Ad Widget

ಶಿರಾಡಿ : ನದಿ ನೀರು ಹರಿದು ರಸ್ತೆ ಹಾನಿ ; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು

ವಿಪರೀತ ಮಳೆಯಿಂದಾಗಿ ಶಿರಾಡಿ ಗ್ರಾಮದ ಮುಂಡಾಜೆ-ಕುದ್ಕುಳಿ-ಬರಮೇಲು ಮುಖ್ಯ ರಸ್ತೆಯ ಬದಿಯಲ್ಲಿ ಹರಿಯುತ್ತಿರುವ ನದಿಯ ನೀರು ರಸ್ತೆಯಲ್ಲಿ ಹರಿದು ರಸ್ತೆ ಹಾನಿಗೊಳಗಾಗಿದ್ದು, ಸ್ಥಳಕ್ಕೆ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸುಮಾರು 200 ಮೀಟರ್ ನಷ್ಟು ತಡೆಗೋಡೆ ಇಲ್ಲದೇ ನೀರು ರಸ್ತೆಯಲ್ಲಿ ಹರಿದು ಪಕ್ಕದ ಕೃಷಿ ತೋಟಗಳಿಗೂ ಹಾನಿಯಾಗಿರುವುದನ್ನು ಸ್ಥಳೀಯರು ಶಾಸಕರಿಗೆ ಮನವರಿಕೆ...

ಕುರುಂಜಿಗುಡ್ಡೆ : ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಅವೈಜ್ಞಾನಿಕ ರಸ್ತೆ ಹಂಪ್ಸ್ ; ವಾಹನ ಸವಾರರಿಗೆ ಸಂಕಷ್ಟ

ಸುಳ್ಯದ ಕೋರ್ಟ್ ಹಿಂಭಾಗದಿಂದ ಕುರುಂಜಿಗುಡ್ಡೆ ಸಂಪರ್ಕಿಸುವ ರಸ್ತೆಯ ತಿರುವಿನ ಬಳಿಯಲ್ಲಿ ವೇಗನಿಯಂತ್ರಕ ಹಂಪ್ಸ್ ಅಳವಡಿಸಲಾಗಿತ್ತು.‌ ನಗರದಾದ್ಯಂತ ಕುಡಿಯುವ ನೀರಿನ ಪೈಪು ಅಳವಡಿಸುವ  ಕಾಮಗಾರಿ ಸಂದರ್ಭ ಇಲ್ಲಿ ರಸ್ತೆಯ ಅರ್ಧ ಭಾಗವನ್ನು ಅಗೆದು ಕಾಮಗಾರಿ ನಡೆಸಲಾಗಿದೆ.‌ ನಂತರದಲ್ಲಿ ರಸ್ತೆಗೆ ಕಾಂಗ್ರೆಟ್ ಹಾಕಿ ಸರಿಪಡಿಸಿದರೂ ವೇಗ ನಿಯಂತ್ರಕ ಹಂಪ್ಸ್ ಅನ್ನು ಪೂರ್ಣಗೊಳಿಸಿಲ್ಲ. ರಸ್ತೆಯ ಒಂದು ಭಾಗಕ್ಕೆ ಮಾತ್ರ ಹಂಪ್...
Ad Widget

ಸುಳ್ಯ ಬೋರುಗುಡ್ಡೆ ರಸ್ತೆ ದುರಸ್ತಿಗೆ ಎಸ್.ಡಿ.ಪಿ.ಐ ಮನವಿ ; ಅಧಿಕಾರಿಯಿಂದ ಭರವಸೆ

ಸುಳ್ಯ, ಆಗಸ್ಟ್ 6 : ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಕಾಯರ್ತೋಡಿ ವಾರ್ಡ್ ನಲ್ಲಿ ಘನ ವಾಹನ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಪೂರ್ಣ ಕೆಸರುಮಯವಾಗಿದೆ. ಈ ಮೊದಲು ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಕೂಡಲೇ ರಸ್ತೆ ದುರಸ್ತಿ ಪಡಿಸಿ, ಸಂಚಾರ ಯೋಗ್ಯಗೊಳಿಸುವ ಬಗ್ಗೆ ಸುಳ್ಯ ನಗರ ಪಂಚಾಯತ್...

“ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಬರುವ ಭಕ್ತಾದಿಗಳ ಸುರಕ್ಷತೆಗೆ ಪ್ರಥಮ ಆದ್ಯತೆ” : ಎಸ್.ಐ. ಕಾರ್ತಿಕ್

ಸುಬ್ರಹ್ಮಣ್ಯದಲ್ಲಿ ವಸತಿಗೃಹ ಮಾಲಕ-ನಿರ್ವಾಹಕರ ಸಭೆ

ಸುಬ್ರಹ್ಮಣ್ಯ ಆಗಸ್ಟ್ 6 : “ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಹಾಗೂ ಹರಕೆ ತೀರಿಸಲು ಬರುತ್ತಾರೆ, ಭಕ್ತಾದಿಗಳಿಗೆ ರಾತ್ರಿ ತಂಗಲು ಈ ದೇವಳದ ವಸತಿಗೃಹಗಳು ಕಡಿಮೆ ಇರುವುದರಿಂದ ಖಾಸಗಿ ವಸತಿಗೃಹಗಳು ಕೊಠಡಿ ನೀಡಿ ತಂಗಲು ವ್ಯವಸ್ಥೆ ಕಲ್ಪಿಸಿರುವುದು ಸರ್ವೇಸಾಮಾನ್ಯ. ಆದರೆ ಖಾಸಗಿ ಅನಧಿಕೃತ ವಸತಿಗೃಹಗಳು ಭಕ್ತಾದಿಗಳಿಗೆ ಕಿರುಕುಳ ನೀಡುವುದು,...
error: Content is protected !!