
ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘದಿಂದ ಸುಳ್ಯ ಮೂರು ಸಂಸ್ಥೆಗಳಿಗೆ ಸವಲತ್ತು ಖರೀದಿಗಾಗಿ ತಲಾ ರೂ 5000 ವನ್ನು ಕೊಡುಗೆಯಾಗಿ ನೀಡಲಾಯಿತು.
ಎಂ.ಬಿ.ಫೌಂಡೇಶನ್ ನ ಸಾಂದೀಪ್ ವಿಶೇಷ ಶಾಲೆ, ಅಡ್ಕಾರಿನ ವನವಾಸಿ ವಿದ್ಯಾರ್ಥಿ ನಿಲಯ ಹಾಗೂ ಸುಳ್ಯ ಪಶುಪಾಲನಾ ಆಸ್ಪತ್ರೆ ಸೇರಿದಂತೆ ಮೂರು ಸಂಸ್ಥೆಗಳಿಗೆ ತಲಾ ರೂ 5000/- ದಂತೆ ದೇಣಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಮತ್ತು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷರಾದ ದೇರಣ್ಣ ಗೌಡ, ಅಧ್ಯಕ್ಷರಾದ ಜಗದೀಶ್ ಕೆ.ಪಿ., ಕಾರ್ಯದರ್ಶಿಗಳಾದ ಮೋನಪ್ಪ ಅಡ್ಕಬಳೆ , ಖಜಾಂಚಿ ಉತ್ತಪ್ಪ ಎಂ.ಬಿ. ಹಾಗೂ ಸದಸ್ಯರಾದ ತಿರುಮಲೇಶ್ವರ ಎಸ್., ಸೀತಾರಾಮ ಎನ್.ಜಿ., ಜಯಕರ ಎಂ.ಡಿ., ಗುರುಪ್ರಸಾದ್ ಎ.ಜಿ. ಉಪಸ್ಥಿತರಿದ್ದರು.
