Ad Widget

ಕಾರು ಮತ್ತು ಬೈಕ್ ಮಧ್ಯೆ ಅಪಘಾತಬೈಕ್ ಸವಾರನ ಕಾಲಿಗೆ ಗಾಯ.

ಸುಳ್ಯ ಓಡಬಾಯ್ ಅಗ್ನಿ ಶಾಮಕ ಠಾಣಾ ಬಳಿಯಲ್ಲಿ ಕಾರ್ KL 57U8721 ಮತ್ತು ಬೈಕ್ KA01EM2405 ಪರಸ್ಪರ ಡಿಕ್ಕಿ ಹೊಡೆದಿದ್ದು ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪಾರ್ವತಿ ವಸಂತ ಕುಮಾರ್ ಕೋಟೆ ನಿಧನ

ಹಿರಿಯ ಸಹಕಾರಿ ಧುರೀಣ, ಸಜ್ಜನ ಬಂಧು ದಿ. ಕೋಟೆ ವಸಂತ ಕುಮಾರ್ ರವರ ಪತ್ನಿ ಪಾರ್ವತಿ ವಸಂತ ಕುಮಾರ್ ಕೋಟೆಯವರು ನ.23ರಂದು ನಿಧನರಾದರು.ಅವರಿಗೆ 81 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ಖ್ಯಾತ ಗಾಯಕ ಶಶಿಧರ ಕೋಟೆ, ಕೋಟೆ ಫೌಂಡೇಶನ್ ಸಂಸ್ಥಾಪಕ ಉದ್ಯಮಿ ರಘುರಾಮ ಕೋಟೆ, ಪುತ್ರಿ ಶಶಿಕಲಾ ಗಣಪಯ್ಯ ವನಸಿರಿ ಪೆರುವಾಜೆ ಹಾಗೂ ಅಪಾರ ಬಂಧು ಮಿತ್ರರನ್ನು...
Ad Widget

ರಾಜ್ಯ ಉಪಚುಣಾವಣೆ ಕಾಂಗ್ರೆಸ್ ಗೆಲುವು ಹಿನ್ನಲೆಯಲ್ಲಿ ಮೇನಾಲದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ.

ಅಜ್ಜಾವರ: ರಾಜ್ಯದಲ್ಲಿ ಶಿಗ್ಗಾವಿ , ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರಕ್ಕೆ ನಡೆದ ಉಪಚುಣಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವು ಹಿನ್ನಲೆಯಲ್ಲಿ ಮೇನಾಲ ಕಾಂಗ್ರೆಸ್ ಕಾರ್ಯಕರ್ತರು ರಂಜಿತ್ ರೈ ಮೇನಾಲ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.

ಉಪಚುನಾವಣೆ ಕಾಂಗ್ರೆಸ್ ಗೆಲುವು ಹಿನ್ನಲೆ ಸುಳ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಕರ್ನಾಟಕದ ಮೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಭೂತಪೂರ್ವ ವಿಜಯ ಗಳಿಸಿರುವ ಹಿನ್ನೆಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಬಸ್ಸುನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮಾಜಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ ಕರ್ನಾಟಕ ವಿಧಾನಸಭೆಯ ಮೂರು ಕ್ಷೇತ್ರಗಳಲ್ಲಿ...

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮ

ಮಾಜಿ ಸಂಸದ ನಳಿನ್ ಕುಮಾ‌ರ್ ಕಟೀಲ್ ರಿಂದ ಉದ್ಘಾಟನೆ, ಗಣ್ಯರ ಉಪಸ್ಥಿತಿ. ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅವರು ಅಧ್ಯಕ್ಷತೆ ವಹಿಸಿದರು.ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್‌. ಅಂಗಾರ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕರುಗಳಾದ ಶಶಿಕುಮಾ‌ರ್ ರೈ ಬಾಲ್ಯೂಟ್ಟು, ಎಸ್.ಎನ್. ಮನ್ಮಥ, ದ.ಕ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ...

ಕಲ್ಲಗುಡ್ಡೆ ವೃದ್ಧರೊಬ್ಬರು ನೇಣು‌ಬಿಗಿದು ಆತ್ಮಹತ್ಯೆ

ಅಜ್ಜಾವರ ಗ್ರಾಮದ ಕಲ್ಲಗುಡ್ಡೆ ಪರಮೇಶ್ವರ ಎಂಬವರು ಮನೆಯ ಪಕ್ಕದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದ್ದುಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಆತ್ಮಹತ್ಯೆಗೈದ ವ್ಯಕ್ತಿಯು ಸೊಸೆ ಪಕ್ಕದ ಮನೆಗೆ ತೆರಳಿದಾಗ ಅನಾರೋಗ್ಯದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು ಆತ್ಮಹತ್ಯೆಗೆ ನಿಖರ ಕಾರಣ ಪೋಲಿಸ್ ಇಲಾಖೆಯ ತನಿಖೆಯ ನಂತರ ತಿಳಿದು ಬರಲಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ...

ಪರಿವಾರಕಾನ ಬಸ್ಸು ನಿಲ್ದಾಣದ ಅವ್ಯವಸ್ಥೆ ಬಗ್ಗೆ ಅಮರಸುದ್ದಿ ವರದಿ ಬೆನ್ನಲ್ಲೇ ಸ್ವಚ್ಚಗೊಳಿಸಿದ ನಗರಾಡಳಿತ

ಪರಿವಾರಕಾನದಲ್ಲಿನ ಬಸ್ಸು ನಿಲ್ದಾಣಕ್ಕೆ ದಾರಿ ಹುಡುಕಿ ಕೊಡುವಿರಾ ಅಧಿಕಾರಿ, ಜನಪ್ರತಿನಿಧಿಗಳೆ ? ಎಂಬ ತಲೆ ಬರಹದೊಂದಿಗೆ ಅಮರ ಸುದ್ದಿ ವೆಬ್ ಸೈಟ್ ನಲ್ಲಿ ವರದಿಯನ್ನು ಪ್ರಕಟಿಸಿದ್ದು ಬಳಿಕ ಎಚ್ಚೆತ್ತುಕೊಂಡ ನಗರಾಡಳಿತ ಬಸ್ ನಿಲ್ದಾಣದ ಸುತ್ತಲಿನ ಪೊದೆ ಕಡಿದು ಸ್ವಚ್ಛಗೊಳಿಸಲಾಗಿದ್ದು ಇದು ಅಮರ ಸುದ್ದಿ ವರದಿಯ ಫಲಶ್ರುತಿಯಾಗಿದೆ.

ಡಿ.1: ಮಂಡೆಕೋಲಿನಲ್ಲಿ ಅರೆಭಾಷೆ ಗಡಿನಾಡ ಉತ್ಸವ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಡೆಕೋಲು ಗ್ರಾಮದ ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವವು ಡಿ.1ರಂದು ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಸಭಾಭವನದಲ್ಲಿ ನಡೆಯಲಿದೆ ಎಂದು ನ.23ರಂದು ಪ್ರತಿಕಾಗೋಷ್ಠಿ ನಡೆಸಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ...

ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮ

ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇಂದು ಅರಂತೋಡಿನಲ್ಲಿ ನಡೆಯುತ್ತಿದೆ. ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕ ನರೇಂದ್ರ ರೈ ದೇರ್ಲ ಉದ್ಘಾಟಿಸಿ ಮಾತನಾಡುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಸುಳ್ಯದ ಛಾಪು ಅನನ್ಯವಾದದ್ದು. ಕನ್ನಡ ಸಾಹಿತ್ಯ ಜಗತ್ತನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸ ನಮ್ಮ ವಿದ್ಯಾರ್ಥಿಗಳ ಗುರುತರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶ್ರೀಮತಿ...

ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ವತಿಯಿಂದ ದಿl ಜಿ.ಎಲ್ ಆಚಾರ್ಯ ಜನ್ಮ ಶತಾಬ್ದಿ ಹಾಗೂ ದೀಪಾವಳಿ ಆಚರಣೆಗೆ ಚಿನ್ನದ ನೆಕ್ಲೆಸ್ ಡ್ರಾ ಕಾರ್ಯಕ್ರಮ

ಪ್ರತಿಷ್ಟಿತ ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ವತಿಯಿಂದ ದಿl ಜಿ ಎಲ್ ಆಚಾರ್ಯ ಜನ್ಮ ಶತಾಬ್ದಿ ಹಾಗೂ ದೀಪಾವಳಿ ಪ್ರಯುಕ್ತ ವಿಶೇಷ ಕೊಡುಗೆ(glowing100) ಬಂಪರ್ ಬಹುಮಾನ ಚಿನ್ನದ ನೆಕ್ಲೆಸ್ ಡ್ರಾ ಕಾರ್ಯಕ್ರಮವು ಪುತ್ತೂರಿನ ಸಂಸ್ಥೆಯ ಮಳಿಗೆಯಲ್ಲಿ ನ 21 ರಂದು ನಡೆಯಿತು. ಡ್ರಾ ವನ್ನು ಯುಮುನ ಬೋರ್ ವೆಲ್ ನ ಮಾಲಕಿ ಶ್ರೀಮತಿ ದಿವ್ಯ ಕೆ...
Loading posts...

All posts loaded

No more posts

error: Content is protected !!