Ad Widget

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ರಚನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇದರ 2025-26ನೇ ಸಾಲಿನ ವಿದ್ಯಾರ್ಥಿ ಸಂಘ ರಚನೆ ಮಾಡಲಾಯಿತು.ಸಂಘದ ಅಧ್ಯಕ್ಷೆಯಾಗಿ  ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕುಮಾರಿ ನಿಶಾ ಗೌರಿ.ಎಂ, ಉಪಾಧ್ಯಕ್ಷರಾಗಿ ತೃತೀಯ ಬಿ.ಎ ವಿದ್ಯಾರ್ಥಿ ಕೀರ್ತನ್.ಬಿ.ಎಲ್ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಎಂ.ಕೆ ಆಯ್ಕೆಯಾಗಿದ್ದಾರೆ.

ದೇವರಗದ್ದೆ ಶಾರದೋತ್ಸವ ಸಾಂಸ್ಕೃತಿಕ ಸಂಜೆ ಉದ್ಘಾಟನೆ ; “ಯುವ ಜನಾಂಗದಲ್ಲಿ ಕಲಾ ಸಂಸ್ಕೃತಿಯ ಔನತ್ಯಕ್ಕೆ ಉತ್ಸವಗಳು ಅಡಿಗಲ್ಲು” : ಕೆ.ಯಜ್ಞೇಶ್ ಆಚಾರ್ ಅಭಿಮತ

ಸುಬ್ರಹ್ಮಣ್ಯ : "ಯುವ ಜನಾಂಗದಲ್ಲಿ ಕಲಾ ಸಂಸ್ಕೃತಿಯ ಔನತ್ಯಕ್ಕೆ ಉತ್ಸವಗಳು ಅಡಿಗಲ್ಲಾಗಿದೆ. ಆಧುನಿಕ ಜನತೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿಂಬಿಸುವ ಕಲಾ ಪ್ರಾಕಾರಗಳತ್ತ ಆಕರ್ಷಿತರಾಗಲು ಹಬ್ಬಾಚರಣೆಗಳು ಪ್ರೇರಣೆಯಾಗುತ್ತದೆ. ಅಲ್ಲದೆ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯೂ ಆಚರಣೆಗಳಿಂದ ದೊರಕುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಆನಂದ ನೀಡುವುದು ಮಾತ್ರವಲ್ಲದೆ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಸ್ಪೂರ್ತಿಯಾಗುತ್ತದೆ” ಎಂದು...
Ad Widget

ಸುಳ್ಯ : ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ "ಮಾನಸಿಕ ಆರೋಗ್ಯ ಜಾಗೃತಿ"ಕಾರ್ಯಕ್ರಮ ನಡೆಯಿತು.ಕಾಲೇಜಿನ ಪ್ರಾಂಶುಪಾಲರಾದ  ಅಣ್ಣಯ್ಯ.ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಆರೋಗ್ಯ ಕೇಂದ್ರದ  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ  ಪ್ರಮೀಳಾ ಟಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ  "ಹದಿಹರೆಯದಲ್ಲಿ ಉಂಟಾಗುವ ಮಾನಸಿಕ ಅಸಮತೋಲನ ಮತ್ತು ಅದರಿಂದ ಹೊರ ಬರುವ ಬಗ್ಗೆ" ಸಲಹೆಗಳನ್ನು ನೀಡಿದರು.ಸಮಾರಂಭದ ವೇದಿಕೆಯಲ್ಲಿ ಆಟೊಮೊಬೈಲ್ ವಿಭಾಗದ ಮುಖ್ಯಸ್ಥ...

ತಾರಸಿ ಕೃಷಿಕ ಕೃಷ್ಣಪ್ಪ ಗೌಡ ಪಡ್ಡಂಬೈಲ್ ಅವರಿಂದ ಭತ್ತದ ತೆನೆ ವಿತರಣೆ

ಮಂಗಳೂರು ಮರೋಳಿಯ ತಾರಸಿ ತೋಟದ "ಕೃಷಿ ತಜ್ಞ" ರಾಜ್ಯ ಪ್ರಶಸ್ತಿ ವಿಜೇತರಾದ ಕೃಷ್ಣಪ್ಪ ಗೌಡ ಪಡ್ಡಂಬೈಲ್ ಇವರ ತಾರಸಿ ತೋಟದಲ್ಲಿ ಬೆಳೆದ ಭತ್ತದ ತೆನೆಯನ್ನು ಭದ್ರಕಾಳಿ ಮತ್ತು ಗುಳಿಗಸಾನಿಧ್ಯ, ಪೆದಮಲೆ ಸರಿಪಲ್ಲ ನೀರುಮಾರ್ಗ ಮಂಗಳೂರು ಇಲ್ಲಿಗೆ ಕದಿರು ಕಟ್ಟಲು ಹಾಗೂ ಹೊಸ ಅಕ್ಕಿ ಊಟಕ್ಕೆ ಉಚಿತವಾಗಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಸಾನಿಧ್ಯದ ಸೇವಾ ಕಾರ್ಯಕರ್ತರಾದ ನಾಗೇಶ್...

ನಿವೃತ್ತ ಪ್ರಾಂಶುಪಾಲ  ಡಿ.ಎಸ್.ಕುಶಾಲಪ್ಪ ದೇವರಗುಂಡ ನಿಧನ

ನಿವೃತ್ತ ಪ್ರಾಂಶುಪಾಲ ಗಾಂಧಿನಗರ ನಿವಾಸಿ ದೇವರಗುಂಡ ಡಿ.ಎಸ್.ಕುಶಾಲಪ್ಪ ಸೆ.30 ರಂದು ನಿಧನರಾದರು. ಮೃತರ ಅಂತಿಮ ದರ್ಶನ ನಾಳೆ ಅಕ್ಟೋಬರ್ 01ರಂದು ಬುಧವಾರ ಬೆಳಿಗ್ಗೆ 10:30 ರಿಂದ 12:00 ರವರೆಗೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಏರ್ಪಡಿಸಲಾಗಿದ್ದು, ನಂತರ ಅವರ ಅಂತ್ಯ ಸಂಸ್ಕಾರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕವನ : ಹಣೆಯ ಬರಹ…

ಕಡಲ ಸೇರುವ ಆ ನದಿಯ ಹಣೆಯಲ್ಲಿ ಬರೆದಿರುವುದು “ನಿನ್ನ ಅಸ್ತಿತ್ವವೇ ಆ ಕಡಲು-ನೀ ಹೋಗಿ ಸೇರು ಅದರ ಒಡಲು” ಎಂದು...ಹಾಗೆಯೇ ನದಿಯಂತೆ ಸಾಗುವ ಈ ನಮ್ಮ ಬದುಕಿಗೂ ಇಹುದು ಅಂತಹುದೇ ಒಂದು ಕಡಲು, ಕೊನೆಗೊಂದು ದಿನ ನಾವೂ ಕೂಡ ಸೇರಲೇಬೇಕು ಅದರ ಒಡಲು...ಹಣೆಯ ಬರಹದಲ್ಲಿ ಬರೆದಂತೆ ಸಾಗುವ ಈ ನಮ್ಮ ಬದುಕಿನಲ್ಲಿ ಸುಖಾಸುಮ್ಮನೆ ಏತಕೆ ಈ...

ಬೆಳ್ಳಾರೆ : ಸಮಸ್ತ ಪ್ರಾರ್ಥನಾ ದಿನ

ಬೆಳ್ಳಾರೆಯ ಹಿದಾಯತುಲ್ ಇಸ್ಲಾಂ ಹೈಯರ್ ಸೆಖೆಂಡರಿ ಮದರಸದಲ್ಲಿ ಸಮಸ್ತ ಪ್ರಾರ್ಥನಾ ದಿನವನ್ನು ಸೆ 28ರಂದು ಬೆಳಿಗ್ಗೆ ಆಚರಿಸಲಾಯಿತು.ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಮುದರ್ರಿಸ್ ಮತ್ತು ಖತೀಬ್ ಬಹು:ನಸೀಹ್ ದಾರಿಮಿಯವರು ಪ್ರಾರ್ಥನೆಗೆ ನೇತೃತ್ವ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಯು.ಹೆಚ್ ಅಬೂಬಖರ್ ಅಧ್ಯಕ್ಷತೆ ವಹಿಸಿದ್ದರು.ಪುತ್ತೂರಿನ ಕಲ್ಲೇಗ ಜುಮುಅ: ಮಸೀದಿಯ ಖತೀಬ್...

ಚಿನ್ನಪ್ಪ ಗೌಡ ಪೂಜಾರಿಮನೆ ನಿಧನ

ಏನೇಕಲ್ಲು ಗ್ರಾಮದ ಪೂಜಾರಿಮನೆ ಚಿನ್ನಪ್ಪ ಗೌಡರು  ಸೆ.21ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಕರ್ನಾಟಕ ಸರಕಾರದ ವಿಧಾನಸೌಧದಲ್ಲಿ ಗಣ್ಯವ್ಯಕ್ತಿಗಳ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದು, ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರ ಚಾಲಕರಾಗಿಯೂ ಕರ್ತವ್ಯ ನಿರ್ವಹಿಸಿ 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಅವಿವಾಹಿತರಾಗಿದ್ದ ಇವರು ಅಣ್ಣ...

ಸುಳ್ಯ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇಂದೂ ಕೂಡ ಸರ್ವರ್ ಪ್ರಾಬ್ಲಂ –  ಓಟಿಪಿ ಬಾರದೆ ಸಾರ್ವಜನಿಕರು ಹಾಗೂ ಸಮೀಕ್ಷೆದಾರರ ಪರದಾಟ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಸುಳ್ಯದ ವಿವಿಧೆಡೆ ಇಂದು ಕೂಡ ಸರ್ವರ್ ಸಮಸ್ಯೆಯಿಂದ ಸಮೀಕ್ಷೆದಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಸರ್ವರ್ ಸಮಸ್ಯೆಯಿಂದ ಇಂದು ಓಟಿಪಿ ಸಿಗದೆ ಸಮೀಕ್ಷೆಗೆ ತೀವ್ರ ಹಿನ್ನಡೆಯಾಯಿತು. ಸಮೀಕ್ಷೆದಾರರಿಗೆ ಮೇಲಾಧಿಕಾರಿಗಳು ದಿನಕ್ಕೆ 100 ಸಮೀಕ್ಷೆಯಂತೆ ಗುರಿ ನೀಡಲಾಗಿದ್ದು, ಸಮೀಕ್ಷೆದಾರರು...

ಕೇಂದ್ರೀಯ ತೋಟಗಾರಿಕಾ  ಸಂಶೋಧನಾ ಸಂಸ್ಥೆ ಕಾಸರಗೋಡಿನಲ್ಲಿ ತೆಂಗಿನ ಸಸಿಗಳ ವಿತರಣೆ

ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಕಾಸರಗೋಡಿನಲ್ಲಿ ಇದೀಗ ಎರಡು ವರ್ಷದ ಹಿಂದಿನ ವಿವಿಧ ರೀತಿಯ ತೆಂಗಿನ ಸಸಿಗಳನ್ನು ಸುಮಾರು ಮಾರ್ಕೆಟಿನ ಅರ್ಧ ರೇಟಿಗೆ ಮಾರಾಟ ಮಾಡಲಾಗುವುದೆಂದು ಸಂಶೋಧನಾ ಸಂಸ್ಥೆಯ ಪ್ರಕಟಣೆ ತಿಳಿಸಿರುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯೊಂದಿಗೆ ದಾಸ್ತಾನು ಮುಗಿಯುವವರೆಗೆ ಮಾರಾಟವಿರುತ್ತದೆ ಎಂದು ತಿಳಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
Loading posts...

All posts loaded

No more posts

error: Content is protected !!