Ad Widget

ಸುಬ್ರಹ್ಮಣ್ಯದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ಶಿಬಿರ ಉದ್ಘಾಟನೆ

ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ನೇತೃತ್ವದಲ್ಲಿ, ಸುಬ್ರಹ್ಮಣ್ಯ ಪ್ರೆಸ್‌ ಕ್ಲಬ್‌, ರೋಟರಿ ಕ್ಲಬ್‌ ಸುಬ್ರಹ್ಮಣ್ಯ, ರೋಟರಿ ಕ್ಲಬ್‌ ಸೆಂಟ್ರಲ್‌ ಮಂಗಳೂರು ಹಾಗೂ ಟೀಮ್‌ ಈಶ್ವರ ಮಲ್ಪೆ ಇವರ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರ ವಿತರಣೆ ಶಿಬಿರವನ್ನು ಶನಿವಾರ ಶ್ರೀ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಉದ್ಘಾಟಿಸಲಾಯಿತು.
ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ದೀಪಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು.
ಶಿಬಿರವು ಎರಡು ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರು ಉಚಿತವಾಗಿ ಕಿವಿಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಅವಕಾಶವಿದೆ.
ಶ್ರವಣದ ಮಹತ್ವ ಕುರಿತು ಶ್ರೀಪಾದರ ಸಂದೇಶ : “ಮಾನವನ ಬುದ್ಧಿ ವಿಕಸನಕ್ಕೆ ಕಿವಿ ಮತ್ತು ಕಣ್ಣು ಪ್ರಮುಖ. ಇಂದಿನ ದಿನಗಳಲ್ಲಿ ಶಬ್ದಮಾಲಿನ್ಯ ಹಾಗೂ ಹೆಡ್ ಫೋನ್‌ಗಳ ಅತಿಯಾದ ಬಳಕೆಯಿಂದ ಯುವಜನರಲ್ಲಿಯೇ ಶ್ರವಣ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ” ಎಂದು ಶ್ರೀಪಾದರು ತಿಳಿಸಿದರು.
ಕಿವಿಯ ಸಮಸ್ಯೆ ಕುರಿತು ತಜ್ಞರ ಎಚ್ಚರಿಕೆ : “ಕಿವಿಯ ಸಮಸ್ಯೆ ಯಾವುದೇ ವಯಸ್ಸಿನವರಲ್ಲೂ ಕಾಣಿಸಿಕೊಳ್ಳಬಹುದು. ಅತಿಯಾದ ಶಬ್ದಸ್ಪರ್ಶದಿಂದ ಕಿವಿಯ ಒಳಪದರದಲ್ಲಿ ಪೊರೆ, ಸೋರುವಿಕೆ, ಮೂಳೆಮುರಿತ ಮತ್ತು ನರದೌರ್ಬಲ್ಯ ಉಂಟಾಗಬಹುದು. ನರದೌರ್ಬಲ್ಯ ಉಂಟಾದಲ್ಲಿ ಮದ್ದು ಅಥವಾ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಲಾಗದು. ಆದ್ದರಿಂದ ಪ್ರಾಥಮಿಕ ಹಂತದಲ್ಲೇ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ,” ಎಂದು ಶ್ರವಣ ತಜ್ಞ ಡಾ. ಪವನ್‌ ಬೆಂಗಳೂರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ್‌, ಡಾ.ಪವನ್‌, ರೋಟರಿ ಮಂಗಳೂರು ಸೆಂಟ್ರಲ್‌ನ ಅನಿಲ್‌, ರೋಟರಿ ಕ್ಲಬ್‌ ಸುಬ್ರಹ್ಮಣ್ಯದ ಅಧ್ಯಕ್ಷ ಜಯಪ್ರಕಾಶ್‌, ಸುಬ್ರಹ್ಮಣ್ಯ ಪ್ರೆಸ್‌ ಕ್ಲಬ್‌ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ ಸೇರಿದಂತೆ ಗಣ್ಯರು
ಉಪಸ್ಥಿತರಿದ್ದರು.
ಪತ್ರಕರ್ತ ಲೋಕೇಶ್‌ ಬಿ.ಎನ್‌, ಪ್ರೆಸ್‌ ಕ್ಲಬ್‌ ಕಾರ್ಯದರ್ಶಿ ಸಂತೋಷ್‌ ಸುಬ್ರಹ್ಮಣ್ಯ, ನಿರ್ದೇಶಕ ಶಿವ ಭಟ್‌, ಶ್ರೀಮಠದ ಸಿಬ್ಬಂದಿ ರವೀಂದ್ರ ಭಟ್‌ ಸೇರಿದಂತೆ ಗ್ರಾಮದ ಹಲವರು ಶಿಬಿರದ ಆಯೋಜನೆಗೆ ಸಕ್ರಿಯವಾಗಿ ಸಹಕರಿಸಿದರು.
ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಪ್ರೆಸ್‌ ಕ್ಲಬ್‌ ಸ್ಥಾಪಕಾಧ್ಯಕ್ಷ ವಿಶ್ವನಾಥ್‌ ನಡುತೋಟ ನಿರೂಪಿಸಿದರು. ಕೊನೆಯಲ್ಲಿ ಪ್ರೆಸ್‌ ಕ್ಲಬ್‌ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading