Ad Widget

ಎ.ಬಿ.ವಿ.ಪಿ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಣೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ತಾಲೂಕು ಘಟಕದಿಂದ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಜ್ಞಾನದೀಪ ಶಾಲೆಯಲ್ಲಿ ಜು.14 ರಂದು ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಗದಾಧರ್ ರವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ "ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ" ದ ಮಹತ್ವದ ಕುರಿತು ಮಾತನಾಡಿದರು. ತಾಲೂಕಿನ ಸಂಚಾಲಕರಾದ ನಂದನ್ ಪವಿತ್ರಮಜಲು ಸದಸ್ಯತ್ವದ ಮಹತ್ವವನ್ನು ವಿವರಿಸಿದರು. ಎಬಿವಿಪಿಯ ಸಕ್ರಿಯ...

ಅರಂತೋಡು : ಸ್ನೇಹ ಹೋಟೆಲ್ ಮಾಲಕ ಯೋಗೀಶ್ ಗೂನಡ್ಕ ನಿಧನ

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಸುಮಾರು 24 ವರ್ಷ ಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದ ಯೋಗೀಶ್(42) ರವರು ಜು.16 ರಂದು ನಿಧನರಾದರು. ಮೃತರು ತಾಯಿ ಮೀನಾಕ್ಷಿ, ಪತ್ನಿ ಲಲಿತಾ(ರೇಶ್ಮಾ), ಪುತ್ರರಾದ ಧನುಷ್ ಹಾಗೂ ಗೌಶಿಕ್ ರನ್ನು ಅಗಲಿದ್ದಾರೆ.
Ad Widget

ಸುಬ್ರಹ್ಮಣ್ಯ : ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ

ಸುಬ್ರಹ್ಮಣ್ಯ ಸಮೀಪ 33 ಕೆವಿ. ಹಾಗೂ 11 ಕೆವಿ ವಿದ್ಯುತ್ ಲೈನ್ ಮೇಲೆ ಮರವೊಂದು ಬಿದ್ದು ಕಂಬಗಳಿಗೆ ಹಾನಿಯಾದ ಘಟನೆ ಇಂದು ನಡೆದಿದೆ. ಸ್ಥಳಕ್ಕೆ ಮೆಸ್ಕಾಂ ಎಇ ಚಿದಾನಂದ ಹಾಗೂ ಸಿಬ್ಬಂದಿಗಳು ಆಗಮಿಸಿ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.

ಬೆಳ್ಳಾರೆ-ನಾಯಕರ ಶಿಬಿರ ಮತ್ತು ಖುರ್ರತ್ ತಂಙಲ್ ಅನುಸ್ಮರಣೆ

ಎಸ್ಸೆಸ್ಸೆಫ್ ಬೆಳ್ಳಾರೆ ಘಟಕದ ವತಿಯಿಂದ ನಾಯಕರ ಶಿಬಿರ ಮತ್ತು ಖುರ್ರತ್ ಸಾದಾತ್ ಖುರ್ರತ್ ತಂಙಲ್ ಅನುಸ್ಮರಣೆ ಸಮಾರಂಭವು ಜು 15ರಂದು ಬೆಳ್ಳಾರೆ ಸುನ್ನೀ ಸೆಂಟರ್ನಲ್ಲಿ ನಡೆಯಿತು.ಸುನ್ನೀ ಜಂಇಯತ್ತುಲ್ ಉಲಮಾ ಬೆಳ್ಳಾರೆ ವಲಯಾಧ್ಯಕ್ಷ ಹಸನ್ ಸಖಾಫಿ ಉದ್ಘಾಟಿಸಿದರು.ಈ ಸಮಾರಂಭದಲ್ಲಿ ಸುನ್ನೀ ತರಗತಿಯನ್ನು ನಡೆಸಿದ ಕೇರಳ ಎಸ್ಸೆಸ್ಸೆಫ್ಫಿನ ಹಣಕಾಸು ಕಾರ್ಯದರ್ಶಿ ಅನಸ್ ಅಮಾನಿ ಪುಷ್ಪಗಿರಿಯವರು ಸುನ್ನೀ ಮುಸ್ಲಿಮರು ಪಾಲಿಸಿ...

ವಿವಿಧ ಬೇಡಿಕೆಗಳ ಈಡೇರಿಕೆಗೆ ಬಾಳುಗೋಡು ಬೂತ್ ಸಮಿತಿ ವತಿಯಿಂದ ಸಂಸದರಿಗೆ ಮನವಿ

ನಡುಗಲ್ಲಿನಲ್ಲಿ ನಡೆದ ಭಾಜಪಾ ಗುತ್ತಿಗಾರು ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಮಾವೇಶ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಬಾಳುಗೋಡು ಭಾಜಪಾ ಬೂತ್ ಸಮಿತಿಯ ಕಾರ್ಯಕರ್ತರು ಊರಿನ ಕೆಲವು ಬೇಡಿಕೆಗಳ ಬಗ್ಗೆ ಮನವಿಯನ್ನು ಸಲ್ಲಿಸಿದರು.ಬಾಳುಗೋಡಿನ ಶಿಥಿಲಗೊಂಡ ಮುಳುಗು ಸೇತುವೆಯನ್ನು ಮೇಲ್ದರ್ಜೆಗೇರಿಸುವುದು, ಈಗ ಇರುವ BSNL ಟವರ್ ಸರಿಯಾಗಿ ಕಾರ್ಯನಿರ್ವಹಿಸದಿರುವುದರ ಬಗ್ಗೆ, ಬಾಳುಗೋಡು-ಮಿತ್ತಡ್ಕ ರಸ್ತೆ ಹಾಗೂ ಕಾಲು ಸೇತುವೆ ನಿರ್ಮಿಸುವುದು, ಬಾಳುಗೋಡಿನಿಂದ...

ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಕೊಲ್ಲಮೊಗ್ರು ಬಿ.ಜೆ.ಪಿ ಬೂತ್ ಸಮಿತಿ ವತಿಯಿಂದ ಸಂಸದರಿಗೆ ಮನವಿ

ಜು.15 ರಂದು ಗುತ್ತಿಗಾರು ಗ್ರಾಮದ ನಡುಗಲ್ಲಿನಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ, ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಕೊಲ್ಲಮೊಗ್ರು ಬಿ.ಜೆ.ಪಿ ಬೂತ್ ಸಮಿತಿಯ ಕಾರ್ಯಕರ್ತರು ಹಾಗೂ ಮುಳ್ಳುಬಾಗಿಲು, ಕಜ್ಜೋಡಿ, ಕರಂಗಲ್ಲು ಹಾಗೂ ಕಟ್ಟ ಭಾಗದ ಜನರು ಈ ಭಾಗದ ನೆಟ್...

ನಡುಗಲ್ಲು : ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಭೇಟಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭ

ಅಡಿಕೆ ಹಳದಿ ರೋಗ ಸಮಸ್ಯೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಬಾಧಿತ, ನಷ್ಟ ಹಾಗೂ ನಾಶವಾದ ಪ್ರದೇಶಗಳ ಬಗ್ಗೆ ವರದಿ ತಯಾರಿಸಲು ಹೇಳಲಾಗಿದೆ : ಕ್ಯಾಪ್ಟನ್ ಬ್ರಿಜೇಶ್ ಚೌಟ

ಜು.15 ರಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ನಡುಗಲ್ಲಿಗೆ ಬಂದಿದ್ದು, ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ, ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಭೇಟಿ ಮಾಡಿದ ಸಂಸದರು ನಂತರ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ...

ಸುಳ್ಯ ಕಸಾಪ ವತಿಯಿಂದ ಪರಿಸರ ಜಾಗೃತಿಯಾನ ಸರಣಿ ಕಾರ್ಯಕ್ರಮಗಳಿಗೆ ಚಾಲನೆ

ವಿದ್ಯಾರ್ಥಿಗಳು ಪರಿಸರ ಪ್ರೇಮಿಗಳಾಗಿ ಬದುಕಿ ಬಾಳಬೇಕು- ಡಾ.ಆರ್.ಕೆ.ನಾಯರ್ ಪ್ರಕೃತಿಯಲ್ಲಿರುವ ಪ್ರತಿಯೊಂದು ಸೂಕ್ಷ್ಮಾಣು ಜೀವಿಗಳು ಪರಿಸರವನ್ನು ಸ್ವಚ್ಛಂದಗೊಳಿಸಲು ಸಾಧ್ಯವಾಗುವುದಾದರೆ ಮನುಷ್ಯನಿಗೆ ಯಾಕಾಗಬಾರದು. ಅದಕ್ಕಾಗಿ ಪ್ರತಿಯೊಬ್ಬ ಮಾನವನು ಚಿಂತಿಸಿ ಅದನ್ನು ಉಳಿಸಿದಲ್ಲಿ ಮಾತ್ರ ಮುಂದಿನ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಪ್ರಕೃತಿಯನ್ನು ಪ್ರೀತಿಸಿದರೆ ಮಾತ್ರ ಅದು ನಮ್ಮನ್ನು ಕಾಪಾಡುತ್ತದೆ ಅದಕ್ಕಾಗಿ ವಿದ್ಯಾರ್ಥಿಗಳು ಅದನ್ನು ಪ್ರೀತಿಸಿ ಎಂದು ಖ್ಯಾತ ಪರಿಸರ ತಜ್ಞ ಹಾಗೂ...

ಕೊಡಿಯಾಲ ಗ್ರಾಮಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

ಕೊಡಿಯಾಲ ಗ್ರಾಮದ ಕುಂಡೀಲಿ ಪ.ಜಾತಿ ಕಾಲೋನಿಯ ದೈವಸ್ಥಾನದ ಆವರಣಕ್ಕೆ ಇಂಟರ್ ಲಾಕ್ ಅಳವಡಿಕೆಗೆ 2024-2025ನೇ ಸಾಲಿನ ಸಂಸದರ ನಿಧಿಯಿಂದ  2 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಮಗಾರಿಯ ಉದ್ಘಾಟನೆಯನ್ನು  ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ನೆರವೇರಿಸಿ ಮಾತನಾಡಿದರು.  ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಂಬೆ, ಜಿಲ್ಲಾ ಪ್ರಧಾನ...

ಬೊಳುಬೈಲು : ಪ್ರಯಾಣಿಕರ ನೂತನ ಬಸ್ಸು ತಂಗುದಾಣ ಉದ್ಘಾಟನೆ

"ಯುವ ಸಮೂಹ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಸಾಗಿದಲ್ಲಿ ಗ್ರಾಮಗಳ ಅಭಿವೃದ್ಧಿ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ಬೊಳುಬೈಲಿನ ಯುವಕ ಮಂಡಲದ ಸದಸ್ಯರ ಕಾರ್ಯ ಶ್ಲಾಘನೀಯ" ಎಂದು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಗೋಪಾಲ್ ಅಡ್ಕಾರು ಹೇಳಿದರು. ಅವರು ಜುಲೈ 13ರಂದು ಜಾಲ್ಸೂರು ಗ್ರಾಮ ಪಂಚಾಯತ್ ಮತ್ತು ನವಚೇತನ ಯುವಕ ಮಂಡಲ (ರಿ.) ಬೊಳುಬೈಲು...
Loading posts...

All posts loaded

No more posts

error: Content is protected !!