Ad Widget

ನಾಳೆ ( ಫೆ.21) ಪುತ್ತೂರು ಸೇರಿದಂತೆ ರಾಜ್ಯಾದ್ಯಾಂತ ಭಾವ ತೀರ ಯಾನ ಚಲನಚಿತ್ರ ತೆರೆಗೆ

ಪುತ್ತೂರಿನ ಜಿ.ಎಲ್. ಒನ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಪ್ರಥಮ ಪ್ರದರ್ಶನ

. . . . . . . . .

ತುಳುನಾಡಿನ ಕರಾವಳಿಯ ಸುಳ್ಯದ ಬಹುಮುಖಿ ಪ್ರತಿಭೆ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ ನವಿರಾದ ಪ್ರೇಮ ಪ್ರೀತಿಗಳ ಭಾವನೆಯುಳ್ಳ ಸಿನಿಮಾ “ಭಾವ ತೀರ ಯಾನ” ಫೆ.21 ರಂದು ರಾಜ್ಯಾದ್ಯಾಂತ ತೆರೆ ಕಾಣಲಿದ್ದು
ಈ ಚಿತ್ರಕ್ಕೆ ಅವರೇ ಕತೆ, ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ್ದಾರೆ. ನವಿರಾದ ಪ್ರೇಮ ಪ್ರೀತಿಗಳ ಭಾವನೆಗಳ ತೀರದುದ್ದಕ್ಕೂ ಯಾನಕ್ಕೆ ಕರೆದೊಯ್ಯುವ ಸಿನಿಮಾ ಭಾವ ತೀರ ಯಾನ ಪುತ್ತೂರಿನ GL ONE Mallನ ಭಾರತ್ ಸಿನಿಮಾಸ್ – Screen 2ರಲ್ಲಿ ಬಿಡುಗಡೆಯಾಗಲಿದೆ. ಆ ಪ್ರಯುಕ್ತ ಫೆ.21 ರಂದು ಶುಕ್ರವಾರ ಸಂಜೆ ಗಂಟೆ 3.45 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಚಲನಚಿತ್ರ ಮತ್ತು ಧಾರಾವಾಹಿಗಳ ಅಭಿನೇತ್ರಿ ಶ್ರೀಮತಿ ವಸಂತಲಕ್ಷ್ಮೀ ಶಶಿಧರ್ ಉದ್ಘಾಟಿಸಲಿದ್ದಾರೆ. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ರಾಜೇಂದ್ರಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಭಾವನಾ ಬಳಗ ಸುಳ್ಯ ಇದರ ಕೆ.ಆರ್.ಗೋಪಾಲಕೃಷ್ಣ, ತುಳುನಾಡ ಪ್ರತಿಭೆ ಸುಂದರ ರೈ ಮಂದಾರ, ಕುಂಬ್ರ, ಪ್ರಸನ್ನ ಭಾಗೀನ ಬಪ್ಪಳಿಗೆ ಗೌರವ ಉಪಸ್ಥಿತರಿರಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!