Ad Widget

ಪೈಚಾರ್ ಪರಿಸರದಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ – ಆತಂಕದಲ್ಲಿ ಸಾರ್ವಜನಿಕರು

ಪೈಚಾರ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ಹೋಗುವಾಗ, ಸಾರ್ವಜನಿಕರು ನಡೆದಾಡುವ ಭಯದಲ್ಲಿ ಸಂಚರಿಸುವಂತಾಗಿದೆ.  ಈಗಾಗಲೇ ಐದಾರು ಮಂದಿ ನಾಯಿಗಳಿಂದ ಕಚ್ಚಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೈಚಾರ್ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು, ಹೋಟೆಲ್‌ ಸಮೀಪ ನಾಯಿಗಳ ದಂಡು ಬೀಡು ಬಿಟ್ಟಿರುತ್ತದೆ. ಈ ಪ್ರದೇಶಗಳಲ್ಲಿ ಜನ ಓಡಾಡಲು ಭಯಪಡುತ್ತಾರೆ....

ಅಡ್ಕಾರ್ ಎಲೆಕ್ಟ್ರಾನಿಕ್ಸ್ 30ನೇ ವರ್ಷಕ್ಕೆ ಪಾದಾರ್ಪಣೆ ಅಂಗವಾಗಿ ಸಂಸ್ಥೆಯಲ್ಲಿ ಗಣಪತಿ ಹವನ

ಸುಳ್ಯ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆ ಅಡ್ಕಾರ್ ಎಲೆಕ್ಟ್ರಾನಿಕ್ಸ್ ಯಶಸ್ವಿಯಾಗಿ 30 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಇದರ ಅಂಗವಾಗಿ ಸಂಸ್ಥೆಯಲ್ಲಿ ಗಣಪತಿ ಹವನ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್, ಚೈತ್ರಾ ದಿನೇಶ್ ಅಡ್ಕಾರ್, ರಾಹಿ ಅಡ್ಕಾರ್, ರಿಯಾ ಅಡ್ಕಾರ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Ad Widget

ಸುಳ್ಯ ನಗರ ಪಂಚಾಯತ್‌ಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ – ಕಸದ ಸಮಸ್ಯೆ ಬಗ್ಗೆ  ಸಮಾಲೋಚನೆ

ಸುಳ್ಯ ನಗರ ಪಂಚಾಯತ್‌ ಗೆ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ರವರು ಭೇಟಿ ನೀಡಿದರು. ನಗರ ಪಂಚಾಯತ್ ನ ಕಸದ ರಾಶಿಯನ್ನು ಅವರು ವೀಕ್ಷಿಸಿದರು. ಕಸದ ಸಮಸ್ಯೆ ಬಗ್ಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷರಾದ ಬುದ್ಧ ನಾಯ್ಕ, ಸದಸ್ಯರುಗಳಾದ ಕಿಶೋರಿ ಶೇಟ್,...

ಆರಾಧ್ಯ.ಎಸ್ ಭಟ್ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯಕ್ಕೆ ಪ್ರಥಮ ಸ್ಥಾನ

ಸುಬ್ರಹ್ಮಣ್ಯ ಮೂಲದ ಶಂಕರ ಭಟ್ ಹಾಗೂ ಪೂರ್ಣಿಮಾ ದಂಪತಿಗಳ ಪುತ್ರಿ ಆರಾಧ್ಯ.ಎಸ್ ಭಟ್ ಅವರು ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ.95 ಅಂಕಗಳನ್ನು ಗಳಿಸಿ ಸುಬ್ರಹ್ಮಣ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ಪುತ್ತೂರಿನ ಖ್ಯಾತ ನೃತ್ಯಗುರು ಶಾಲಿನಿ ಆತ್ಮಭೂಷಣ ಅವರ ಶಿಷ್ಯೆಯಾಗಿರುವ ಆರಾಧ್ಯ.ಎಸ್ ಭಟ್ ಅವರು ಹಲವು ವರ್ಷಗಳಿಂದ ಭರತನಾಟ್ಯ ಕಲೆಯನ್ನು ಅಭ್ಯಾಸ ಮಾಡುತ್ತಾ ತಮ್ಮ ಪರಿಶ್ರಮ ಮತ್ತು ಕಲಾಪ್ರತಿಭೆಯಿಂದ...

ಕಾಫಿ ಬೋರ್ಡ್ ಅಧ್ಯಕ್ಷರು ಹಾಗೂ ಅಧಿಕಾರಿಗಳು ಜೇನು ಸಂಸ್ಕರಣ ಘಟಕಕ್ಕೆ ಭೇಟಿ

ಸುಳ್ಯದಲ್ಲಿ ಕಾಫಿ ಕೃಷಿಯ ಬಗ್ಗೆ ನಡೆದ ಕಾಪಿಕೊ ಕಾರ್ಯಕ್ರಮ ಉದ್ಘಾಟನೆ ಮತ್ತು ಕಾರ್ಯಾಗಾರಕ್ಕೆ ಆಗಮಿಸಿದ್ದ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ಎಂ.ಜೆ, ಕಾಫಿ ಬೋರ್ಡ್ ಎಂ.ಡಿ ಡಾ| ವಿ‌.ಚಂದ್ರಶೇಖರ್, ಸೆವೆನ್ ಬೀನ್ ಟೀಂ ಅಧ್ಯಕ್ಷ ಪ್ರದೀಪ್, ಚೇರ್ ಮೆನ್ ಡಾ.ಧರ್ಮರಾಜ್ ಹಾಗೂ ಕಾಫಿ ಮಂಡಳಿಯ ಇತರ ಅಧಿಕಾರಿಗಳ ತಂಡ ಸುಳ್ಯ ಜೇನು ಉತ್ಪಾದಕರ ಸಹಕಾರಿ ಸಂಘದ...

ಆ.27 ರಿಂದ 29 ರವರೆಗೆ  ಹಳೇಗೇಟು ಗಣೇಶೋತ್ಸವ – ಆ.29 ರಂದು ಭವ್ಯ ಶೋಭಾಯಾತ್ರೆ

ಸಾಂಸ್ಕೃತಿಕ ಸಂಘ ಹಳಗೇಟು, ಸುಳ್ಯ ಇದರ ಆಶ್ರಯದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವು ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಅಗಸ್ಟ್ 27ರಂದು ಬೆಳಿಗ್ಗೆ 7:00 ಗಂಟೆಗೆ ಸ್ಥಳ ಶುದ್ದಿ, ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಂಜೆ ಗಂಟೆ 6:00...

ಸುಶ್ಮಿತಾ ಎಂ.ಎ ಗಡಿ ಭದ್ರತಾ ಪಡೆಗೆ ಆಯ್ಕೆ

ಅರಂತೋಡು ಗ್ರಾಮದ ಮೇಲಡ್ತಲೆ ಸುಶ್ಮಿತಾ ಎಂ.ಎ ಗಡಿ ಭದ್ರತಾ ಪಡೆಗೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.  ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಎಸ್.ಎಸ್.ಸಿ ಜಿ.ಡಿ ಎಕ್ಸಾಮ್ ನಲ್ಲಿ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದಾರೆ.ಇವರು ಅರಂತೋಡು ಗ್ರಾಮದ ಅಡ್ತಲೆ ದಿ.ನಾಗಪ್ಪ ಎಂ.ಎಂ ಮತ್ತು ಜಾನಕಿ ದಂಪತಿಗಳ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಡ್ತಲೆ,...

ಸುಳ್ಯ : ಕಾಫಿ ಬೆಳೆಗೆ ಪ್ರೋತ್ಸಾಹ ನೀಡುವ “ಕಾಪಿಕೊ” ಕಾರ್ಯಗಾರ ಉದ್ಘಾಟಿಸಿದ ಸಂಸದ ಬ್ರಿಜೇಶ್ ಚೌಟ

https://youtu.be/rLTT0umkzRc?si=J4QvNec2i5KJKm_0 ಅಡಿಕೆ ಬೆಳೆಗೆ ಹಳದಿ ರೋಗ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಬೆಳೆಗೆ ಉತ್ತೇಜನ ನೀಡಲು "ಕಾಪಿಕೊ ಕಾರ್ಯಗಾರ" ಹಮ್ಮಿಕೊಳ್ಳಲಾಗಿದ್ದು, ಆ.25 ರಂದು ಸುಳ್ಯದ ಸಿಎ ಬ್ಯಾಂಕ್ ನ ಎ.ಎಸ್.ವಿಜಯಕುಮಾರ್ ಸಭಾಭವನದಲ್ಲಿ ಅಯೋಜನೆಗೊಂಡ ಕಾರ್ಯಕ್ರಮವು ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್...

ಮನೆಯ ಸುಂದರ ಕನಸುಗಳ ಸಾಕಾರಗೊಳಿಸಲು ಅಡ್ಕಾರ್ ಎಲೆಕ್ಟ್ರಾನಿಕ್ಸ್ ನಲ್ಲಿ ಸುವರ್ಣಾವಕಾಶ – ಆಗಸ್ಡ್ 25 ರಿಂದ ಸೆಪ್ಟೆಂಬರ್ 07 ರವರೆಗೆ ಅಡ್ಕಾರ್ ಮಹೋತ್ಸವ – ಬಂಪರ್ ಬಹುಮಾನ, ಸ್ಕ್ರಾಚ್ ಕಾರ್ಡ್, ವೀಕ್ಲಿ ಪ್ರೈಜ್ ಗೆಲ್ಲಲು ಇಂದೇ ಭೇಟಿ ಕೊಡಿ

ಸುಳ್ಯದಲ್ಲಿ ಕಳೆದ 29 ವರ್ಷಗಳಿದ ಜನರ ವಿಶ್ವಾಸಗಳಿದ ಪ್ರಸಿದ್ಧ ಎಲೆಕ್ಟ್ರಾನಿಕ್ ಹಾಗೂ ಫರ್ನಿಚರ್ ಸಂಸ್ಥೆ ಅಡ್ಕಾರ್ ಎಲೆಕ್ಟ್ರಾನಿಕ್ಸ್ 30 ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆಯಲ್ಲಿ ಆಗಸ್ಟ್ 25 ರಿಂದ ಸೆಪ್ಟೆಂಬರ್ 7ರವರೆಗೆ ಅಡ್ಕಾರ್ ಮಹೋತ್ಸವ ಆರಂಭಗೊಂಡಿದೆ.ಬಂಪರ್ ಬಹುಮಾನ :ಅಡ್ಕಾರ್ ಮಹೋತ್ಸವದ ಅಂಗವಾಗಿ ಖರೀದಿಯ ಮೇಲೆ ಬಂಪರ್ ಬಹುಮಾನಗಳ ಯೋಜನೆ ರೂಪಿಸಲಾಗಿದ್ದು, ಪ್ರಥಮ ಬಹುಮಾನವಾಗಿ ಬೆಡ್ ರೂಂ...

ಕಾಫಿ ಕೃಷಿ ಉತ್ತೇಜಿಸಲು ಸಂಸದ ಬ್ರಿಜೇಶ್ ಚೌಟ ರ ನೇತೃತ್ವದಲ್ಲಿ ಒಂದು ವಿನೂತನ ಪ್ರಯತ್ನ – ಇಂದು (ಆ.25) ಕಾಪಿಕೊ (Kaapico) ಉದ್ಘಾಟನೆ ಮತ್ತು ಕಾರ್ಯಾಗಾರಕ್ಕೆ ಚಾಲನೆ – ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ವೆಂಕಟ್ ವಳಲಂಬೆ ಮನವಿ

ದಕ್ಷಿಣ ಕನ್ನಡದಲ್ಲಿ ಕಾಫಿ ಕೃಷಿ ಉತ್ತೇಜಿಸಲು ಸಂಸದ ಬ್ರಿಜೇಶ್ ಚೌಟ ರ ನೇತೃತ್ವದಲ್ಲಿ ಒಂದು ವಿನೂತನ ಪ್ರಯತ್ನ ಮಾಡಲಾಗಿದ್ದು ಇದರ ಅಂಗವಾಗಿ ಇಂದು ( ಆ.25) ಬೆಳಿಗ್ಗೆ 10 ಗಂಟೆಗೆ ಕಾಪಿಕೊ (Kaapico) ಉದ್ಘಾಟನೆ ಮತ್ತು ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ ಈ ಸಂದರ್ಭದಲ್ಲಿ ಶಾಸಕಿ ಕು ಭಾಗೀರಥಿ ಮುರುಳ್ಯ, ಕಾಫಿ ಬೋರ್ಡ್ ಚಯರ್ ಮ್ಯಾನ್ ದಿನೇಶ್...
Loading posts...

All posts loaded

No more posts

error: Content is protected !!