Ad Widget

ಸುಳ್ಯ: ಕುಕ್ಕನ್ನೂರು ದೈವಗಳ ಭಂಡಾರ ಆಗಮನ – ಧ್ವಜಾರೋಹಣ – ಸುಳ್ಯ ಪುರದೊಡೆಯನಿಗೆ ಜಾತ್ರಾ ಸಂಭ್ರಮ

ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಜ.03 ರಂದು ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು, ಸಂಜೆ ಪನ್ನೇಬೀಡು ನಾಲ್ಕು ಸ್ಥಾನ ಚಾವಡಿನಿಂದ ಬಲ್ಲಾಳರ ಪಯ್ಯೊಲಿ ತರಲಾಯಿತು, ರಾತ್ರಿ ಕುಕ್ಕನ್ನೂರು ದೈವಗಳ ಭಂಡಾರ ಆಗಮನ ದ ಬಳಿಕ ತಂತ್ರಿಗಳು ವಿವಿಧ ಧಾರ್ಮಿಕ ವಿಧಿ ವಿಧಾನ ಗಳನ್ನೂ ನೆರವೇರಿಸಿ ಧ್ವಜಾರೋಹಣ ನಡೆಯಿತು.

ಬೆಳ್ಳಾರೆಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ರೋಟರಿ ಕ್ಲಬ್ ಬೆಳ್ಳಾರೆ ಟೌನ್,ಜೇಸಿಐ ಬೆಳ್ಳಾರೆ, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗ ಮಂಗಳೂರು ಇವುಗಳ...
Ad Widget

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಮೃತ್ಯು – ಆರೋಪಿ ಬೈಕ್ ಸವಾರ ದೋಷಮುಕ್ತ

ಕಳೆದ ವರ್ಷ ಜಾಲ್ಸುರು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಬೈಕ್ ಚಾಲಕ ರಾಜಶೇಖರ ಎಂಬತನನ್ನು ದೋಷ ಮುಕ್ತ ಗೊಳಿಸಿ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯ ಆದೇಶಿಸಿದೆ.ದಿನಾಂಕ : 28-12-2023ರಂದು ಬೆಳಿಗ್ಗೆ ಮಾಣಿ - ಮೈಸೂರು ಹೆದ್ದಾರಿ ರಸ್ತೆಯ ಸುಳ್ಯದ ಜಾಲ್ಸೂರು ಪೇಟೆಯ ಫಾರೆಸ್ಟು ಚೆಕ್ ಪೋಸ್ಟ್ ...

ಕುಶಾಲಪ್ಪ ಗೌಡ ಪೇರಾಲುಮೂಲೆ ನಿಧನ

ಮಂಡೆಕೋಲು ಗ್ರಾಮದ ಪೇರಾಲು ಮೂಲೆ ಗಂಗಮ್ಮ-ಚಂಗಪ್ಪ ದಂಪತಿಗಳ ಚತುರ್ಥ ಪುತ್ರರಾದ ಕುಶಾಲಪ್ಪ ಗೌಡ ಪೇರಾಲು ಮೂಲೆ ರವರು ಜ.02 ರಂದು ನಿಧನರಾದರು.ಮೃತರಿಗೆ 47 ವರ್ಷ ವಯಸ್ಸಾಗಿತ್ತು.ಮೃತರು ಸಹೋದರರಾದ ಚಿನ್ನಪ್ಪ ಗೌಡ, ಗೋಪಾಲಕೃಷ್ಣ, ಪರಮೇಶ್ವರ್ ಗೌಡ, ಸಹೋದರಿಯರಾದ ಶ್ರೀಮತಿ ರಾಜೀವಿ, ಶ್ರೀಮತಿ ಅನಿತಾ ಹಾಗೂ ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸುಳ್ಯ : ನೂತನ ಬ್ರಹ್ಮರಥ ಆಗಮನ ಹಿನ್ನೆಲೆಯಲ್ಲಿ ಹಳೆ ರಥ ನವೀಕರಣಕ್ಕಾಗಿ ಕೋಟೆಶ್ವರಕ್ಕೆ

ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಡಾ. ಕೆ.ವಿ‌. ಚಿದಾನಂದ ರವರು ನೂತನ ಬ್ರಹ್ಮರಥ ಸಮರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಹಳೆಯ ರಥವನ್ನು ನವೀಕರಣಕ್ಕಾಗಿ ಕೋಟೇಶ್ವರಕ್ಕೆ ಶಿಪ್ಟ್ ಮಾಡಲಾಗಿದೆ. ಈ ಹಳೆ ರಥವನ್ನು ನವೀಕರಿಸಿ ದೇವಸ್ಥಾನದ ಒಳಾಂಗಣದಲ್ಲಿ ಬಂಡಿ ರಥವನ್ನಾಗಿ ಮಾರ್ಪಾಡು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಸುಳ್ಯ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿಯಾಗಿದ್ದ ಸಂತೋಷ್ ಕುಮಾರ್ ರೈ ನಿಧನ.

ಸುಳ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸುಳ್ಯ ಯೋಜನಾಧಿಕಾರಿಯಾಗಿ ಕೆಲಸ ನಿರ್ವಹಿಸಿ ವರ್ಗಾವಣೆ ಗೊಂಡು ಬಳಿಕ ಇದೀಗ ಬಿಜಾಪುರದಲ್ಲಿ ಜಿಲ್ಲಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಕುಮಾರ್ ರೈ ಯವರು ಇಂದು ಮುಂಜಾನೆ ಹೃದಯಾಘಾತದಿಂದ ನಿದನರಾದರು ಇವರು ಮೂಲತಃ ಸವಣೂರಿನವರು ಎಂದು ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸಂಪಾಜೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಅಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ ಉಪಾಧ್ಯಕ್ಷರಾಗಿ ಶ್ರೀಮತಿ ಯಮುನ ಬಿ.ಎಸ್. ಅವಿರೋಧ ಆಯ್ಕೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಯಮುನ ಬಿ.ಎಸ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜ.2ರಂದು ನಡೆದ ನೂತನ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೋಮಶೇಖರ ಕೊಯಿಂಗಾಜೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಯಮುನ ಬಿ.ಎಸ್. ಅವರು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ...

ಹರಿಹರ ಪಳ್ಳತ್ತಡ್ಕ : ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ

ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಬೇಕೆಂಬ ಸದುದ್ದೇಶದಿಂದ ಹರಿಹರ ಪಳ್ಳತ್ತಡ್ಕದ ಸಚಿನ್ ಕ್ರೀಡಾ ಸಂಘ ಹಾಗೂ ದಾನಿಗಳ ಸಹಕಾರದೊಂದಿಗೆ ನೂತನವಾಗಿ ಖರೀದಿಸಿದ ಅಂಬ್ಯುಲೆನ್ಸ್ ವಾಹನದ ಲೋಕಾರ್ಪಣೆ ಕಾರ್ಯಕ್ರಮವು ಜ.02 ರಂದು ಹರಿಹರ ಪಳ್ಳತ್ತಡ್ಕದಲ್ಲಿ ನಡೆಯಿತು.ಬೆಳಿಗ್ಗೆ ಅಂಬ್ಯುಲೆನ್ಸ್ ವಾಹನವನ್ನು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ನೆರವೇರಿಸಿ ನಂತರ ಎಲ್ಲಪಡ್ಕದ ಶ್ರೀ ಗುಳಿಗರಾಜನ ಕಟ್ಟೆಯ ಬಳಿ...

ಮುಂಡಕಜೆ ಜಂಕ್ಷನ್ ನಲ್ಲಿ ಪಿಕಪ್ ವಾಹನ ಪಲ್ಟಿ

ಅಮರಪಡೂರು ಗ್ರಾಮದ ಕಣಿಪ್ಪಿಲ ಎಂಬಲ್ಲಿ ಇಂದು ಬೆಳಿಗ್ಗೆ ಪಿಕಪ್ ಪಲ್ಟಿಯಾದ ಘಟನೆ ವರದಿಯಾಗಿದೆ. ಚೊಕ್ಕಾಡಿಯಿಂದ ಸುಳ್ಯಕ್ಕೆ ಕೆಲಸಕ್ಕೆ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಪಿಕಪ್ ಪಲ್ಟಿಯಾಗಿದ್ದು, ಅದರಲ್ಲಿ 6 ಜನ ಇದ್ದರು. ಪಲ್ಟಿಯಾದ ರಭಸಕ್ಕೆ ಎಲ್ಲರಿಗೂ ಗಾಯಗಳಾಗಿದ್ದು, ಅವರ ಸುಳ್ಯ ಆಸ್ಪತ್ರೆ ಗೆ ಚಿಕಿತ್ಸೆಗೆ ಕರೆತರಲಾಯಿತು. ಈ ಪಿಕಪ್ ನಲ್ಲಿ ಯತೀನ್ ಪುಳಿಮರಡ್ಕ ಚಾಲಕರಾಗಿದ್ದರು ಎಂದು ಹೇಳಲಾಗುತ್ತಿದೆ.

ಕಣೆಮರಡ್ಕ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ಹಾಗೂ ಶನೈಶ್ಚರ ಪೂಜೆ ಮುಂದೂಡಿಕೆ

ಮಂಡೆಕೋಲು ಗ್ರಾಮದ ಕಣೆಮರಡ್ಕ ಅಯ್ಯಪ್ಪ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದೆಂದು ಶಬರಿಗಿರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
Loading posts...

All posts loaded

No more posts

error: Content is protected !!