Ad Widget

ಜೇಸಿಐ ಸುಳ್ಯ ಪಯಸ್ವಿನಿ(ರಿ) ಸುಳ್ಯ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರ

ಜೆಸಿಐ ಸಪ್ತಾಹ 2024ರ ಅಂಗವಾಗಿ ಬಿ.ಸಿ.ಎಂ ಹಾಸ್ಟೆಲ್ ಕುರುಂಜಿಭಾಗ್ ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರ ಸೆ.10ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸುಳ್ಯ ಪಯಸ್ವಿನಿ (ರಿ) ಇದರ ಅಧ್ಯಕ್ಷರಾದ ಜೇಸಿ. ಗುರುಪ್ರಸಾದ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಪೂರ್ವ ವಲಯಾದ್ಯಕ್ಷರಾದ ಜೇಸಿ, ಹೆಚ್.ಜಿ.ಎಫ್ ದೇವಿಪ್ರಸಾದ್ ಕುದ್ಪಾಜೆ ಭಾಗವಹಿಸಿ ಶುಭ ಹಾರೈಸಿದರು....

ವನಜ ರಂಗಮನೆ ಪ್ರಶಸ್ತಿಗೆ ಬಣ್ಣದ ಮಾಂತ್ರಿಕ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಆಯ್ಕೆ

      ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಿಂದ ಪ್ರತಿವರ್ಷ ಕೊಡಮಾಡುವ ರಂಗಕರ್ಮಿ ಡಾ.ಜೀವನ್ ರಾಂ ಸುಳ್ಯರ ಮಾತೃಶ್ರೀ ದಿ| ವನಜಾಕ್ಷಿ ಜಯರಾಮ ಸ್ಮರಣಾರ್ಥ ನೀಡುವ 2024 ನೇ ಸಾಲಿನ ವನಜ ರಂಗಮನೆ ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಬಣ್ಣದ ವೇಷದಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ರವರನ್ನು ಆಯ್ಕೆ ಮಾಡಲಾಗಿದೆ.      ಸದಾಶಿವ ಶೆಟ್ಟಿಗಾರರು ಯಕ್ಷದ್ರೋಣ ಬಣ್ಣದ...
Ad Widget

ನಿಡ್ವಾಳದ ವಿಷ್ಣು ಸೇವಾ ಶಕ್ತಿ  ಸಂಘದ  ಟಿ ಶರ್ಟ್ ಬಿಡುಗಡೆಗೊಳಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಕರಿಕ್ಕಳ : ವಿಷ್ಣು ಸೇವಾ ಶಕ್ತಿ  ನಿಡ್ವಾಳ ( ರಿ ) ಸಂಘಟನೆಯ ಟಿ ಶರ್ಟ್ ನ್ನು  ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ಸೆ.10 ರಂದು ಬಿಡುಗಡೆಗೊಳಿಸಿದರು.           ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಹಿರಿಯರಾದ ಡಾ. ರಾಮಯ್ಯ ಭಟ್, ಶಿವರಾಮಯ್ಯ, ಪ್ರಮುಖರಾದ ಚಂದ್ರಶೇಖರ ಶಾಸ್ತ್ರಿ, ದಯಾನಂದ ಮೇಲ್ಮನೆ, ಲೋಕೇಶ್...

ತ್ರೋಬಾಲ್ ಪಂದ್ಯಾಟದಲ್ಲಿ ಅರಂತೋಡು ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅರಂತೋಡಿನಲ್ಲಿ  ನಡೆದ ತಾಲೂಕು ಮಟ್ಟದ ತ್ರೋ ಬಾಲ್ ಪಂದ್ಯಾಟದಲ್ಲಿ ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಥಮ ಬಹುಮಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶ್ರೀನಿಧಿ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ – ಗಣೇಶೋತ್ಸವ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮ

ಕಾಯರ್ತೋಡಿ: ಪಡ್ಪು-ಕಾಯರ್ತೋಡಿ-ಸೂರ್ತಿಲದ ಶ್ರೀನಿಧಿ ಮಹಿಳಾ ಮಂಡಲ (ರಿ.) ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು 24ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮ ಆದಿತ್ಯವಾರ ಶ್ರೀನಿಧಿ ಮಹಿಳಾ ಮಂಡಲ ಸಭಾಂಗಣದ ವಠಾರದಲ್ಲಿ ನಡೆಯಿತು.  ಶ್ರುತಿ ಮಂಜುನಾಥ್ ಸ್ವಾಗತಿಸಿದರು . ಶ್ರೀನಿಧಿ ಮಹಿಳಾ ಮಂಡಲ (ರಿ.) ಇದರ ಅಧ್ಯಕ್ಷೆ ಲೀಲಾವತಿ ಮೇದಪ್ಪ ಕಾರ್ಯಕ್ರಮದ...

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಜೇಸಿ ಸಪ್ತಾಹ 2024 ಉದ್ಘಾಟನೆ

ಜೆಸಿಐ ಸಪ್ತಾಹ 2024ನ್ನು ಈ ವರ್ಷ ಡೈಮಂಡ್ ಜೆಸೀ ವೀಕ್ ಆಗಿ ಒಂದು ವಾರಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಆಚರಿಸಲಾಗುತ್ತಿದ್ದುಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಒಂದು ವಾರಗಳ ಕಾಲ ನಡೆಯುವ ಜೇಸಿ ಸಪ್ತಾಹದ ಉದ್ಘಾಟನಾ ಸಮಾರಂಭವು ಸೆ.8ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಲಯ...

ಮಂಕಿ ಪಾಕ್ಸ್ ( ಎಂಪಾಕ್ಸ್) – ರೋಗದ ಲಕ್ಷಣಗಳೇನು? – ಲಸಿಕೆ ಹಾಗೂ ಚಿಕಿತ್ಸೆಯ ಕ್ರಮಗಳೇನು?

ಮಂಕಿ ಪಾಕ್ಸ್ ( ಎಂಪಾಕ್ಸ್ ) ಮಂಕಿ ಪಾಕ್ಸ್ ಎನ್ನುವುದು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಆರ್ಥೋಪಾಕ್ಸ್ ಗುಂಪಿಗೆ ಸೇರಿದ ವೈರಾಣು ಆಗಿರುತ್ತದೆ. 1958ರಲ್ಲಿ ಡೆನ್ಮಾರ್ಕ್ ದೇಶದಲ್ಲಿ ಸಂಶೋಧನೆಗಾಗಿ ಇರಿಸಲಾದ ಮಂಗಗಳಲ್ಲಿ ಈ ವೈರಾಣು ಮೊದಲ ಬಾರಿ ಪತ್ತೆಯಾಯಿತು. ಆದಾದ ಬಳಿಕ 1970ರಲ್ಲಿ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಈ ವೈರಾಣು...

ಅರಂತೋಡು: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟ

ಅರಂತೋಡು: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ (ಪದವಿ ಪೂರ್ವ ವಿಭಾಗ)ಮಂಗಳೂರು ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಸುಳ್ಯದ ಪ್ರಾಧ್ಯಾಪಕ ಡಾ.ಹರ್ಷವರ್ಧನ್ ಕುತ್ತಮೊಟ್ಟೆ ನೆರವೇರಿಸಿದರು.ಅಧ್ಯಕ್ಷತೆ ಕಾಲೇಜಿನ...

ಕೊಲ್ಲಮೊಗ್ರು : ಬಂಗ್ಲೆಗುಡ್ಡೆ ಶಾಲೆಯಲ್ಲೊಂದು ಸ್ವಾಮಿನಿಷ್ಠೆಯ ಶ್ವಾನ…

✍️ಉಲ್ಲಾಸ್ ಕಜ್ಜೋಡಿ“ಶ್ವಾನ” ಅಂದರೆ ನಾಯಿಗಳಿಗೆ ಇರುವಷ್ಟು ಬುದ್ಧಿಶಕ್ತಿ ಹಾಗೂ ಸ್ವಾಮಿನಿಷ್ಠೆ ಬೇರೆ ಯಾವ ಪ್ರಾಣಿಗಳಿಗೂ ಇಲ್ಲ ಎಂದು ಹೇಳಬಹುದು. ಏಕೆಂದರೆ ನಾಯಿಗಳಿಗೆ ನಾವು ಒಂದು ಹೊತ್ತು ಆಹಾರ ನೀಡಿದರೂ ಕೂಡ ಅವುಗಳು ನಮ್ಮನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತವೆ. ಪ್ರತೀ ಬಾರಿ ಅವುಗಳು ನಮ್ಮನ್ನು ಕಂಡಾಗಲೂ ಅವರದ್ದೇ ಆದ ರೀತಿಯಲ್ಲಿ ಪ್ರೀತಿಯನ್ನು ತೋರುತ್ತವೆ. ಆದ್ದರಿಂದ ಸ್ವಾಮಿನಿಷ್ಠೆ ಅಥವಾ ನಿಯತ್ತಿಗೆ...

ಸೇವಾಜೆ : ವ್ಯಕ್ತಿ ಕಾಣೆ – ದೂರು ದಾಖಲು

ದೇವಚಳ್ಳ ಗ್ರಾಮದ ಸೇವಾಜೆ ಬೆಳ್ಯಪ್ಪ (75)ಎಂಬವರು ಸೆ.9 ರಂದು ಸಂಜೆ 3 ಗಂಟೆಯಿಂದ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಸುಬ್ರಹ್ಮಣ್ಯ ರವರು ತಿಳಿಸಿದ್ದಾರೆ. ಯಾರಿಗಾದರೂ ಇವರ ಮಾಹಿತಿ ಸಿಕ್ಕಿದ್ದಲ್ಲಿ ದೂರವಾಣಿ 9036147826 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.
Loading posts...

All posts loaded

No more posts

error: Content is protected !!