
ಸುಳ್ಯ: ಸುಳ್ಯದ ರಥಬೀದಿಯಲ್ಲಿ ಸುಳ್ಯ ನಗರದ ಕುಡಿಯುವ ನೀರಿನ ಯೋಜನೆಯ ಪೈಪ್ ಕಾಮಗಾರಿ ನಡೆಸುತ್ತಿದ್ದು ಪೈಪ್ ಅಳವಡಿಕೆ ಬಳಿಕ ಗುಂಡಿಯನ್ನು ಮುಚ್ಚಲಾಗಿತ್ತು. ಕಳೆದೆರಡು ದಿನಗಳಿಂದ ಮಳೆ ಸುರಿದ ಹಿನ್ನೆಲೆಯಲ್ಲಿ ಗುಂಡಿ ಮುಚ್ಚಿದ ಜಾಗದಲ್ಲಿ ರಥಬೀದಿಯ ದಿನಸಿ ಅಂಗಡಿಗೆ ಸಾಮಾಗ್ರಿಗಳನ್ನು ಹೊತ್ತು ತಂದ ಲಾರಿಯು ಹೂತು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆ ಇದೀಗ ವರದಿಯಾಗಿದೆ.
