Ad Widget

ಕಲ್ಮಕಾರು : ಬಿಜೆಪಿ ಸೇರ್ಪಡೆಗೊಂಡ ಸುಬ್ರಹ್ಮಣ್ಯ ಕೊಪ್ಪಡ್ಕ

ಕಲ್ಮಕಾರು ಗ್ರಾಮದ ಕೊಪ್ಪಡ್ಕ ಸುಬ್ರಹ್ಮಣ್ಯ ಕೊಪ್ಪಡ್ಕ ಮತ್ತು ಮೇನಕ ಸುಬ್ರಹ್ಮಣ್ಯ ಇವರು ಬಿಜೆಪಿಯ ತತ್ವ ಸಿದ್ಧಾಂತಗಳಿಗೆ ಬದ್ದವಾಗಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನವೀನ್ ಮುಳುಗಾಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ ಇವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.

ವೆಂಕಟರಮಣ ಸೊಸೈಟಿ ವತಿಯಿಂದ ಪಿ.ಸಿ.ಜಯರಾಮ ಮತ್ತು ಚಂದ್ರಾ ಕೋಲ್ಟಾರ್ ರವರಿಗೆ ಗೌರವಾರ್ಪಣೆ

ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿದ್ದು, ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಪಿ.ಸಿ.ಜಯರಾಮ ಹಾಗೂ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾದ ಹಾಲಿ ನಿರ್ದೇಶಕ ಚಂದ್ರಾ ಕೋಲ್ಟಾರ್ ರವರಿಗೆ ಸಂಘದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನರಾಮ್ ಸುಳ್ಳಿ, ನಿರ್ದೇಶಕರುಗಳಾದ ನಿತ್ಯಾನಂದ ಮುಂಡೋಡಿ, ಜಾಕೆ...
Ad Widget

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ: ಕಾಂಗ್ರೆಸ್ ಬೆಂಬಲಿತ 5 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳ ಆಯ್ಕೆಗೆ ಮತದಾನ ಜ.16 ರಂದು ನಡೆಯಲಿದೆ. ಜ.4 ರಿಂದ ಜ.8 ರ ತನಕ ಬೆಳಿಗ್ಗೆ ಗಂಟೆ 11 ರಿಂದ ಮಧ್ಯಾಹ್ನ ಗಂಟೆ 1 ತನಕ ನಾಮ ಪತ್ರ ಸಲ್ಲಿಕೆಗೆ ಅವಕಾಶ ಇರುತ್ತದೆ. ಜ.4 ರಂದು 5 ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ.ಸಾಮಾನ್ಯ...

ಉದ್ಯಮದಲ್ಲಿ ಗಳಿಸಿದ ಲಾಭದಲ್ಲಿ ಒಂದಿಷ್ಟನ್ನು ಸಂಕಷ್ಟದಲ್ಲಿದ್ದವರಿಗೆ ನೆರವು – ಅನಿಲ್ ಕುಮಾರ್ ಮಾನವೀಯತೆಗೆ ಜನ ಮೆಚ್ಚುಗೆ

ಪ್ರತಿ ವರ್ಷ ತನ್ನ ಉದ್ಯಮದಲ್ಲಿ ಗಳಿಸಿದ  ಲಾಭದಲ್ಲಿ  ಸ್ವಲ್ಪ ಹಣವನ್ನು ಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಗುತ್ತಿಗಾರಿನ ರಾಘವೆಂದ್ರ ಬೇಕರಿ ಮಾಲಕರಾದ ಅನಿಲ್ ಕುಮಾರ್ ರವರು ಮಾದರಿಯಾಗಿದ್ದಾರೆ. ನಾಲ್ಕೂರು ಗ್ರಾಮದ ಚಾರ್ಮಾತ  ಹರಿಶ್ಚಂದ್ರ ರವರ  ಒಂದು ವರ್ಷ ಏಳು ತಿಂಗಳ ಮಗುವಿಗೆ ಆರೋಗ್ಯ ಸಮಸ್ಯೆ ಇದ್ದು ತಿಂಗಳಿಗೆ ಸುಮಾರು ಮೂರರಿಂದ ನಾಲ್ಕು ಸಾವಿರ ಚಿಕಿತ್ಸೆಗೆ ಬೇಕಾಗಿರುತ್ತದೆ....

ಗುತ್ತಿಗಾರು :  ಆರೋಗ್ಯ ಸುರಕ್ಷಾಧಿಕಾರಿಯಾಗಿದ್ದ ಪದ್ಮವೇಣಿ ಕುಡೆಕಲ್ಲುರವರಿಗೆ ಬೀಳ್ಕೊಡುಗೆ

ಗುತ್ತಿಗಾರು ಪ್ರಾ.ಆ.ಕೇಂದ್ರದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಡಿ. 31ರಂದು ಸೇವಾ ನಿವೃತ್ತಿ ಪಡೆದ ಪದ್ಮವೇಣಿ ಕುಡೆಕಲ್ಲುರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಡಿ. 31ರಂದು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ...

ಕನಕಮಜಲು ಸೊಸೈಟಿ ಅಧ್ಯಕ್ಷರಾಗಿ  ಸುಧಾಕರ್ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ವೆಂಕಪ್ಪ ನಾಯ್ಕ ದೇರ್ಕಜೆ ಅವಿರೋಧ ಆಯ್ಕೆ

ಕನಕಮಜಲು ಪ್ರಾ.ಕೃ.ಪ.ಸ.ಸಂಘದ  ನೂತನ  ಅಧ್ಯಕ್ಷರಾಗಿ  ಸುಧಾಕರ್ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ವೆಂಕಪ್ಪ ನಾಯ್ಕ ದೇರ್ಕಜೆ ಆಯ್ಕೆ ಅವಿರೋಧವಾಗಿ ಆಯ್ಕೆಯಾದರು.

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನೆಯ ಆಮಂತ್ರಣ ಬಿಡುಗಡೆ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜ. ೩೦ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಜ.4ರಂದು ದೇವಳದ ವಠಾರದಲ್ಲಿ ನಡೆಯಿತು.ರಾಮಕಜೆ ರಾಜಗೋಪಾಲರವರು ಆಮಂತ್ರ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್‌ ಅಮೆಚೂರು, ಸಹಕಾರ್ಯದರ್ಶಿ ಚಿನ್ನಪ್ಪ ಅಡ್ಕ, ಮಾಜಿ...

ಅಜ್ಜಾವರ : ಶಾಲಾ ನೀರಿನ ಸಂಪರ್ಕ ಕಡಿತಗೊಳಿಸಿದ ಗ್ರಾ.ಪಂ. – ಎಸ್ ಡಿ ಎಂ ಸಿ ಯಿಂದ ಇಲಾಖೆಗೆ ದೂರು – ಪುನರ್ ಸಂಪರ್ಕ ನೀಡಿದ ಗ್ರಾಮ ಪಂಚಾಯತ್ – ಶತಮಾನೋತ್ಸವ ಸಂಭ್ರಮದ ಶಾಲೆಯಲ್ಲಿ ಅಭಿವೃದ್ಧಿಗೆ ಬ್ರೇಕ್ !

ಸರಕಾರಿ ಶಾಲೆಗಳ ಉತ್ತೇಜನಕ್ಕೆ ಹಲವಾರು ರೀತಿಯ ಯೋಜನೆಗಳನ್ನು ಸರಕಾರಗಳು ನಡೆಸುತ್ತಿದ್ದು ಖಾಸಗಿ ಶಾಲೆಗಳ ಸ್ಪರ್ಧೆಯಿಂದ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವಾಗ ಸರಕಾರಿ ಶಾಲೆಗಳಿಗೆ ಸರಕಾರಿ ಸಂಸ್ಥೆಯೇ ನೀರಿನ ಸಂಪರ್ಕ ಕಡಿತ ಗೊಳಿಸಿದ್ದರು. ಈ ಶಾಲೆಯವರು ದೂರು ಸಲ್ಲಿಸಿದ ಬಳಿಕ ಹಿರಿಯ ಅಧಿಕಾರಿಗಳ ಖಡಕ್ ಎಚ್ಚರಿಕೆಯ ಬಳಿಕ ನೀರಿನ ಸಂಪರ್ಕ ಮರು ಜೋಡಣೆ ನಡೆಸಿದ ಘಟನೆ ಜ.೩ ರಂದು...

ಅಜ್ಜಾವರ : ಶಾಲಾ ನೀರಿನ ಸಂಪರ್ಕ ಕಡಿತಗೊಳಿಸಿದ ಗ್ರಾ.ಪಂ. – ಎಸ್ ಡಿ ಎಂ ಸಿ ಯಿಂದ ಇಲಾಖೆಗೆ ದೂರು – ಪುನರ್ ಸಂಪರ್ಕ ನೀಡಿದ ಗ್ರಾಮ ಪಂಚಾಯತ್ – ಶತಮಾನೋತ್ಸವ ಸಂಭ್ರಮದ ಶಾಲೆಯಲ್ಲಿ ಅಭಿವೃದ್ಧಿಗೆ ಬ್ರೇಕ್ !

ಸರಕಾರಿ ಶಾಲೆಗಳ ಉತ್ತೇಜನಕ್ಕೆ ಹಲವಾರು ರೀತಿಯ ಯೋಜನೆಗಳನ್ನು ಸರಕಾರಗಳು ನಡೆಸುತ್ತಿದ್ದು ಖಾಸಗಿ ಶಾಲೆಗಳ ಸ್ಪರ್ಧೆಯಿಂದ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವಾಗ ಸರಕಾರಿ ಶಾಲೆಗಳಿಗೆ ಸರಕಾರಿ ಸಂಸ್ಥೆಯೇ ನೀರಿನ ಸಂಪರ್ಕ ಕಡಿತ ಗೊಳಿಸಿದ್ದರು. ಈ ಶಾಲೆಯವರು ದೂರು ಸಲ್ಲಿಸಿದ ಬಳಿಕ ಹಿರಿಯ ಅಧಿಕಾರಿಗಳ ಖಡಕ್ ಎಚ್ಚರಿಕೆಯ ಬಳಿಕ ನೀರಿನ ಸಂಪರ್ಕ ಮರು ಜೋಡಣೆ ನಡೆಸಿದ ಘಟನೆ ಜ.೩ ರಂದು...

ನಿಂತಿಕಲ್ಲು ಸುಬ್ರಮಣ್ಯ ರಸ್ತೆಯ ಅಪಾಯಕಾರಿ ಮರ ತೆರವು

ನಿಂತಿಕಲ್ಲು ಸುಬ್ರಮಣ್ಯ ರಸ್ತೆಯ ಬದಿಯಲ್ಲಿ ವಿದ್ಯುತ್ ಲೈನ್ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ಮರ ತೆರವು ಮಾಡಲಾಯಿತು.ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ತೆರವು ಮಾಡಲಾಯಿತು.
Loading posts...

All posts loaded

No more posts

error: Content is protected !!