಬಿಲ ಸೇವೆ

ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವಂತಹ ಗೋಪೂಜೆ ಹಾಗೂ ತಂಬಿಲ ಸೇವೆಗಳು ಅ.22 ರಂದು ನಡೆಯಿತು.ಈ ಸಂದರ್ಭದಲ್ಲಿ ವೇದಮೂರ್ತಿ ರಘುರಾಮ್ ಅಮ್ಮಣ್ಣಾಯ, ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
error: Content is protected !!