Ad Widget

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ “ನದಿ ಪೂಜನ ಕಾರ್ಯಕ್ರಮ”

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸೆ.22 ರಂದು ಸುಬ್ರಹ್ಮಣ್ಯದ ಕುಮಾರಧಾರದ ಬಳಿ “ನದಿ ಪೂಜನ ಕಾರ್ಯಕ್ರಮ” ನಡೆಯಿತು.ಶೇಷಪ್ಪ ಅಜಿಲ ಕೋಟೆಬೈಲು ದೀಪ ಪ್ರಜ್ವಲನೆಯ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಸುಬ್ರಹ್ಮಣ್ಯದ ಶ್ರೀವಲ್ಲಿ ಭಜನಾ ತಂಡ ಹಾಗೂ ಸುಖಪ್ರಧಾ ಭಜನಾ ತಂಡದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿಯ ಸಂಚಾಲಕರಾದ ಕಿಶೋರ್...

ಅಡ್ತಲೆ : ಚಂದನಾ ಮಹಿಳಾ ಮಂಡಲ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ಚಿದಾನಂದ ಅಡ್ತಲೆ, ಕಾರ್ಯದರ್ಶಿಯಾಗಿ ರೇಖಾ ಪ್ರವೀಣ್ ಬೆದ್ರುಪಣೆ

ಅಡ್ತಲೆಯಲ್ಲಿ ನೂತನವಾಗಿ ಚಂದನಾ ಮಹಿಳಾ ಮಂಡಲ ಸೆ.21 ಅಸ್ತಿತ್ವಕ್ಕೆ ಬಂದಿದ್ದು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.‌ನೂತನ ಅಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ಚಿದಾನಂದ ಅಡ್ತಲೆ, ಉಪಾಧ್ಯಕ್ಷರಾಗಿ ಯಶೋದ ಜಯರಾಮ ಅಡ್ತಲೆ, ಕಾರ್ಯದರ್ಶಿಯಾಗಿ ರೇಖಾ ಪ್ರವೀಣ್ ಬೆದ್ರುಪಣೆ, ಜತೆ ಕಾರ್ಯದರ್ಶಿಯಾಗಿ ಅಶ್ವಿನಿ ಅಜಿತ್ ಪಿಂಡಿಮನೆ, ಕೋಶಾಧಿಕಾರಿಯಾಗಿ ದಿವ್ಯ ಮೋಹನ್ ಅಡ್ತಲೆ ಆಯ್ಕೆಯಾದರು. ನಿರ್ದೇಶಕರಾಗಿ ಶಾಮಲಾ ಹರಿಪ್ರಸಾದ್ ಅಡ್ತಲೆ, ಸುಜಯ...
Ad Widget

ಸೆ.25 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮುಂಭಾಗ “ನ್ಯಾಯಕ್ಕಾಗಿ ಒಂದಾಗೋಣ ಸಮಿತಿ”ಯಿಂದ ಪ್ರತಿಭಟನೆ

ಭ್ರಷ್ಟಾಚಾರದ ವಿರುದ್ಧದ ಕೂಗಿನೊಂದಿಗೆ ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಜನರುಗಳ ಒಗ್ಗಟ್ಟಿನೊಂದಿಗೆ ರೂಪುಗೊಂಡ “ನ್ಯಾಯಕ್ಕಾಗಿ ಹೋರಾಡೋಣ” ಸಮಿತಿಯ ವತಿಯಿಂದ ಸೆ.25 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಲಿರುವುದು ಎಂದು ಹೋರಾಟ ಸಮಿತಿಯವರು ತಿಳಿಸಿದ್ದು, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಿಬ್ಬಂದಿ ಕಳವು ಆರೋಪದ ಬಗ್ಗೆ ಪೋಲೀಸ್ ದೂರು ನೀಡದೇ, ಸೂಕ್ತ ತನಿಖೆಯನ್ನು ನಡೆಸದೇ ಗ್ರಾಮ...

ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ದ.ರಾ. ಬೇಂದ್ರೆ ರಾಷ್ಟ್ರಪ್ರಶಸ್ತಿ ಪ್ರದಾನ

ಬೆಳಕು ಸಾಹಿತ್ಯಿಕ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ (ರಿ) ರಾಯಚೂರು ಇದರ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಸೆ:21 ರಂದು ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜರುಗಿತು.. ಇಲ್ಲಿ ನೀಡುವ ದ.ರಾ ಬೇಂದ್ರೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರ'ಸರಿಯಾಗಲಿ ಸಮಾಜ'ಎಂಬ ಕವನ ಆಯ್ಕೆಯಾಗಿದ್ದು 'ನೆನಪಿನ ಬುತ್ತಿ' ಸಂಪಾದಿತ ಕವನ ಸಂಕಲನದಲ್ಲೂ ಅದು ಸ್ಥಾನ ಪಡೆದಿರುವುದಕ್ಕೆ...

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ರಂಜಿಸಲಿದ್ದಾರೆ ಮಂಡೆಕೋಲು ಬಾಲಕಲಾವಿದರು – ಸೆ.23 ರಂದು ಅರಿವು ಕೇಂದ್ರದ ರಂಜಿನಿ ಮಕ್ಕಳ ಯಕ್ಷಗಾನ ಕಲಾ ತಂಡದಿಂದ ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶನ

ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಮಂಡೆಕೋಲು ಗ್ರಂಥಾಲಯದ ಅರಿವು ಕೇಂದ್ರದ ರಂಜಿನಿ ಮಕ್ಕಳ ಯಕ್ಷಗಾನ ಕಲಾ ತಂಡದ ಬಾಲ ಕಲಾವಿದರಿಂದ ಮಹಿಷ ಮರ್ಧಿನಿ ಎಂಬ ಯಕ್ಷಗಾನ ಸೆ.23 ರಂದು ಪ್ರದರ್ಶನಗೊಳ್ಳಲಿದೆ. ದೇಶ ಹಾಗೂ ವಿದೇಶಗಳಲ್ಲಿ ಪ್ರಸಿದ್ಧಿ ಪಡೆಚ ವಿಶ್ವವಿಖ್ಯಾತ ದಸರಾ ಕಾರ್ಯಕ್ರಮದಲ್ಲಿ ಬಾಲ ಕಲಾವಿದರಿಂದ ಯಕ್ಷಗಾನ ಪ್ರದರ್ಶಗೊಳ್ಳುತ್ತಿರುವುದು ಮಂಡೆಕೋಲು ಗ್ರಾಮಕ್ಕೂ ಸುಳ್ಯಕ್ಕೂ ಹೆಮ್ಮೆಯ...

ನಾರಾಯಣ ಕಾಮತ್ ಅಡ್ಡನಪಾರೆ ನಿಧನ

ದೇವಚಳ್ಳ ಗ್ರಾಮದ ಅಡ್ಡನಪಾರೆ ನಾರಾಯಣ ಕಾಮತ್ (65) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಮೃತರುಪತ್ನಿ ಲಲಿತ, ಪುತ್ರಿಯರಾದ ರೋಹಿಣಿ, ಶುಭಮಂಗಳ, ಪುತ್ರ‌ ದಯಾನಂದ ಕಾಮತ್, ಅಳಿಯಂದಿರು, ಮೊಮ್ಮಕ್ಕಳು, ಸಹೋದರರಾದ ಚಂದ್ರಶೇಖರ ಕಾಮತ್, ಪ್ರಭಾಕರ ಕಾಮತ್, ಸಹೋದರಿಯರಾದ ಪ್ರೇಮಲತಾ, ಗುಲಾಬಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಪೆರುವಾಜೆ ಜಲದುರ್ಗಾದೇವಿ ಕ್ಷೇತ್ರದಲ್ಲಿ  ನವರಾತ್ರಿ ಉತ್ಸವ ಮೊದಲ ದಿನ ; ಮುಕ್ಕೂರು ಶ್ರೀ ಉಳ್ಳಾಲ್ತಿ ಭಕ್ತವೃಂದದ ವತಿಯಿಂದ ಬಂಟಿಂಗ್ಸ್ ಅಳವಡಿಕೆಗೆ ಕರಸೇವೆ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ‌ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವ ಸೆ.21 ರಿಂದ ಪ್ರಾರಂಭಗೊಂಡಿದ್ದು, ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ವತಿಯಿಂದ ಕರಸೇವೆ ನಡೆಯಿತು.ರವಿವಾರ ರಾತ್ರಿ ರಥಬೀದಿಯ ಒಂದು ಬದಿಯಲ್ಲಿ ಬಂಟಿಂಗ್ಸ್ ಅಳವಡಿಕೆ ನಡೆಯಿತು.

ನಡುಗಲ್ಲು ಜವಾಹರ್ ಯುವಕ ಮಂಡಲಕ್ಕೆ 2024-25ನೇ ಸಾಲಿನ “ಗಮನಾರ್ಹ ಸಾಧನೆ ಮಾಡಿದ ಯುವಕ ಮಂಡಲ ಪ್ರಶಸ್ತಿ”

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಮಹಾಸಭೆಯಲ್ಲಿ ಅತ್ಯುತ್ತಮ ಯುವಕ ಹಾಗೂ ಯುವತಿ ಮಂಡಲಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮವು ಸೆ.20 ರಂದು ಯುವಜನ ಸಂಯುಕ್ತ ಮಂಡಳಿ ಸಭಾಭವನ ಯುವಸದನ ಸುಳ್ಯ ಇಲ್ಲಿ ನಡೆಯಿತು.ಈ ಸಂದರ್ಭದಲ್ಲಿ ನಡುಗಲ್ಲು ಜವಾಹರ್ ಯುವಕ ಮಂಡಲವು “2024-25ನೇ ಸಾಲಿನ ಗಮನಾರ್ಹ ಸಾಧನೆ ಮಾಡಿದ ಯುವಕ...

ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಸ. ಹಿ. ಪ್ರಾ. ಶಾಲೆ ಶೇಣಿ, ಚೊಕ್ಕಾಡಿಯಲ್ಲಿ ಹಸಿರು ಉಸಿರು ಕಾರ್ಯಕ್ರಮ

ಮಕ್ಕಳಿಗೆ ಪರಿಸರವನ್ನು ಪ್ರೀತಿಸುವ ಜೀವನ ಮೌಲ್ಯಗಳನ್ನು ಕಲಿಸಿ: ಅಶೋಕ್ ಚೂಂತಾರ್ ಶಾಲಾ ಆವರಣದಲ್ಲಿ ಹಣ್ಣಿನ ತೋಟ, ಔಷಧಿಯ ಸಸ್ಯೋದ್ಯಾನ ನಿರ್ಮಾಣ ಗಿಡಗಳ ಅತ್ಯುತ್ತಮ ಪೋಷಣೆಗೆ ಬಹುಮಾನ ಘೋಷಣೆ ಎನ್ನೆಂಸಿ, ಸೆ.22; ನೆಹರೂ ಸ್ಮಾರಕ ಪದವಿ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಶೇಣಿ ಶಾಲಾ ಅಭಿವೃದ್ಧಿ ಸಮಿತಿ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ...

ಸುಳ್ಯ ನಗರದ ಕಸಕ್ಕೆ ಮುಕ್ತಿ – ನಗರ ಪಂಚಾಯತ್ ಆವರಣದಲ್ಲಿ ರಾಶಿ ಬಿದ್ದಿದ್ದ ಕಸ ಈಗ ಖಾಲಿ ಖಾಲಿ –  ಕಸ ರಾಜಕೀಯಕ್ಕೆ ತೆರೆ ಎಳೆದ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದ್ರೆ

ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿರುವ ಶೆಡ್ ನಲ್ಲಿ ಹಲವಾರು ವರ್ಷಗಳಿಂದ ರಾಶಿ ಬಿದ್ದಿದ್ದ ಕಸಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ನಗರ ಪಂಚಾಯತ್ ಈಗಿನ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಪ್ರಯತ್ನದಿಂದ ಮೊದಲ ಬಾರಿಗೆ ಕಸ ಸಂಪೂರ್ಣ ಖಾಲಿಯಾಗಿದೆ. ಶಶಿಕಲಾ ನೀರಬಿದಿರೆ ಅಧ್ಯಕ್ಷರಾದ ಕೂಡಲೇ ಸುಳ್ಯದ ಕಸದ ಸಮಸ್ಯೆ ಪರಿಹಾರಕ್ಕೆ ಸಂಸದರು, ಶಾಸಕರು, ಮಂಡಲ ಅಧ್ಯಕ್ಷರು ಹಾಗೂ ಅಧಿಕಾರಿಗಳ...
Loading posts...

All posts loaded

No more posts

error: Content is protected !!