- Wednesday
- April 2nd, 2025

ಏನೆಕಲ್ಲು ಗ್ರಾಮದ ಪೂಜಾರಿಮನೆ ದಿ. ದೇವರಾಜ ಪೂಜಾರಿಮನೆಯವರ ಪುತ್ರ ವಿನೋದ್ರವರು ಇಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 36 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಇವರು ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ಅಸಂಘಟಿತ ಪ್ರಕೋಷ್ಠದ ಜಿಲ್ಲಾ ಸದಸ್ಯರನ್ನಾಗಿ ವಿನುತಾ ಪಾತಿಕಲ್ಲು ಅವರನ್ನು ನೇಮಕ ಮಾಡಲಾಗಿದೆ. ಇವರು ಮಂಡೆಕೋಲು ಗ್ರಾಮದ ಹರಿಶ್ಚಂದ್ರ ಪಾತಿಕಲ್ಲು ಅವರ ಪತ್ನಿ. ಮಂಡೆಕೋಲು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿ, ಹಾಲಿ ಸದಸ್ಯರಾಗಿ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕಿಯಾಗಿ , ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆಯಾಗಿ,...

ತಾಲೂಕು ಕಾನೂನು ಸೇವೆಗಳ ಸಮಿತಿ, ಸುಳ್ಯ, ವಕೀಲರ ಸಂಘ ಸುಳ್ಯ, ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ,ಇವುಗಳ ಸಂಯುಕ್ತ ಆಶ್ರಯದಲ್ಲಿ ಮೋಟಾರು ವಾಹನ ಕಾಯ್ದೆ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಾನೂನು ಅರಿವು ಕಾರ್ಯಕ್ರಮ ಸೆಪ್ಟೆಂಬರ್ 23ರಂದು ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಆಲೆಟ್ಟಿ ಮಿತ್ತಡ್ಕ ಸುಳ್ಯ ಇಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ.ಬಿ.ಮೋಹನ್ ಬಾಬು,...

ದಸರಾ ಉತ್ಸವ ವೈಭವದಿಂದ ನಡೆಸುವ ಬಗ್ಗೆ ತೀರ್ಮಾನ ಮಾಡಿದ್ದು, 9 ದಿನಗಳು ಕೂಡ ಅದ್ಭುತವಾದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ ಎಂದು ಶಾರದೋತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಹೇಳಿದರು. ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಸರ ಉತ್ಸವದ ವಿವರ ನೀಡಿದರು. ಈ ಬಾರಿ ವಿಶೇಷವಾಗಿ ಮಹಿಳೆಯರೇ ನಡೆಸಿಕೊಡುವ ವಿಶೇಷ ಕಾರ್ಯಕ್ರಮ ಮಹಿಳಾ ದಸರಾ ಕಾರ್ಯಕ್ರಮ ನಡೆಯಲಿದೆ. ಮಹಿಳೆಯರೇ...

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 21/09/2024 ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕಾಲೇಜಿನ ಕೌಮಾರಭೃತ್ಯ ಹಾಗೂ ಸ್ವಸ್ಥವೃತ್ತ ವಿಭಾಗದ ಸಹಯೋಗದೊಂದಿಗೆ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೇತೃತ್ವದ 7ನೇ ರಾಷ್ಟ್ರೀಯ ಪೋಷಣ್ ಮಾಹದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ...

ಕಲ್ಚರ್ಪೆ ಕಸ ದಿಂದ ರಸ ಸಿಗುತ್ತಿದೆ, ಕಲ್ಚರ್ಪೆ ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದೆ ಕಲ್ಪರ್ಪೆ ಹೋರಾಟ ಸಮಿತಿಯ ಎಂಬ ಆರೋಪಕ್ಕೆ ವಿನಯ ಕುಮಾರ್ ಕಂದಡ್ಕ ಪ್ರತ್ಯುತ್ತರ ನೀಡಿದರು. ಉದ್ದೇಶ ಪೂರ್ವಕವಾಗಿಯೇ ನನ್ನ ವಿರುದ್ಧ ಇಬ್ಬರು ಹೇಳಿಕೆ ನೀಡಿದ್ದಾರೆ. ಅವರು ಮೂಲ ನಿವಾಸಿಗಳಲ್ಲ. ವಲಸೆ ನಿವಾಸಿಗರೇ ಈ ಸಮಸ್ಯೆ ಉಲ್ಬಣ ಆಗಲು ಕಾರಣ. ರಾಜಕೀಯ ಉದ್ದೇಶಕ್ಕೆ...

“ಕಬಡ್ಡಿ ಪಂದ್ಯಾಟವು ಗ್ರಾಮೀಣ ಮಟ್ಟದ ಕ್ರೀಡೆ. ಗ್ರಾಮೀಣ ಜನರು ಬಹಳ ಹಿಂದಿನಿಂದಲೂ ಈ ಕ್ರೀಡೆಯನ್ನು ಮೆಚ್ಚಿಕೊಂಡು ಸಾಂಸ್ಕೃತಿಕ ಕ್ರೀಡೆಯನ್ನಾಗಿ ಅಪ್ಪಿಕೊಂಡಿದ್ದಾರೆ. ಹಾಗೂ ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಹಳ್ಳಿಯಿಂದ ಆರಂಭವಾದ ಈ ಕ್ರೀಡೆ ಇಂದು ರಾಜ್ಯ, ರಾಷ್ಟ್ರ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿದೆ.ಗುತ್ತಿಗಾರಿನಂತ ಗ್ರಾಮೀಣ ಪ್ರದೇಶದಲ್ಲಿ ಜನರು ಬಹಳ ಉತ್ಸುಕತೆಯಿಂದ ಕಬ್ಬಡಿ ಪಂದ್ಯಾಟಕ್ಕೆ ಅದ್ದೂರಿಯ ತಯಾರಿ ಮಾಡಿದ್ದಾರೆ, ಹಾಗೆಯೇ...

ಸುಬ್ರಹ್ಮಣ್ಯ ಸೆಪ್ಟೆಂಬರ್ 20: ಕರ್ನಾಟಕ ರಾಜ್ಯ ಸರಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಇವರ ಆದೇಶದಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಸುಬ್ರಹ್ಮಣ್ಯ ಪೇಟೆಯ ಪರಿಸರ ,ದೇವಳದ ವಟಾರ, ಮುಖ್ಯರಸ್ತೆ ಬದಿಗಳಲ್ಲಿ, ಕುಮಾರಧಾರ ನದಿ ಸ್ನಾನಘಟ್ಟ ಸುತ್ತಮುತ್ತಲಿನ ವಟಾರದಲ್ಲಿ, ಪರ್ವತಮುಖಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರಗಿನ...

ಸುಬ್ರಹ್ಮಣ್ಯ ಸೆಪ್ಟೆಂಬರ್ 19: ಏನೆಕಲ್ಲು ಗ್ರಾಮದ ಬಾನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಹಾಗೂ ತಾಲೂಕು ಪಂಚಾಯತ್ ಅನುದಾನದ ರೂ. 5,20,000/= ದಲ್ಲಿ ವಿಕಲಚೇತನ ಸ್ನೇಹಿ ಶೌಚಾಲಯವನ್ನು ಬುಧವಾರ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗಿರಥಿ ಮುರುಳ್ಯ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಹಾಗೂ ಹಿರಿಯ ವಿದ್ಯಾರ್ಥಿ...

ನಾವು ಮಾಡುವ ಕೆಲಸ ಯಾವುದಾದರೇನು ಅದರ ಮೇಲೆ ಪ್ರೀತಿಯಿರಲಿ, ಇಷ್ಟಪಟ್ಟ ಕೆಲಸ ಸಿಗಲಿಲ್ಲವೆಂದು ದುಃಖಿಸುವುದಾದರೂ ಏಕೆ..? ನಿರಂತರ ಪ್ರಯತ್ನವಿರಲಿ…ಸಿಗದ ಕೆಲಸವ ನೆನೆದು ವ್ಯಥೆ ಪಡುವುದಾದರೂ ಏಕೆ..?, ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಬಾರದೇಕೇ…?ಚಿಕ್ಕ ಕೆಲಸ-ದೊಡ್ಡ ಕೆಲಸ ಎಂಬುವುದು ಇಲ್ಲ, ಶ್ರದ್ಧೆಯಿಂದ ಮಾಡಿದರೆ ಯಾವ ಕೆಲಸವೂ ನಮ್ಮ ಕೈ ಬಿಡುವುದಿಲ್ಲ…ಮಾಡುವ ಕೆಲಸದಿಂದ ಮನುಷ್ಯನನ್ನು ಗುರುತಿಸುವುದು ಸರಿಯಲ್ಲ, ಮನಸ್ಸಿನಲ್ಲಿ ಶ್ರದ್ಧೆಯಿದ್ದರೆ...

All posts loaded
No more posts