- Saturday
- March 7th, 2026
ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನ ಘಟಕದ 17 ನೇ ವಾರ್ಷಿಕ ವಿಶೇಷ ಶಿಬಿರ ಸೆ 20 ಶನಿವಾರದಂದು ಸರಕಾರಿ ಪ್ರೌಢ ಶಾಲೆ ಚೆಂಬು, ಮಡಿಕೇರಿ ಇಲ್ಲಿ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಗೋಪಾಲಕೃಷ್ಣ ಹೊಸೂರುರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಆರ್ ಗಂಗಾಧರ ಸಂಚಾಲಕರು...
ಸುಬ್ರಹ್ಮಣ್ಯ ಸೆಪ್ಟೆಂಬರ್ 27 : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಎಲ್ಲಾ ಸಂಘ-ಸಂಸ್ಥೆಗಳನ್ನು ಒಳಗೊಂಡಂತೆ ಸ್ವಚ್ಛತಾ ಕಾರ್ಯಕ್ರಮ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಶನಿವಾರ ಸುಬ್ರಹ್ಮಣ್ಯದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಪರಿಸರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಬಾಲಕಿಯರ ಹಾಸ್ಟೆಲಿನ ಸುಮಾರು 60ಕ್ಕೂ ಮಿಕ್ಕಿ ವಿದ್ಯಾರ್ಥಿನಿಯರು, ಹಾಸ್ಟೆಲ್ ವಾರ್ಡನ್, ಸಹಾಯಕಿಯರು, ಅಡುಗೆಯವರು, ಸುಬ್ರಹ್ಮಣ್ಯ...
ಅರಣ್ಯ ಇಲಾಖೆಯ ಜಾಗವನ್ನು ಅತಿಕ್ರಮಿಸಿರುವುದನ್ನು ತೆರವು ಮಾಡುವಂತೆ ಮೇಲ್ಮನವಿ ಪ್ರಾಧಿಕಾರ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವೃತ್ತದ ಆದೇಶದಂತೆ ಕಡಬ ತಾಲೂಕಿನ ಏನೆಕಲ್ಲು ಗ್ರಾಮದಲ್ಲಿ ಅತಿಕ್ರಮಿಸಲಾಗಿದ್ದ ಅರಣ್ಯ ಜಾಗವನ್ನು ಪಂಜ ವಲಯ ಅರಣ್ಯಾಧಿಕಾರಿಗಳು ತೆರವು ಮಾಡಿದ ಘಟನೆ ಸೆ.26 ಶುಕ್ರವಾರದಂದು ನಡೆದಿದೆ.ಕಡಬ ತಾಲೂಕಿನ ಏನೆಕಲ್ಲು ಗ್ರಾಮದಲ್ಲಿ ಕುಮಾರ್ ಪಿ. ಎಂಬವರು 1.44 ಎಕ್ರೆ ಮೀಸಲು ಅರಣ್ಯ...
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಪಂಜ ಹೋಬಳಿ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ “ಪಂಜ ಹೋಬಳಿ ಸಾಹಿತ್ಯ ಸಮ್ಮೇಳನ” ನಡೆಸುವ ಬಗ್ಗೆ ಅಕ್ಟೋಬರ್ 01 ಬುಧವಾರದಂದು ಪೂರ್ವಾಹ್ನ 10:30ಕ್ಕೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ಕರೆಯಲಾಗಿದ್ದು, ಪಂಜ ಕಂದಾಯ ಹೋಬಳಿಯ...
ದ. ಕ. ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಾಲ್ ಇದರ ಚೀಫ್ ಮೆಂಟರ್ ಜಯರಾಮ್ ರೈಪುರ್ ಹಾಗೂ ಮೆಂಬಶಿಫ್ ಡ್ರೈವ್ ಕೋ ಆರ್ಡಿನೇಟರ್ ಸಾಮ್ರಾಟ್ ಗೌಡ ಭೇಟಿ ನೀಡಿದರು. ಮಾಧುರಿ ಜೇನು ಹಾಗೂ ಜೇನು ಚಾಕಲೇಟ್ ಬಗ್ಗೆ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಜೇನು ಸೊಸೈಟಿಯ ಅಧ್ಯಕ್ಷರಾದ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಹಾಗೂ ಪೊಲೀಸ್ ಇಲಾಖೆ, ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮವು ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್...
ಮೂರ್ತೇದಾರರ ಸೇವಾ ಸಹಕಾರ ಸಂಘ ನಿಯಮಿತ ಆಲಂಕಾರು ಕಡಬ ತಾಲೂಕು ಇದರ ಬ್ಯಾಂಕಿಂಗ್ ವ್ಯವಹಾರದ ನೂತನ 5ನೇ ಶಾಖೆ ಬೆಳ್ಳಾರೆಯ ದೇವಿ ಹೈಟ್ಸ್ನಲ್ಲಿ ನಾಳೆ(ಸೆ 28) ಉದ್ಘಾಟನೆಗೊಳ್ಳಲಿದೆ.ಪೂ 7:30ಕ್ಕೆ ಮಹಾಗಣಪತಿ ಹೋಮ ಮತ್ತು ಲಕ್ಷ್ಮೀ ಪೂಜೆ, ಮಂಗಳಾರತಿ ಆಗಲಿದೆ.ಪೂ:10 ಘಂಟೆಗೆ ಬೆಳ್ಳಾರೆ ದೇವಿ ಹೈಟ್ಸ್ನ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಮೂರ್ತೇದಾರರ ಸೇವಾ ಸಹಕಾರ...
ಸುಬ್ರಹ್ಮಣ್ಯ, ಸೆ.26: ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಸೊತ್ತುಗಳು ಕಳವಾಗಿದ್ದು ಈ ಬಗ್ಗೆ ಪಂಚಾಯತ್ ನ ಉಪಾಧ್ಯಕ್ಷರ ಮೇಲೆ ಶಂಕೆ ವ್ಯಕ್ತಪಡಿಸಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.ಗ್ರಾಮ ಪಂಚಾಯತ್ ಪಿಡಿಒ ದೂರು ನೀಡಿದ್ದು, ಸೆ.25ರಂದು ಗ್ರಾಮ ಪಂಚಾಯತ್ ಚರಾಸ್ಥಿಗಳನ್ನು ಪರಿಶೀಲನೆ ಮಾಡುವಾಗ ಪಂಚಾಯತ್ ನ ಚರಾಸ್ಥಿಗಳಾದ ಹೆಡ್ಫೋನ್, ಧ್ವನಿವರ್ಧಕ ಸ್ಟ್ಯಾಂಡ್,...
ಸುಬ್ರಹ್ಮಣ್ಯ ಸೆಪ್ಟೆಂಬರ್ 26: ಸ್ವಚ್ಛತಾ ಹೀ ಸೇವಾ-ಸ್ವಚ್ಛತೆಯೇ ಸೇವೆ ಪಾಕ್ಷಿಕ-2025ರ ಅಭಿಯಾನ ಕಾರ್ಯಕ್ರಮದಡಿಯಲ್ಲಿ 10ನೇ ದಿನವಾದ ಇಂದಿನ ದಿನ ಶುಕ್ರವಾರದಂದು ಸುಬ್ರಹ್ಮಣ್ಯ ಗ್ರಾಮದ ಇಂಜಾಡಿ-ಕಲ್ಲಪಣೆಯಿಂದ ಮುಂದುವರಿದು ಸವಾರಿ ಮಂಟಪದಲ್ಲಿನ ಸೇತುವೆವರೆಗಿನ ಲೋಕೋಪಯೋಗಿ ಮುಖ್ಯ ರಸ್ತೆಯ ಬದಿಗಳಲ್ಲಿ ಹಾಗೂ ಅದರ ಸುತ್ತಮುತ್ತಲಿನ ವಠಾರವನ್ನು ಸಾಮೂಹಿಕ ಸ್ವಚ್ಛತಾ ಶ್ರಮದಾನದ ಮೂಲಕ ಶುಚಿತ್ವಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು-ಉಪಾಧ್ಯಕ್ಷರು-ಸದಸ್ಯರುಗಳು-ಪಂಚಾಯತ್...
ಸುಳ್ಯದ ಹೆಸರನ್ನು ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿಸಿದ ಮೇರು ಸಾಹಿತಿ ನಿರಂಜನರುವೆಂಕಟೇಶ ಪ್ರಭು ಸಮಾಜದ ಕಟು ಸತ್ಯಗಳನ್ನು ಅಕ್ಷರ ರೂಪಕ್ಕಿಳಿಸಿದ ಧೀಮಂತ ಸಾಹಿತಿ ನಿರಂಜನರುಅಶೋಕ್ ಕುಮಾರ್ ಮೂಲೆಮಜಲು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸುಳ್ಯದ ಸಾಹಿತಿ ನಿರಂಜನರ ಜನ್ಮ ಶತಮಾನೋತ್ಸವದ ಪ್ರಯುಕ್ತ "ನಿರಂಜನ ಬದುಕು - ಬರಹ: ನೆನಪು" ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಸಂಘ...
Loading posts...
All posts loaded
No more posts
