Ad Widget

ಕವನ : ಕೊನೆಯೇ ತಿಳಿಯದ ಬದುಕಿನಲ್ಲಿ ಕೊನೆಯವರೆಗೂ ಬದುಕಬೇಕಿದೆ…

ಈ ಭೂಮಿಯ ಮೇಲೆ ಸಾವು ಅನ್ನೋದು ಸಾರ್ವಕಾಲಿಕ ಸತ್ಯ, ಹುಟ್ಟಿದವರು ಒಂದಲ್ಲಾ ಒಂದು ದಿನ ಸಾಯಲೇಬೇಕು ಇದು ಎಂದಿಗೂ ಬದಲಿಸಲಾಗದ ಕೃತ್ಯ…
ಇಂದು ನಮ್ಮ ಕೈಯಲ್ಲೊಂದು ಸುಂದರವಾದ ಬದುಕಿದೆ, ಆ ಬದುಕನ್ನು ನಾವು ನಮ್ಮವರೊಂದಿಗೆ ಖುಷಿಯಿಂದ ಕಳೆಯಬೇಕಿದೆ, ನಮ್ಮ ಕನಸುಗಳ ಹಿಂದೆ ಸಾಗುತ್ತಾ ಬದುಕಬೇಕಿದೆ, ನಮ್ಮ ಕನಸುಗಳನ್ನು ನಾವು ನನಸಾಗಿಸಿಕೊಂಡು ನಮ್ಮವರ ಕಣ್ಣಿನಲ್ಲಿ ಸಂತೋಷವನ್ನು ತರಬೇಕಿದೆ…
ಕೊನೆಯೇ ತಿಳಿಯದ ಈ ಬದುಕಿನಲ್ಲಿ ನಾವು ಕೊನೆಯವರೆಗೂ ಬದುಕಬೇಕಿದೆ, ಇಂದು ಬಂದು ನಾಳೆ ಹೋಗುವ ಕಷ್ಟಗಳಿಗೆ ಖುಷಿಯ ತೋರಿಸಿ, ನೋವುಗಳಿಗೆ ನಗುವ ತೋರಿಸಿ ಇರುವ ಒಂದು ಬದುಕಲಿಂದು ನಾವು ಮುಂದೆ ಸಾಗಬೇಕಿದೆ, ಬರುವುದೆಲ್ಲವ ಸ್ವೀಕರಿಸುತ್ತಾ ನಮ್ಮವರೊಂದಿಗೆ ನಾವು ಮುನ್ನಡೆಯಬೇಕಿದೆ…✍️ಉಲ್ಲಾಸ್ ಕಜ್ಜೋಡಿ

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!