Ad Widget

ಲಗೇಜನ್ನು ಕಳ್ಳರು ಕದ್ದೋಯ್ದ  ಹಿನ್ನೆಲೆ ಕುಕ್ಕೆಯಿಂದ ಕೇರಳದ ಇಡುಕ್ಕಿಗೆ ನಡೆದೇ ಹೊರಟ ಕುಟುಂಬ – ವಿಷಯ ತಿಳಿದು ಬಸ್ ಪ್ರಯಾಣ ವೆಚ್ಚ ಭರಿಸಿದ ಸಮಾಜ ಸೇವಕ ಚಂದ್ರಶೇಖರ ಕಡೋಡಿ, ಧರ್ಮಗುರು ಆದರ್ಶ ಜೋಸೆಫ್

. . . . . . . . .

ಮೂಲತಃ ಕೇರಳದ ಇಡುಕ್ಕಿ ಜಿಲ್ಲೆಯ ತಂದೆ, ತಾಯಿ ಮತ್ತು ಮಗ ಸಿಬಿನ್ ಜೂವೇನ್ ಎಂಬವರು ಮೈಸೂರು ಕಡೆಗೆ ತೆರಳಿದ್ದು ಅಲ್ಲಿಂದ ಮಾಹೇ ಚರ್ಚಿಗೆ ವಾಪಾಸ್ ಆಗುವ ಸಂದರ್ಭದಲ್ಲಿ ತಮ್ಮಲಿದ್ದ ಲಗೇಜ್ ನಲ್ಲಿ ಪರ್ಸ್ ಮೊಬೈಲ್ ಸಮೇತ ಇಟ್ಟಿದ್ದು, ಕಳ್ಳರು ಸಂಪೂರ್ಣ ಲಗೇಜ್ ಕದ್ದಿದ್ದು, ದಿಕ್ಕು ತೋಚದೆ ಅವರು ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಬಂದಿದ್ದರು. ನಂತರ ದೂರ ಕೇರಳದ ಇಡುಕ್ಕಿಯ ತೊಕೂದುರು ಎಂಬ ಸ್ಥಳಕ್ಕೆ ನಡೆದು ಹೋಗುತ್ತಾ ಗುತ್ತಿಗಾರು ತಲುಪಿದ್ದು, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅವರ ಗಮನಕ್ಕೆ ಶೇಷಪ್ಪ ನಾಯ್ಕ್ ಹಾಲೆಮಜಲು ತಂದಿದ್ದು, ತಕ್ಷಣವೇ ಅವರನ್ನು ಉಪಚರಿಸಿ, ಚರ್ಚ್ ಫಾದರ್ ಆದರ್ಶ್ ಜೋಸೆಫ್ ಅವರೊಂದಿಗೆ ಮಲೆಯಾಳ ಮಾತಾಡಿಸಿ ಅವರನ್ನು ಊರಿಗೆ ಬಸ್ ಮೂಲಕ ಕಳುಹಿಸಿಕೊಡಲಾಯಿತು.
ಬಸ್ ವೆಚ್ಚವನ್ನು ಚರ್ಚ್ ಫಾದರ್ ಆದರ್ಶ್ ಜೋಸೆಫ್ , ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಮಾಲಕ ಸ್ವಾತಿಕ್ ಕನ್ನಡ್ಕ, ಭರತ್ ದೇರುಮಜಲು, ಶೇಷಪ್ಪ ನಾಯ್ಕ್ ಒಟ್ಟು 3800/ಅನ್ನು ಚಂದ್ರಶೇಖರ ಕಡೋಡಿ ಅವರು ಸಂಗ್ರಹಿಸಿ ಕಳುಹಿಸಿಕೊಟ್ಟಿರುತ್ತಾರೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!