- Tuesday
- April 1st, 2025

ಈಜಿಪ್ಟ್ ನಲ್ಲಿ ಶಿಪ್ ನಲ್ಲಿ ಉದ್ಯೋಗಕ್ಕೆ ನೇಮಕವಾಗಿ ತೆರಳಿದ್ದ. ಯುವಕ ಬ್ಯಾಂಕಾಕ್ ನಲ್ಲಿ ಮೃತ ಪಟ್ಟ ಘಟನೆ ವರದಿಯಾಗಿದೆ. ಪಂಬೆತ್ತಾಡಿ ನಿವೃತ್ತ ಯೋಧ ದಿ. ಶಿವರಾಮ ಗೌಡರ ಪುತ್ರ ಲಿಖಿನ್(26) ಮೃತಪಟ್ಟ ಯುವಕ. ಇಂದು ರಾತ್ರಿ ಬೆಂಗಳೂರಿಗೆ ವಿಮಾನ ಮೂಲಕ ಮೃತ ದೇಹ ತಲುಪಲಿದ್ದು,ನಾಳೆ (ಮಾ. 18) ರಂದು ಹುಟ್ಟೂರಿಗೆ ಮೃತ ದೇಹ ಬರಲಿದೆ. ಈಜಿಪ್ಟ್...

ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ. 16ರಂದು ಐನೆಕಿದು ಗ್ರಾಮದ ಗುಂಡಡ್ಕ ಬಳಿ ನಡೆದಿದೆ. ಐನೆಕಿದು ಗ್ರಾಮದ ಗುಂಡಡ್ಕ ನಿವಾಸಿ ಜಗದೀಶ ಎಂಬವರು ಮೃತಪಟ್ಟ ವ್ಯಕ್ತಿ. ಜಗದೀಶರವರು ಸಂಜೆ ವೇಳೆ ಗುಂಡಡ್ಕ ಬಳಿ ಮೀನು ಹಿಡಿಯಲು ಹೊಳೆಗೆ ತೆರಳಿದ್ದಾಗ ನೀರಲ್ಲಿ ಮುಳುಗಿದ್ದು, ಅವರೊಂದಿಗಿದ್ದ ಮಕ್ಕಳು ಮನೆಯವರಿಗೆ ಬಂದು ಅಪ್ಪ ನೀರಲ್ಲಿ...

ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಆದೇಶದಂತೆ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ನೇಮಕ ಗೊಂಡ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಇಂದು ಸುಳ್ಯ ನಗರ ಪಂಚಾಯತ್ ಸಭಾಂಗಣ ದಲ್ಲಿ ನಡೆದ ಸಮಾರಂಭ ದಲ್ಲಿ ಅಧಿಕಾರ ಸ್ವೀಕರಿಸಿದರುಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ದಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ದೇವಚಳ್ಳ ಗ್ರಾಮದ ಭಾವಮಿತ್ರ ದೇವರವರಿಗೆ ವೀಲ್ ಚಯರ್ ಹಾಗೂ ದೇವ ರಾಟೆ ಗೌರಮ್ಮ ಮತ್ತು ಮಡಪ್ಪಾಡಿ ಗ್ರಾಮದ ಸೀತಮ್ಮ ಕಾಯರ ರವರಿಗೆ ವಾಟರ್ ಬೆಡ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಯೋಜನೆಯ ಗುತ್ತಿಗಾರು ವಲಯದ ಅಧ್ಯಕ್ಷರಾದ ಯೋಗೀಶ್ ದೇವ, ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ, ಮಡಪ್ಪಾಡಿ...

ಅರ್ನಾಡಿಯಲ್ಲಿರುವ ಶಶಾಂಕ್ ರೈಸ್ ಮಿಲ್ ಮಾಲಕ ಅರ್ನಾಡಿ ಸದಾನಂದ ಭಟ್ ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಹಲವಾರು ವರ್ಷಗಳಿಂದ ರೈಸ್ ಮಿಲ್ ನಡೆಸುತ್ತಾ ಬಂದಿರುವ ಅವರು ಇತ್ತೀಚೆಗೆ ಬೆಂಗಳೂರಿನ ಮಗನ ಮನೆಯಲ್ಲಿ ನೆಲೆಸಿದ್ದರು. ಮೃತರು ಪತ್ನಿ ಶಂಕರಿ, ಪುತ್ರ ಶಶಾಂಕ್, ಪುತ್ರಿ ಪ್ರಿಯಾಂಕ, ಸೊಸೆ, ಅಳಿಯ,...

ಸುಳ್ಯದ ಯುವ ಸಂಗೀತ ನಿರ್ದೆಶಕ ಮಯೂರ ಅಂಬೆಕಲ್ಲು ಸಾರಥ್ಯದಲ್ಲಿ ಮೂಡಿಬಂದ "ಭಾವ ತೀರ ಯಾನ" ಚಲನಚಿತ್ರ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದ್ದು ನಾಲ್ಕನೇ ವಾರದಲ್ಲಿ ಮುಂದುವರೆಯುತ್ತಿದೆ. ಮಾ.18 ರಂದು ಮಂಗಳವಾರ ಬೆಳಿಗ್ಗೆ 10.30 ಮತ್ತು ಸಂಜೆ 7.15 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show...

ಮಾಣಿ ಮೈಸೂರು ಹೆದ್ದಾರಿಯ ಅರಂತೋಡು ಪೇಟೆಯಲ್ಲಿ ತೊಡಿಕಾನ ತಿರುವು ಸಮೀಪ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಎರಡು ಮುಖಾಮುಖಿ ಢಿಕ್ಕಿಯಾಗಿ ಸವಾರರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಓರ್ವ ಸವಾರನ ಕಾಲಿಗೆ ಗಂಭೀರ ಗಾಯಗಳಾಗಿದ್ದು ಮತ್ತೋರ್ವನ ಕಾಲಿನ ಹೆಬ್ಬೆರಳು ತುಂಡಾಗಿದ್ದು ಮೂವರನ್ನು ಸುಳ್ಯದ...