Ad Widget

ಎಲಿಮಲೆ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ – ಅಭ್ಯಾಸ ವರ್ಗ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ತಾಲೂಕಿನ ಕಸ್ತೂರಿ ರಂಗನ್ ವರದಿ ಭಾದಿತ ಗ್ರಾಮಗಳ, ಮ.ಜ.ಹಿ.ರ.ವೇ ಯ ಕಾರ್ಯಕರ್ತರ ಅಭ್ಯಾಸ ವರ್ಗ ಇಂದು ನೆಲ್ಲೂರು ಕೆಮ್ರಾಜೆ ಸೊಸೈಟಿ ಹಾಲ್ ನಲ್ಲಿ ನಡೆಯಿತು. ಮ.ಜ.ಹಿ.ರ.ವೇ ಯ ಸುಳ್ಯ ತಾಲೂಕಿನ ಸಂಚಾಲಕರಾದ  ಚಂದ್ರಶೇಖರ ಬಾಳುಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹಕಾರಿ ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಕಾರ್ಯಕ್ರಮ...

ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾಗಿದ್ದ ರೌಡಿಶೀಟರ್ ಕೇಸು ರದ್ದುಗೊಳಿಸಿದ ಹೈಕೋರ್ಟ್

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕೊಲ್ಲಮೊಗ್ರ ಮೂಲದ ಹಿಂದೂ ಕಾರ್ಯಕರ್ತ ಕಾರ್ತಿಕ್ ಪಿ ಇವರ ಮೇಲೆ ದಾಖಲಾಗಿದ್ದ ರೌಡಿಶೀಟರ್ ನ್ನು ಕರ್ನಾಟಕದ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ, ಅರ್ಜಿದಾರರ ಪರ ಹೈಕೋರ್ಟ್ ನ್ಯಾಯವಾದಿ ಬಿ ವಿನೋದ್ ಕುಮಾರ್ ವಾದ ಮಂಡಿಸಿದ್ದರು.
Ad Widget

ಜಯನಗರ: ಮಂತ್ರವಾದಿ ಗುಳಿಗನ ಕಟ್ಟೆ ಪ್ರತಿಷ್ಠಾ ವಾರ್ಷಿಕೋತ್ಸವ – ವಿಶೇಷ ಅಲಂಕಾರ ಪೂಜೆ

ಜಯನಗರದ ನಿಸರ್ಗ ಮಸಾಲೆ ಫ್ಯಾಕ್ಟರಿ ಬಳಿ ಇರುವ ಮಂತ್ರವಾದಿ ಗುಳಿಗನ ಕಟ್ಟೆಯಲ್ಲಿ  ಪ್ರತಿಷ್ಠ ದಿನದ ಅಂಗವಾಗಿ ಇಂದು ವಿಶೇಷ ಅಲಂಕಾರ ಪೂಜೆ ನೆರವೇರಿತು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು . ಅನ್ನದಾನದ ಸೇವೆಯನ್ನು ವಿವೇಕಾನಂದ ಜಯನಗರ ಹಾಗೂ ಸಿಹಿ ತಿಂಡಿಯನ್ನು ನಾಗೇಶ್ ರುಚಿ ಬೇಕರಿ ಸುಳ್ಯ, ಧ್ವನಿ ಮತ್ತು ವಿದ್ಯುತ್ ದೀಪ ಅಲಂಕಾರವನ್ನು ಶ್ರೀಧರ್...

ಕೊಳಂಗಾಯ ದಾಮೋದರ ನಿಧನ

ಪೆರಾಜೆ ಗ್ರಾಮದ ಕೊಳಂಗಾಯ ದಾಮೋದರ ಅವರು ಅಲ್ಫ ಕಾಲದ ಅಸೌಖ್ಯದಿಂದ ಜ.2 ರಂದು ಕೆ. ವಿ. ಜಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವನಜಾಕ್ಷಿ, ಪುತ್ರರಾದ ಜ್ಞಾನೇಶ, ಲಿಕೇಶ, ಡಿಕೇಶ ಹಾಗೂ ಸಹೋದರಿಯರನ್ನು ಆಗಲಿದ್ದಾರೆ.

ಸುಬ್ರಹ್ಮಣ್ಯ-ಐನೆಕಿದು ಪ್ರಾ.ಕೃ.ಪ.ಸ ಸಂಘದ ಚುನಾವಣೆ ; ನಾಮಪತ್ರ ಸಲ್ಲಿಸಿದ ಬಿಜೆಪಿಯ ಆರು ಮಂದಿ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬಿಜೆಪಿಯ ಆರು ಮಂದಿ ಜ.03 ರಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಗಿರೀಶ್ ಪೈಲಾಜೆ, ಕಿರಣ್ ಪೈಲಾಜೆ, ಯಶೋಧಕೃಷ್ಣ ನೂಚಿಲ, ಪಪ್ಪು ಲೋಕೇಶ್, ಸುಬ್ರಹ್ಮಣ್ಯ.ಕೆ.ಎಲ್, ಜಯಪ್ರಕಾಶ್ ಕತ್ತಿಮಜಲು ನಾಮಪತ್ರ ಸಲ್ಲಿಕೆ ಮಾಡಿದರು.

ಬಂಟ್ವಾಳ ಬಿಇಒ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಪ್ರಕಾಶ್ಚಂದ್ರ ಹೇಮಳ ಅಸೌಖ್ಯದಿಂದ ನಿಧನ

ಎಡಮಂಗಲ ಗ್ರಾಮದ ಹೇಮಳ ದಿ. ಈಶ್ವರ ಗೌಡರ ಪುತ್ರ, ಬಂಟ್ವಾಳ ಬಿಇಒ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಪ್ರಕಾಶ್ಚಂದ್ರ ಹೇಮಳರವರು ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. ಸುಳ್ಯ ಸರಕಾರಿ ಜೂನಿಯ‌ರ್ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಉದ್ಯೋಗಿಯಾಗಿದ್ದ ಇವರು ಆ ಬಳಿಕ ಬಂಟ್ವಾಳ ಬಿಇಒ ಕಚೇರಿ ಗೆ ಅಧೀಕ್ಷಕರಾಗಿ...

ದೇವಾಲಯ ಸಂಸ್ಕಾರ, ಸಂಸ್ಕೃತಿ ಸಾರುವ ಪ್ರಧಾನ ಕೇಂದ್ರ – ಎಡನೀರು ಶ್ರೀ

ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಮಾಡಬೇಕಾದುದು ನಮ್ಮ ಕರ್ತವ್ಯ. ದೇವಾಲಯಗಳು ಸಂಸ್ಕಾರ, ಸಂಸ್ಕೃತಿ ಸಾರುವ ಪ್ರಧಾನ ಕೇಂದ್ರ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಮೊದಲ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಯುವಜನತೆಯಲ್ಲಿ ಧಾರ್ಮಿಕ ಶ್ರದ್ಧೆ...

ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ,ನೂತನ ಬಸ್ಸು ಆಗಮನ.

ಅಜ್ಜಾವರ ಗ್ರಾಮದ ಹಲವು ವರ್ಷಗಳ ಬೇಡಿಕೆಯಾದಸುಳ್ಯ ಅಡ್ಕಾರ್,ಪೇರಾಲು ಮಾರ್ಗವಾಗಿ ಅಡ್ಪಂಗಾಯಕ್ಕೆ ಸರ್ಕಾರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು ಆದರೆ ಅದು ಸಾಧ್ಯವಾಗದೇ ಇದ್ದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ನೇತೃತ್ವದಲ್ಲಿ ಅಧಿಕಾರಿಗಳಿಗೆ ತಿಳಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ನಡೆದ ಗ್ರಾಮ ಮಟ್ಟದ ವಿಲೇವಾರಿ ಸಭೆಯಲ್ಲಿಯು ಪ್ರತಿಧ್ವನಿಸಿದ ಪರಿಣಾಮವಾಗಿ ಸಾರ್ವಜನಿಕರಿಗೆ ಮತ್ತು...

ಕುಕ್ಕೆ : ಹಿರಿಯ ಸಹಾಯಕ ಆಯುಕ್ತರಾಗಿ ಭಡ್ತಿ ಹೊಂದಿದ ಜುಬಿನ್ ಮೊಹಾಪಾತ್ರ ರಿಗೆ ಅಭಿನಂದನೆ

ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಹಿರಿಯ ಸಹಾಯಕ ಆಯುಕ್ತರಾಗಿ ಭಡ್ತಿ ಹೊಂದಿರುತ್ತಾರೆ. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಗಳು ಆಗಿರುವ ಜುಬಿನ್ ಮೊಹಪಾತ್ರ ರನ್ನು ಶ್ರೀ ದೇವಳದ ಆಡಳಿತ ಕಚೇರಿಯಲ್ಲಿ ಅಭಿನಂದಿಸಲಾಯಿತು. ಪದೋನ್ನತಿ ಹೊಂದಿದ ಅಧಿಕಾರಿಯನ್ನು ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಗೌರವಿಸಿದರು.ಈ ಸಂದರ್ಭ ಶ್ರೀ ದೇವಳದ...

ದಶಮಾನೋತ್ಸವದ ಸಂಭ್ರಮದಲ್ಲಿ ಪೈಂಬೆಚ್ಚಾಲು ಅಜ್ಮೀರ್ ಮೌಲಿದ್

ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ದಟ್ಟ ಕಾನನದ ಮಧ್ಯೆಯಿರುವ ಪುಟ್ಟದಾದೊಂದು ಊರು.ಸುತ್ತಲೂ ಬೆಟ್ಟಗುಡ್ಡಗಳು ಅದರ ಮಧ್ಯೆ ಮೂರು ಸಣ್ಣ ಹೊಳೆಗಳು ಹರಿದು ಒಟ್ಟು ಸೇರಿ ಒಂದು ದೊಡ್ಡಹೊಳೆಯಾಗಿ ಹರಿದು ಪಯಸ್ವಿನಿ ನದಿ ಸೇರುತ್ತದೆ. ಹೊಳೆಸುತ್ತಲೂ ಅಡಿಕೆ ತೋಟಗಳು ಮತ್ತು ಹತ್ತಾರು ಮನೆಗಳು ಅದರ ಮಧ್ಯೆ ಕಂಗೊಳಿಸುವ ಭವ್ಯವಾದ ಮಸೀದಿ ಮತ್ತು ಮದ್ರಸಗಳು.ಸರಿಯಾದ ಮೂಲತ ಸೌಕರ್ಯವಿಲ್ಲದಿದ್ದರೂ ಅದನ್ನೇ ಸವಾಲಾಗಿ...
Loading posts...

All posts loaded

No more posts

error: Content is protected !!