Ad Widget

ಫೆ 22,23 : ಗೆಳಯರ ಬಳಗ ಐವರ್ನಾಡು, ಇವರ ಆಶ್ರಯದಲ್ಲಿ ಅಂತರರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿ

ಗೆಳೆಯರ ಬಳಗ ಐವರ್ನಾಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್‌ ಇವರ ಸಹಭಾಗಿತ್ವದಲ್ಲಿ ಆಹ್ವಾನಿತ 12 ತಂಡಗಳ ಅಂತ‌ರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವು ಫೆ.22 ಮತ್ತು ಫೆ.23 ರಂದು ಐವರ್ನಾಡು ಸ.ಪ.ಪೂ.ಕಾಲೇಜು...

ಸುಳ್ಯ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ಮಹೇಶ್ ಬೆಳ್ಳಾರ್ಕರ್ ನೇಮಕ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ನೂತನ ಅಧ್ಯಕ್ಷರಾಗಿ ಮಹೇಶ್ ಬೆಳ್ಳಾರ್ಕರ್ ಇವರನ್ನು ಸುಳ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರ ಶಿಫಾರಸು ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಪ. ಜಾ. ವಿಭಾಗದ ಅಧ್ಯಕ್ಷರ ಅನುಮೋದನೆ ಮೇರೆಗೆ ಕೆ.ಪಿ.ಸಿ.ಸಿ. ಪ. ಜಾ. ವಿಭಾಗದ ರಾಜ್ಯಾಧ್ಯಕ್ಷರಾದ ಆರ್. ಧರ್ಮಸೇನರವರು ನೇಮಕ ಮಾಡಿ ಅದೇಶಿಸಿರುತ್ತಾರೆ. ಫೆಬ್ರುವರಿ 18...
Ad Widget

ಸುಳ್ಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ತಂಡಕ್ಕೆ ಜಿಲ್ಲಾ ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯ ತಾಲೂಕು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಮಿಥುನ್ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ , ಕೊರಗಪ್ಪ ಬೆಳ್ಳಾರೆ ಸಂತ ಜೋಸೆಫ್ ಶಾಲೆ ಸುಳ್ಯ , ಉಮೇಶ್ ಸಂತ ಬ್ರಿಜಿಡ್ಸ್ ಶಾಲೆ ಸುಳ್ಯ, ರಂಗನಾಥ್ ರೋಟರಿ...

” ಸತ್ಯವನ್ನೇ ಹೇಳುತ್ತೇನೆ ” : ಸುಳ್ಯದಲ್ಲಿ ನಾಟಕ ಪ್ರದರ್ಶನ

ರಾಷ್ಟ್ರ ಚಿಂತನ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತ ಪಡಿಸಿದ ನಾಟಕ ಸತ್ಯವನ್ನೇ ಹೇಳುತ್ತೇನೆ ಫೆ.18ರಂದು ಸಾಯಂಕಾಲ ಸುಳ್ಯ ಯುವಜನ ಸಂಯುಕ್ತ ಮಂಡಳಿ ವಠಾರದಲ್ಲಿ ಪ್ರದರ್ಶನಗೊಂಡಿತು. ನೂರಾರು ಮಂದಿ ಆಗಮಿಸಿ ಈ ನಾಟಕ ಪ್ರದರ್ಶನವನ್ನು ವೀಕ್ಷಿಸಿದರು.

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವ

ಫೆ.19 : ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗಣಪತಿ ಹವನ, ಸುಬ್ರಹ್ಮಣ್ಯ ಹವನದ ಸಂಕಲ್ಪ, ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಪರಿವಾರ ದೇವರಿಗೆ ತಂಬಿಲ ಹಾಗೂ ಸುಬ್ರಹ್ಮಣ್ಯ ಹವನದ ಪೂರ್ಣಾಹುತಿ, ಶ್ರೀ ದೇವರಿಗೆ ಮಹಾಪೂಜೆ, ಪಲ್ಲಪೂಜೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರು ಹಾಜರಿದ್ದರು.

ಕ್ಯಾoಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಸಹಾಯಧನ ಹಸ್ತಾಂತರ

ಕ್ಯಾoಪ್ಕೋ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಅಲಂಕಾರು ಶಾಖೆಯ ಸಕ್ರೀಯ ಸದಸ್ಯರಾದ  ಶ್ರೀ ಅಬ್ದುಲ್ ರಹಿಮಾನ್ ಎಚ್, ಕೊಯಿಲ ಇವರ ತೆರೆದ ಹೃದಯದ ಚಿಕಿತ್ಸೆಗೆ ಕ್ಯಾoಪ್ಕೋ ಸಹಾಯಧನದ ಮೊತ್ತ ರೂ.66,500/- (ರೂಪಾಯಿ ಅರುವತ್ತಾರು ಸಾವಿರದ ಐನೂರು)ನ್ನು ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀ ಕೃಷ್ಣಪ್ರಸಾದ ಮಡ್ತಿಲ ಇವರು ದಿನಾಂಕ: 18.02.2025 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾದೇಶಿಕ...

ಗುತ್ತಿಗಾರಿನಲ್ಲಿ ಕಳೆದ ಐದು ದಿನಗಳಿಂದ ಕತ್ತಲೇ ಭಾಗ್ಯ – 3 ಫೇ ಸ್ ಇಲ್ಲದೇ ಸಾರ್ವಜನಿಕ ಕುಡಿಯುವ ನೀರಿಗೂ ಹಾಹಾಕಾರ- ತೋಟಕ್ಕೆ ನೀರಿಲ್ಲದೇ ಕೃಷಿಕರು ಕಂಗಾಲು

ಗುತ್ತಿಗಾರು ಭಾಗದಲ್ಲಿ ಹಲವಾರು ದಿನಗಳಿಂದ 3 ಫೇಸ್ ವಿದ್ಯುತ್ ಇಲ್ಲದೇ ಕೃಷಿಕರು ಸಮಸ್ಯೆ ಅನುಭವಿಸುವಂತಾಗಿದೆ. ಭೂಗತ ಕೇಬಲ್ ಫಾಲ್ಟ್ ಕಾರಣ ನೀಡಿ ಫೆ.15 ರಿಂದ 3 ಫೇಸ್ ನೀಡದೇ ಇಲಾಖೆ ಇದ್ದರೂ ಜನಪ್ರತಿನಿಧಿಗಳು ಅಧಿಕಾರಿಗಳು ಮೌನ ವಹಿಸಿದ್ದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 3 ಫೇಸ್ ಇಲ್ಲದೇ ಜನತೆಗೆ ಸಾರ್ವಜನಿಕ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದ್ದು ಜತೆಗೆ...

ಗಾಯಕಿ ಸಂಧ್ಯಾ ಮಂಡೆಕೋಲುರಿಗೆ ರಾಷ್ಟ್ರೀಯ ರತ್ನ ಅವಾರ್ಡ್

ಇಂಟರ್ನ್ಯಾಷನಲ್ ಪ್ಯೂಮನ್ ಡೆವಲಪ್ಟೆಂಟ್ ಕೌನ್ಸಿಲ್‌ ಇಂಡಿಯಾ ಇವರು ವಿವಿಧ ಕ್ಷೇತ್ರದಲ್ಲಿ ಕೊಡಮಾಡುವ ರಾಷ್ಟ್ರೀಯ ರತ್ನ ಪ್ರಶಸ್ತಿ ಗೆ ಗಾಯಕಿ ಸಂಧ್ಯಾ ಮಂಡೆಕೋಲು ಭಾಜನರಾಗಿದ್ದು, ಫೆ.15ರಂದು ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಿತು. ಗಾಯನ ಕ್ಷೇತ್ರದಲ್ಲಿ ಸಂಧ್ಯಾ ಮಂಡೆಕೋಲುರವರು ಈ ಪ್ರಶಸ್ತಿ ಗೆ ಭಾಜನರಾಗಿದ್ದು, ಈಗಾಗಲೇ ಇವರನ್ನು ವಿವಿಧ ಸಂಘ ಸಂಸ್ಥೆಗಳು ಗೌರವಿಸಿದೆ. ಇದೀಗ...
error: Content is protected !!