Ad Widget

ಪಂಜ: ಶ್ರೀ ಶಾಸ್ತಾವೇಶ್ವರ ದೇವರಿಗೆ ಪ್ರಭಾವಳಿ ಸಮರ್ಪಣೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶಾಸ್ತಾವೇಶ್ವರ ದೇವರಿಗೆ ಪ್ರಭಾವಳಿಯನ್ನು ಗಂಗಾಧರ ಗೌಡ ಗುಂಡಡ್ಕ ಹಾಗು ಶ್ರೀಮತಿ ಸೀತ ಇವರ ಪುತ್ರ ಚೇತನ್ ಗುಂಡಡ್ಕ, ಶ್ರೀಮತಿ ರಶ್ಮಿ ಮತ್ತು ದಿಯಾನ್ ಗುಂಡಡ್ಕ ಇವರು ಸೇವಾ ರೂಪದಲ್ಲಿ ಸಮರ್ಪಿಸಿದರು. ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯದಲ್ಲಿ ಪತಂಜಲಿ ಉಚಿತ ಯೋಗ ಶಿಕ್ಷಣ ತರಬೇತಿ ಆರಂಭ

ಸುಬ್ರಹ್ಮಣ್ಯ ಮಾ.9: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿಜಿಸ್ಟರ್ಡ್ ಕರ್ನಾಟಕ ತುಮಕೂರು ನೇತ್ರಾವತಿ ವಲಯ ಮಂಗಳೂರು ನಗರ ಇವರ ಸಹಯೋಗದಲ್ಲಿ ಆರೋಗ್ಯ ಪೂರ್ಣ ಜೀವನಕ್ಕಾಗಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಇಂದು ಆದಿತ್ಯವಾರ ಸುಬ್ರಹ್ಮಣ್ಯದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟನೆಯೊಂದಿಗೆ ಆರಂಭವಾಯಿತು.ತರಬೇತಿಯ ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ...
Ad Widget

ಸುಬ್ರಹ್ಮಣ್ಯದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟನೆ

ಸುಬ್ರಹ್ಮಣ್ಯ ರೋಟರಿ ಕ್ಲಬ್ ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್, ರೋಟರಿ ಕಣ್ಣಿನ ಆಸ್ಪತ್ರೆ ಪುತ್ತೂರು, ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು. ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ( ಅಂದತ್ವ ನಿವಾರಣ ವಿಭಾಗ )ಮಂಗಳೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಡಾ. ಸತೀಶ್ ಪೈ ಡಾ....

ಮೂರನೇ ವಾರ ಪೂರೈಸುತ್ತಿರುವ  “ಭಾವ ತೀರ ಯಾನ” – ಪುತ್ತೂರಿನಲ್ಲಿ ನಾಳೆ ಸಂಜೆ 7.15 ಕ್ಕೆ ಶೋ

ಸುಳ್ಯದ ಯುವ ಸಂಗೀತ ನಿರ್ದೆಶಕ ಮಯೂರ ಅಂಬೆಕಲ್ಲು ಸಾರಥ್ಯದಲ್ಲಿ ನಿರ್ಮಣಗೊಂಡ "ಭಾವ ತೀರ ಯಾನ" ಚಲನಚಿತ್ರ ರಾಜ್ಯಾದ್ಯಾಂತ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು.   ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ  ಭಾವ ತೀರ ಯಾನ ನಿರಂತರ ಪ್ರದರ್ಶನ ಕಾಣುತ್ತಿದ್ದು 18 ನೇ ದಿನಕ್ಕೆ ಕಾಲಿರಿಸಿದೆ.  ಮಾ. 10ರಂದು ಸಂಜೆ 7.15 ಕ್ಕೆ  ಚಿತ್ರ ಪ್ತದರ್ಶನಕ್ಕೆ ಸಮಯ ನಿಗದಿಯಾಗಿದೆ.  ಕೌಂಟರ್‌'ನಲ್ಲಿ ಟಿಕೆಟ್...

ಮಾ. 15 ರಂದು ಸುಳ್ಯಕ್ಕೆ ಆಗಮಿಸುವ ನಂದಿ ರಥಯಾತ್ರೆ ಅದ್ದೂರಿ ಸ್ವಾಗತಕ್ಕೆ ತೀರ್ಮಾನ – ಗೋವು ಮತ್ತು ಕೃಷಿಗೆ ಭಾವನಾತ್ಮಕ ಸಂಬಂಧವಿದೆ ಅದನ್ನು ಸಮಾಜಕ್ಕೆ ತಿಳಿಸುವುದೇ ನಂದಿ ಯಾತ್ರೆ ಉದ್ದೇಶ: ಅಕ್ಷಯ್ ಕೆ.ಸಿ. – ಸಮಾಜದಲ್ಲಿ ಗೋವಿನ ಮಹತ್ವ ಅರಿವು,ಜಾಗೃತಿ ಅವಶ್ಯಕತೆಯಿದೆ : ರಾಜೇಶ್ ಶೆಟ್ಟಿ ಮೇನಾಲ

ಗೋವಿನ ಬಗ್ಗೆ ಹಾಗೂ ಅದರ ಉತ್ಪನ್ನದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಂದಿ ರಥಯಾತ್ರೆ ನಡೆಯುತ್ತಿದ್ದು ಮಾ.15ರಂದು ಸುಳ್ಯಕ್ಕೆ ನಂದಿ ರಥಯಾತ್ರೆ ಪುರಪ್ರವೇಶ ಮಾಡಲಿದ್ದು ಈ ಪುಣ್ಯ ಕಾರ್ಯದಲ್ಲಿ ಸಮಾಜ ಬಂಧುಗಳು ಭಾಗವಹಿಸಬೇಕು ಎಂದು ನಂದಿ ರಥಯಾತ್ರೆಯ ಸುಳ್ಯ ತಾಲೂಕಿನ ಸ್ವಾಗತ ಸಮಿತಿ ಅಧ್ಯಕ್ಷ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿರಾಗಿರುವ...

ಕಂದ್ರಪ್ಪಾಡಿ : ಶ್ರೀ ರಾಜ್ಯದೈವ ಮತ್ತು ಪುರುಷ ದೈವಸ್ಥಾನಕ್ಕೆ ಹರ್ಷಕುಮಾರ್ ಮುಂಡೋಡಿ ಮನೆಯವರಿಂದ ಸಮರ್ಪಣೆಯಾಗಲಿರುವ ಪಲ್ಲಕ್ಕಿಗೆ ಸ್ವಾಗತ

ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನಕ್ಕೆ ಹರ್ಷಕುಮಾರ್ ಮುಂಡೋಡಿ ಮನೆಯವರಿಂದ ಪಲ್ಲಕ್ಕಿ ಸಮರ್ಪಣೆ ನಡೆಯಲಿದ್ದು ಮಾ. 08 ರಂದು ಕ್ಷೇತ್ರಕ್ಕೆ ಆಗಮಿಸಿದ ಪಲ್ಲಕ್ಕಿಗೆ ಆಡಳಿತ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ಪಲ್ಲಕ್ಕಿಯ ಕೆತ್ತನೆ ಕೆಲಸ ಮಾಡಿದ ಶಿಲ್ಪಿಗಳಾದ ಹರೀಶ್  ರವರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ದೈವಸ್ಥಾನಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ...

ಕೆ.ಎಸ್.ಎಸ್. ಕಾಲೇಜಿನ ಸಮಾಜಶಾಸ್ತ್ರ ವಿಭಾಗದಿಂದ ಏನೆಕಲ್ಲಿನಲ್ಲಿ ಆಟದಿಂದ ಪಾಠ ಎಂಬ ವಿಸ್ತರಣಾ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ , ಆಂತರಿಕ ಗುಣಮಟ್ಟ ಭರವಸಾ ಕೋಶ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎನೆಕಲ್ಲು ಇಲ್ಲಿ ಆಟದಿಂದ ಪಾಠ ಎಂಬ ವಿಸ್ತರಣಾ ಕಾರ್ಯಕ್ರಮವನ್ನು  ಮಾ.8ರಂದು ಹಮ್ಮಿಕೊಳ್ಳಲಾಯಿತು. ಸಮಾಜಶಾಸ್ತ್ರ ವಿಭಾಗದ ತೃತೀಯ ಪದವಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳಿಗೆ ವಿವಿಧ ರೀತಿಯ ಆಟಗಳನ್ನು ಹಮ್ಮಿಕೊಂಡು ಆ ಮೂಲಕ ಪಾಠವನ್ನು ಕಲಿಸಿದರು....

ಹರಿಹರ ಸೊಸೈಟಿ ಚುನಾವಣೆ ಫಲಿತಾಂಶ ಹೈಕೋರ್ಟ್ ತಡೆಯಾಜ್ಞೆಯಿಂದ ವಿಳಂಬವಾಗಿದೆ – ಮಾಜಿ ಅಧ್ಯಕ್ಷ ಹರ್ಷಕುಮಾರ ದೇವಜನ

ಕೊಲ್ಲಮೊಗರು ಹರಿಹರ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಜ. 19ರಂದು ನಡೆದಿದ್ದು, ಈ ಚುನಾವಣೆಯಲ್ಲಿ ಸಹಕಾರಿ ಅಭಿವೃದ್ಧಿ ಬಳಗ, ಸಹಕಾರ ಭಾರತಿ, ಹಾಗೂ ಸ್ವಾಭಿಮಾನ ಬಳಗದ ಮೂರು ತಂಡಗಳು ಸ್ಪರ್ಧಿಸಿರುತ್ತವೆ. ಈ ಪೈಕಿ ಆಡಳಿತ ಮಂಡಳಿ ರಚನೆಗೆ ವಿಳಂಬವಾಗಿರುವುದು ಉಚ್ಚ ನ್ಯಾಯಾಲಯದಿಂದ ತಂದಿರುವ ತಡೆಯಾಜ್ಜೆಯಲ್ಲಿ ಮತದಾನದ ಹಕ್ಕಿನಲ್ಲಿ ಸುಸ್ತಿದಾರರು ಹಾಗೂ ಮೃತಪಟ್ಟವರ ಹೆಸರಿರುವುದಿಂದ ಆಗಿರುತ್ತದೆ...
error: Content is protected !!