Ad Widget

ಹರಿಹರ ಪಳ್ಳತ್ತಡ್ಕ : 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ಆ.26 ರಿಂದ 28 ರವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಆ.11 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರ ಪ್ರಾರ್ಥನೆಯೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಯತೀಂದ್ರ ಬಾಳುಗೋಡು, ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾತಿಕಲ್ಲು, ಖಜಾಂಜಿ ಶಿವಕುಮಾರ್ ಶಿವಾಲ, ರಾಮಚಂದ್ರ ಪಳಂಗಾಯ, ಹಿಮ್ಮತ್.ಕೆ.ಸಿ, ಪ್ರಸನ್ನ ಗೋರ್ತಿಲ, ರಾಜೇಶ್ ಕಿರಿಭಾಗ, ಅಜೇಯ ಪೊಯ್ಯೆಮಜಲು, ಉಮೇಶ್ ಕಜ್ಜೋಡಿ, ಶರತ್ ಚಂದ್ರ ಮುಂಡಾಜೆ, ಕೃಷ್ಣಪ್ಪ ವಾಡ್ಯಪ್ಪನಮನೆ, ಅಕಿನ್ ಕೇವಳ, ಯಶವಂತ ಕೊಪ್ಪಲಗದ್ದೆ, ಆಶಿಕ್ ಕೂಜುಗೋಡು, ತೀಕ್ಷಣ್ ಶೆಟ್ಟಿಯಡ್ಕ ಹಾಗೂ ಸಮಿತಿಯ ಪ್ರಮುಖ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನೆರವೇರಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading