Ad Widget

ಸುಳ್ಯದಲ್ಲಿ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳಿಗೆ “ಆದರ್ಶ ಜೇನು ಕೃಷಿ ದಂಪತಿ” ಪ್ರಶಸ್ತಿ ಪ್ರಧಾನ

ಜೇನು ಕೃಷಿಕರಾದ ಕುಮಾರ್ ಪೆರ್ನಾಜೆ ಮತ್ತು ಸೌಮ್ಯ ದಂಪತಿ ಹಲವಾರು ವರ್ಷಗಳಿಂದ ಜೇನು ಕೃಷಿ ಬರಹದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಆದರ್ಶ ಜೇನು ಕೃಷಿ ದಂಪತಿ" ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ನಾರಾಯಣ್ ರೈ ಕುಕ್ಕುವಳ್ಳಿ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷರಾದ ಎಚ್ ಭೀಮರಾವ್ ವಾಷ್ಠರ್ ಕೋಡಿಪಾಳ ಆ.3ರಂದು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ...

ರಚನ್ ಪಾಡಾಜೆ ಐಐಎಂ ಎಂಬಿಎ ಪ್ರವೇಶಕ್ಕೆ ಆಯ್ಕೆ

ದೇಶದ ಪ್ರತಿಷ್ಠಿತ ನಿರ್ವಹಣಾ ಅಧ್ಯಯನ ಕೇಂದ್ರವಾದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ಅಮರಪಡ್ನೂರು ಗ್ರಾಮದ ಪಾಡಾಜೆಯ ರಚನ್ ಕಲ್ಕತ್ತಾ ಐಐಎಂ ಸಂಸ್ಥೆಯಲ್ಲಿ ಎಂಬಿಎ ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ.ಐಐಎಂ ಸಂಸ್ಥೆಯು ಎಂಬಿಎ ಅಧ್ಯಯನಕ್ಕೆ ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಟಾಪ್ 3 ಸಂಸ್ಥೆಯಲ್ಲಿ ಆಯ್ಕೆಯಾಗಿರುವ ರಚನ್ ಪಾಡಾಜೆ...
Ad Widget

ಎಲಿಮಲೆ : ವಿದ್ಯುತ್ ಶಾಕ್ – ಪವರ್ ಮ್ಯಾನ್ ಗೆ ಗಂಭೀರ ಗಾಯ

ಎಲಿಮಲೆಯ ಜಬಳೆ ಬಳಿ ವಿದ್ಯುತ್ ದುರಸ್ತಿ ಮಾಡುತ್ತಿದ್ದಾಗ ಮೆಸ್ಕಾಂ ಪವರ್ ಮ್ಯಾನ್ ಸತೀಶ್ ಎಂಬವರಿಗೆ ಶಾಕ್ ತಗುಲಿದ ಘಟನೆ ವರದಿಯಾಗಿದೆ. ಶಾಕ್ ಗೊಳಗಾಗಿ ಕೆಳಗೆ ಬಿದ್ದು ಗಾಯಗೊಂಡ ಅವರನ್ನು ಸ್ಥಳೀಯರು ಅವರನ್ನು ಸುಳ್ಯದ ಕೆ. ವಿ.ಜಿ. ತಂದು ದಾಖಲಿಸಿರುವುದಾಗಿ ತಿಳಿದುಬಂದಿದೆ. ಟಿಸಿ ಕೆಲಸಕ್ಕೆ ಕಂಬ ಹತ್ತಿದ್ದ ವೇಳೆ ಶಾಕ್ ತಗುಲಿ ಕೆಳಕ್ಕೆ ಬಿದ್ದಿದ್ದನ್ನು ಸ್ಥಳೀಯರಾದ ಗಣೇಶ್,...

ಪೈಕ : ಒಡಿಯೂರು ಗ್ರಾಮ ವಿಕಾಸದ ಗುತ್ತಿಗಾರು ಘಟ ಸಮಿತಿಯಿಂದ ಸ್ವಚ್ಛತಾ ಕಾರ್ಯ

ಒಡಿಯೂರು ಶ್ರೀ ಗ್ರಾಮ ವಿಕಾಸ ಗುತ್ತಿಗಾರು ಘಟ ಸಮಿತಿ, ಗ್ರಾಮ ಪಂಚಾಯತ್ ಗುತ್ತಿಗಾರು, ಆರೋಗ್ಯ ಇಲಾಖೆ ಗುತ್ತಿಗಾರು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸಮಿತಿ ಗುತ್ತಿಗಾರು, ಶಾಲಾ ಮೇಲುಸ್ತುವರಿ ಸಮಿತಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈಕ ಶಾಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆ.03 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈಕದಲ್ಲಿ...

ಜಟ್ಟಿಪಳ್ಳ :  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಕಪಿಲ ಯುವಕ ಮಂಡಲ ಜಟ್ಟಿಪಳ್ಳ ಮತ್ತು ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ಇದರ ಜಂಟಿ ಆಶ್ರಯದಲ್ಲಿ ನಡೆಯುವ 37ನೇ ವರುಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆ ಯಲ್ಲಿ ನಡೆಯಿತು.ಈ ಸಂಧರ್ಭದಲ್ಲಿ ಶ್ರಿ ರಾಮ ಭಜನಾ ಸೇವಾ ಸಂಘದ ಅಧ್ಯಕ್ಷರಾದ ಶ್ರಿ ಹರೀಶ್ಚಂದ್ರ ಎಂ....

ಅರಂತೋಡು : ಒಡಿಯೂರು ಶ್ರೀಗಳ ಜನ್ಮದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀಗಳಾದ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನದ ಪ್ರಯುಕ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಆ.03 ರಂದು ನಡೆಯಿತು.‌ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಅರಂತೋಡು ಪೇಟೆಯ ತೊಡಿಕಾನ ದೇವಸ್ಥಾನದ ದ್ವಾರದ ಬಳಿಯಿಂದ  ದೇವಸ್ಥಾನದ ವರೆಗಿನ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಲಾಯಿತು.ಸ್ವಚ್ಛತಾ ಕಾರ್ಯಕ್ರಮ ದಲ್ಲಿ ತೊಡಿಕಾನ ವಲಯದ ಓಡಿಯೂರು ಸಂಘದ...

ಏನೆಕಲ್ಲು : ಕಲಾಮಾಯೆ ವತಿಯಿಂದ 4ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ

ಕಲಾಮಾಯೆ ಸಾಂಸ್ಕೃತಿಕ ವಿದ್ಯಾ ಸಂಸ್ಥೆ(ರಿ.) ಏನೆಕಲ್ ಇದರ ವತಿಯಿಂದ 4ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ ಆ.17 ರಂದು ಎನೆಕಲ್ಲಿನ ಶ್ರೀ ಆದಿಶಕ್ತಿ ಭಜನಾ ಮಂದಿರ ಬಾಲಾಡಿಯಲ್ಲಿ ನಡೆಯಲಿದೆ. ಹಾಗೂ ಶ್ರೀ ಆದಿಶಕ್ತಿ ಭಜನಾ ಮಂದಿರ(ರಿ.) ಏನೆಕಲ್ ವತಿಯಿಂದ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಆ.12ರ ಒಳಗೆ ಹೆಸರು ನೋಂದಾಹಿಸಿಕೊಳ್ಳಬೇಕೆಂದು...

ಯೋಗೇನ ಚಿತ್ತಸ್ಯ ಯೋಗ ಕೇಂದ್ರ ವಿದ್ಯಾರ್ಥಿಗಳು 9 ಚಿನ್ನ,4 ಬೆಳ್ಳಿ, 1 ಕಂಚಿನ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಮಂಗಳೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ ಜಂಟಿ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯು ಜುಲೈ 20 ರಂದು ಮಂಗಳೂರಿನ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.10 ರಿಂದ 14ರ ವಯೋಮಿತಿಯ ಸಬ್ ಜೂನಿಯರ್...

ಸುಳ್ಯ, ಬೆಳ್ಳಾರೆ ಭಾಗದ ವಿವಿಧೆಡೆ ನಾಳೆ(ಆ.05) ವಿದ್ಯುತ್ ವ್ಯತ್ಯಯ

110/33/11ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ನಿಯತಕಾಲಿಕ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಆ.05 ಮಂಗಳವಾರದಂದು ಪೂರ್ವಾಹ್ನ 10:00 ರಿಂದ ಸಾಯಂಕಾಲ 4.00 ಗಂಟೆಯವರೆಗೆ 33ಕೆ.ವಿ ಮಾಡಾವು-ಬೆಳ್ಳಾರೆ, 33ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು, 33ಕೆವಿ ಮಾಡಾವು-ಕಾವು ಮತ್ತು 33ಕೆವಿ ಮಾಡಾವು-ಸುಳ್ಯ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11ಕೆವಿ ಮಾಡಾವು ಹಾಗೂ 33/11ಕೆವಿ ಬೆಳ್ಳಾರೆ, ಗುತ್ತಿಗಾರು, ಕಾವು ಮತ್ತು ಸುಳ್ಯ...

ಮರಕತ ಏನೆಕಲ್ಲು ರಸ್ತೆಯಲ್ಲಿ ಹೊಳೆಬದಿ ರಸ್ತೆ ಕುಸಿತ

ಮರಕತ ದೇವಸ್ಥಾನದ ಸಮೀಪದಿಂದ ಏನೆಕಲ್ಲು ಸಂಪರ್ಕಿಸುವ ರಸ್ತೆಯಲ್ಲಿ ಸೇತುವೆ ಬಳಿ ರಸ್ತೆ ಕುಸಿತ ವಾಗಿದೆ.  ಹೊಳೆ ಬದಿಯಾಗಿರುವುದರಿಂದ ವಾಹನ ಸವಾರ ಎಚ್ಚರಿಕೆ ವಹಿಸಬೇಕಿದೆ.‌ ಸಂಬಂಧಪಟ್ಟವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
Loading posts...

All posts loaded

No more posts

error: Content is protected !!