Ad Widget

ಸುಳ್ಯದ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಚಿನ್ನಾಭರಣಗಳ ಪ್ರತೀ ಪವನಿನ ಮೇಲೆ ರೂ.1,600 ರಿಯಾಯಿತಿ – ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ.100 ರಿಯಾಯಿತಿ

ಸುಳ್ಯದ ಮುಖ್ಯ ರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಕೃಷ್ಣ ಭಟ್ ಸನ್ಸ್‌ ಜ್ಯುವೆಲ್ಲರ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣ ಖರೀದಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗಿದ್ದು ಪ್ರತೀ ಪವನ್ ನ ಮೇಲೆ ರೂ. 1,600 ರಿಯಾಯಿತಿ ಹಾಗೂ ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ. 100 ರಿಯಾಯಿತಿ ನೀಡಲಾಗಿದೆ.
ಈ ರಿಯಾಯಿತಿ ಸೆ.22 ರಿಂದ ಅ.31 ರವರೆಗೆ ನಡೆಯಲಿದ್ದು ಹಲವಾರು ಜನ ಗ್ರಾಹಕರು ಚಿನ್ನಾಭರಣಗಳನ್ನು ಖರೀದಿಸುತ್ತಿದ್ದಾರೆ. ಚಿನ್ನಾಭರಣ ವ್ಯಾಪಾರದಲ್ಲಿ 33 ವರ್ಷಗಳ ಅನುಭವದೊಂದಿಗೆ ಸುಳ್ಯದಲ್ಲಿ ಮನೆ ಮಾತಾಗಿರುವ, ವ್ಯಾಪಾರದಲ್ಲಿ ನಂಬಿಕೆಗೆ ಹೆಸರುವಾಸಿಯಾದ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ರಿಯಾಯಿತಿ ನೀಡಲಾಗಿದೆ. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಜ್ರದ ಉಂಗುರ ಮತ್ತು ವಜ್ರದ ಓಲೆಗಳ ವಿಶೇಷ ಸಂಗ್ರಹವಿದೆ. ವಿಶಾಲವಾದ ಮಳಿಗೆಯಲ್ಲಿ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ.
ಗ್ರಾಹಕರಿಗೆ ಮಳಿಗೆಯ ಹಿಂಬದಿಯಲ್ಲಿ ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading