- Friday
- April 18th, 2025

ಸುಳ್ಯದ ನಗರ ಪರಿಸರದಲ್ಲಿ ಹಲವು ಸಮಸ್ಯೆಗಳಿದ್ದು ಸ್ಪಂದಸುವಂತೆ ಕೋರಿ ಡಿ.4 ರಂದು ಪೈಚಾರ್ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ನೀಡಲಾಯಿತು. ಪೈಚಾರಿನಿಂದ ಸುಳ್ಯ ನಗರ ಪ್ರವೇಶ ಮಾಡುವ ರಸ್ತೆಯ ವರೆಗೂ ಬೀದಿ ದೀಪ ಕಂಬಗಳಲ್ಲಿ ದೀಪಗಳಿಲ್ಲದೆ ಕತ್ತಲೆಯಿಂದ ಕೂಡಿದೆ. ಅಲ್ಲದೆ ಶಾಂತಿನಗರ ತಿರುವಿನಲ್ಲಿರುವ ಹೈ ಮಾಸ್ ದೀಪ ಹಾಳಾಗಿ ರಾತ್ರಿ...

ಮಾಕಸ್ ಲೈಟ್, ಇನ್ಸೂರೆನ್ಸ್, ಮಾಕಸ್ ಪೈನಾನ್ಸಿಯಲ್, ಹಾಗೂ ಐಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬ್ಬಂದಿವರ್ಗದ ನೇತೃತ್ವದಲ್ಲಿ ಮಂಗಳೂರಿನ ಟ್ರಿನಿಟಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನ ಅಡ್ಕಾರ್ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಈಕೆ ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್ ಅಡ್ಕಾರ್ ದಂಪತಿಗಳ ಪುತ್ರಿ. ಈಕೆ ಸೈಂಟ್ ಜೋಸೇಫ್ ಆಂಗ್ಲ...

ಪಕ್ಷ ಸಂಘಟನೆಗಾಗಿ ಯಾರು ಕರೆದರು ಬರುವೆ , ಕೈ ಮುಷ್ಟಿ ಮಾದರಿಯಲ್ಲಿ ಎಲ್ಲರನ್ನು ಒಳಗೊಂಡು ಪಕ್ಷ ಸಂಘಟಿಸಬೇಕು ಭಂಡಾರಿ ಕಿವಿಮಾತು. ಕಾರ್ಯಕರ್ತರ ಪರವಾಗಿ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ - ಎಂ ವೆಂಕಪ್ಪ ಗೌಡ ಮೊದಲು ಪಕ್ಷದ ಒಳಗೆ ಸ್ವಚ್ಚಗೊಳಿಸಬೇಕು ಬಳಿಕ ಅಧಿಕಾರಿಗಳ ಬಳಿಗೆ ಹೋಗಬೇಕು - ಕಂಠಿ ಆಗ್ರಹ ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ...

ಸುಳ್ಯ: ಸುಳ್ಯದ ರಥಬೀದಿಯಲ್ಲಿ ಸುಳ್ಯ ನಗರದ ಕುಡಿಯುವ ನೀರಿನ ಯೋಜನೆಯ ಪೈಪ್ ಕಾಮಗಾರಿ ನಡೆಸುತ್ತಿದ್ದು ಪೈಪ್ ಅಳವಡಿಕೆ ಬಳಿಕ ಗುಂಡಿಯನ್ನು ಮುಚ್ಚಲಾಗಿತ್ತು. ಕಳೆದೆರಡು ದಿನಗಳಿಂದ ಮಳೆ ಸುರಿದ ಹಿನ್ನೆಲೆಯಲ್ಲಿ ಗುಂಡಿ ಮುಚ್ಚಿದ ಜಾಗದಲ್ಲಿ ರಥಬೀದಿಯ ದಿನಸಿ ಅಂಗಡಿಗೆ ಸಾಮಾಗ್ರಿಗಳನ್ನು ಹೊತ್ತು ತಂದ ಲಾರಿಯು ಹೂತು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆ ಇದೀಗ ವರದಿಯಾಗಿದೆ.

ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಅರ್ಧ ಸಮಸ್ಯೆ ಪರಿಹಾರವಾದಂತೆ- ಮಂಜುನಾಥ ಭಂಡಾರಿ ಸಮಸ್ಯೆಗಳನ್ನು ತಿಳಿಸಿದ್ದು ಪರಿಹಾರ ಮಾರ್ಗವನ್ನು ತಿಳಿಸಿ ಸದನದಲ್ಲಿ ಪ್ರಶ್ನಿಸಿ ಪರಿಹಾರಕ್ಕೆ ಒತ್ತು - ಭಂಡಾರಿ. ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿದರೆ ಗ್ರಾಮಗಳ ಅರ್ಧದಷ್ಟು ಸಮಸ್ಯೆ ಪರಿಹಾರ ಮಾಡಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ...

ಸುಳ್ಯ ಸ.ಮಾ.ಹಿ. ಪ್ರಾ. ಶಾಲೆಗೆ ಎಂಆರ್ ಪಿಎಲ್ ಸಂಸ್ಥೆಯ ವತಿಯಿಂದ ಸುಮಾರು 7 ಲಕ್ಷ ವೆಚ್ಚದಲ್ಲಿ ನೂತನ ಸುಸಜ್ಜಿತ ಶೌಚಾಲಯ ನಿರ್ಮಿಸಲಿದ್ದು ಇದರ ಗುದ್ದಲಿ ಪೂಜೆ ಇಂದು ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರ ದ ಶಾಸಕಿ ಭಾಗಿರಥಿ ಮುರುಳ್ಯ ನೂತನ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್, ಹಿರಿಯ...

ನವೆಂಬರ್ 29 ರಂದು ಶುಕ್ರವಾರದಂದು ಲೋಕಾರ್ಪಣೆಗೊಂಡ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಲು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಲ್ ಆಗಮಿಸಬೆಕಿತ್ತು.ಅವರು ಅನಾರೋಗ್ಯ ನಿಮಿತ ಆ ದಿನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ . ಅವರು ನಾಳೆ ಡಿ.5 ಗುರುವಾರದಂದು ಮದ್ಯಾಹ್ನ 1 ಗಂಟೆಗೆ...

ಸುಳ್ಯ ತಾಲೂಕು ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ವತಿಯಿಂದ ಪಂಚಾಯತ್ ರಾಜ್ ಸಮಾವೇಶ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಭಾಂಗಣದಲ್ಲಿ ನಿರ್ಮಾಣ ಮಾಡಲಾದ ವೇದಿಕೆ ಇದೀಗ ಶಿಥಿಲಾವಸ್ಥೆ ತಲುಪಿದ್ದರಿಂದ ಈ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡದೇ ಮುಂಭಾಗದಲ್ಲಿ ಚಯರ್ ಗಳನ್ನು ಇರಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ...

ಗ್ರಾ.ಪಂ ಸಮಸ್ಯೆಗಳ ಬಗ್ಗೆ ವಿಷಯ ಮಂಡನೆ. ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ ವತಿಯಿಂದ ಪಂಚಾಯತ್ ರಾಜ್ ಸಮಾವೇಶವು ತಾಲೂಕು ಪಂಚಾಯತ್ ಸಭಾಂಗಣ ಸುಳ್ಯ ಇಲ್ಲಿ ದ.4 ರಂದು ನಡೆಯಿತು . ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಬೆಳಗಿ ಉದ್ಘಾಟಿಸಿದರು . ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿ ಮಾತನಾಡುತ್ತಾ ಗ್ರಾ.ಪಂ ಸಮಸ್ಯೆಗಳ...

ಸುಬ್ರಹ್ಮಣ್ಯ ಗ್ರಾ.ಪಂ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಹಲವು ಅಂಗಡಿಗಳಿಗೆ ಅಧಿಕಾರಿಗಳು ದಾಳಿ ಮಾಡಿ ಭಾರೀ ಪ್ರಮಾಣದಲ್ಲಿ ತಂಬಾಕು ಉತ್ಪನ್ನ ಸಹಿತ ನಿಷೇಧಿತ ಪಾಸ್ಟಿಕ್ ಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಡಿ.3 ರಂದು ನಡೆದಿದೆ. ಅಂಗಡಿಗಳಿಂದ ವಿವಿಧ ಕಂಪೆನಿಗಳ ಗುಟ್ಕಾಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನ ಹಾಗೂ ಪ್ಲಾಷ್ಟಿಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಅಪರೂಪದ...

All posts loaded
No more posts