Ad Widget

ಮೋದಿಯವರ 74 ನೇ ಹುಟ್ಟುಹಬ್ಬದ ಅಂಗವಾಗಿ ಕಾಯರ್ತೋಡಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74 ನೇ ಹುಟ್ಟುಹಬ್ಬದ ಅಂಗವಾಗಿ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಹಾಪೂಜೆ, ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದ್ರೆ, ನ.ಪಂ. ಉಪಾಧ್ಯಕ್ಷ ಬುದ್ಧ ನಾಯ್ಕ್, ಪ್ರಮುಖರಾದ ಕುಸುಮಾಧರ ಎ.ಟಿ., ವಿನಯ ಕುಮಾರ್ ಕಂದಡ್ಕ, ನಾರಾಯಣ ಶಾಂತಿನಗರ, ಅಶೋಕ್ ಅಡ್ಕಾರ್,...

ಯುವ ಜನಾಂಗಗಳು ಮೊಬೈಲ್ ವ್ಯಾಮೋಹ ತ್ಯಜಿಸಿ ಕ್ರೀಡಾ ಕ್ಷೇತ್ರದತ್ತ ಆಕರ್ಷಿತರಾಗಬೇಕಿದೆ – ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಅರವಿಂದ ಅಯ್ಯಪ್ಪ

ಸುಬ್ರಹ್ಮಣ್ಯ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಗೆ ಪೂರಕ.ಆದರೆ ಇವುಗಳನ್ನು ಮರೆತು ಇದೀಗ ಮೊಬೈಲ್ ವ್ಯಾಮೋಹವನ್ನು ಬೆಳೆಸಿಕೊಂಡಿರುವುದು ಬೇಸರದ ಸಂಗತಿ. ಆದುದರಿಂದ ಮೊಬೈಲ್ ಬಿಟ್ಟು ಪುಸ್ತಕ ಓದುವತ್ತ ಗಮನ ಹರಿಸುವುದು ಸೂಕ್ತ ಎಂದು ಕುಕ್ಕೆ ಶ್ರೀ  ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.   ಅವರು ಎಸ್ ಎಸ್ ಪಿಯು ಕಾಲೇಜಿನಲ್ಲಿ...
Ad Widget

ಅಜ್ಜಾವರ : ಮಿಲಾದ್ ಸಮಿತಿ ವತಿಯಿಂದ ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ

ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ ಮತ್ತು ಸಾರ್ವಜನಿಕ ಚಹಾಕೂಟವು ಸೆ.17 ರಂದು ಅಜ್ಜಾವರದಲ್ಲಿ ನಡೆಯಿತು.ಮುಹಿಯುದ್ದೀನ್ ಜುಮಾ ಮಸೀದಿ ಅಜ್ಜಾವರ ವಠಾರದಲ್ಲಿ ಬೆಳಿಗ್ಗೆ  ತಖ್ ವಿಯ್ಯತ್ತಲ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ಲ್ ಖಾದರ್ ಹಾಜಿ,ಉಪಾಧ್ಯಕ್ಷರಾದ ಅಂದ ಹಾಜಿ ಪ್ರಗತಿರವರು ಧ್ವಜಾರೋಹಣ ನೆರವೇರಿಸಿದರು.ತದನಂತರ ನೂರುಲ್ ಇಸ್ಲಾಂ ಮದ್ರಾಸ...

ಪೆರಾಜೆ ಸಹಕಾರಿ ಸಂಘದ ಮಹಾಸಭೆ – 193 ಕೋಟಿ ವಾರ್ಷಿಕ ವ್ಯವಹಾರ – 38.47 ಲಕ್ಷ ಲಾಭ- ಶೇ 8 ಡಿವಿಡೆಂಡ್

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ 7ನೇ ವಾರ್ಷಿಕ ಮಹಾಸಭೆಯು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಸೆಪ್ಟೆಂಬರ್ 17ರಂದು ನಡೆಯಿತು. ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಕುಂದಲ್ಪಾಡಿಯವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಕ್ಕಳ ಪ್ರಾರ್ಥನೆಯಿಂದ ಸಭೆಪ್ರಾರಂಭವಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಎಚ್ ಕೆ ಇವರು ಸರ್ವರನ್ನು ಸ್ವಾಗತಿಸಿ, ವರದಿ ಮಂಡಿಸಿದರು....

ನಾಳೆ ( ಸೆ.18) ಸುಳ್ಯದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಸುಳ್ಯದ 33 /11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆ.ವಿ. ಫೀಡರ್ ಗಳಲ್ಲಿ ತುರ್ತು ನಿಯತಕಾಲಿಕ ಕೆಲಸ ಹಮ್ಮಿಕೊಂಡಿರುವುದರಿಂದ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ದೇವರಗುಂಡ,ಅಜ್ಜಾವರ ಡಿಪೋ, ಜಬಳೆ, ಉಬರಡ್ಕ, ಮಂಡೆಕೋಲು, ತೊಡಿಕಾನ, ಕಲ್ಲುಗುಂಡಿ, ಕೋಲ್ಚಾರ್ ಪೀಡರುಗಳಲ್ಲಿ ಸೆ.18 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರ ತನಕ ವಿದ್ಯುತ್‌ ವ್ಯತ್ಯಯ ಉಂಟಾಗಲಿದ್ದು...

ಸುಳ್ಯ : ವಿದ್ಯುತ್ ಲೈನ್ ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕನಿಗೆ ಶಾಕ್ – ಗಂಭೀರ ಗಾಯ – ಆಸ್ಪತ್ರೆಗೆ ದಾಖಲು

ವಿದ್ಯುತ್ ಲೈನ್ ಕೆಲಸದ ವೇಳೆ ವಿದ್ಯುತ್ ಸ್ಪರ್ಶ ವಾಗಿ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಗಾಯವಾದ ಘಟನೆ ಇದೀಗ ಕೊಡಿಯಾಲಬೈಲ್ ನಲ್ಲಿ ಸಂಭವಿಸಿದೆ. ಗಾಯಗೊಂಡ ಭವಿತ್ ಎಂಬ ಯುವಕನ್ನು ಅವರನ್ನು ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೆಂಟ್ ಶಾಕ್ ಹೊಡೆದು ಕಂಬದಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಅನ್ನಪೂರ್ಣ ಇಲೆಕ್ಟಿಕಲ್ ನ...

ವೈಟ್ ಕ್ಲಬ್ ಮೆನ್ಸ್ ಕ್ಲಾತ್ ಶುಭಾರಂಭ

ಸುಳ್ಯದ ರಥಬೀದಿಯಲ್ಲಿರುವ ವಿನಾಯಕ ಕಾಂಪ್ಲೆಕ್ಸ್ ಮೊದಲನೇ ಮಾಳಿಗೆಯಲ್ಲಿ ಸೆ.16ರಂದು ವೈಟ್ ಕ್ಲಬ್ ಮೆನ್ಸ್ ಕ್ಲಾತ್ ಬಟ್ಟೆ ಅಂಗಡಿ ಶುಭಾರಂಭಗೊoಡಿತ್ತು.ಉದ್ಯಮಿ ಪುರುಷೋತ್ತಮರವರು ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಳಿಗೆಯ ಮಾಲಕರಾದ ಅಜಿತ್ ಹಾಗೂ ಅವರ ಶ್ರೀಮತಿ ಸಂಚಿತಾ ಬಂಧುಗಳನ್ನು ಸ್ವಾಗತಿಸಿದರು.ವಿನಾಯಕ ಕಾಂಪ್ಲೆಕ್‌ನ ಮಾಲಕರಾದ ಪ್ರಸಾದ್ ಹಾಗೂ ಮಳಿಗೆ ಮಾಲಕರ ಕುಟುಂಬಸ್ಥರು ಹಾಗೂ ಬಂಧುಮಿತ್ರರು ಶುಭ...

ಸೆ.21 : ಮನೆಯಿಂದಲೇ ನಿರ್ವಹಿಸಬಹುದಾದ ಉದ್ಯೋಗ ಅವಕಾಶಗಳ ಮಾಹಿತಿ ಮತ್ತು ಸಂದರ್ಶನ

ಸುಳ್ಯದ ಸಂಧ್ಯಾ ರಶ್ಮಿ ಸಭಾಭವನ { ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು } ಕುರುಂಜಿಭಾಗ್ ನಲ್ಲಿ ಮೈಲ್ಯಾಂಪ್ ನೇಚರ್ ಕನೆಕ್ಟ್ ಸಂಸ್ಥೆಯ ವತಿಯಿಂದ ಮನೆಯಿಂದಲೇ ನಿರ್ವಹಿಸಬಹುದಾದ ಉದ್ಯೋಗ ಮಾಹಿತಿ ಮತ್ತು ಸಂದರ್ಶನ ಕಾರ್ಯಕ್ರಮ ಸೆಪ್ಟೆಂಬರ್ 21 ಶನಿವಾರದಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1:30ರ ತನಕ ಆಯೋಜನೆಗೊಂಡಿದೆ. ಕಾರ್ಯಕ್ರಮದಲ್ಲಿ 50 ಜನರಿಗೆ ಮಾತ್ರ ಅವಕಾಶವಿದ್ದು ಆಸಕ್ತರು...

ಪೆರುವಾಜೆಯಲ್ಲಿ ಬೃಹತ್ ಸ್ವಚ್ಛತಾ ಆಂದೋಲನ

ಜೇಸಿಐ ಬೆಳ್ಳಾರೆಯ ಜೇಸೀ ಸಪ್ತಾಹದ ಅಂಗವಾಗಿ ಬೃಹತ್ ಸ್ವಚ್ಛತಾ ಆಂದೋಲನ ಪೆರುವಾಜೆಯಲ್ಲಿ ನಡೆಯಿತು. ಪೆರುವಾಜೆ ಶ್ರೀ ಜಾಲದುರ್ಗಾ ದೇವಿ ದೇವಸ್ಥಾನದ ಮುಂಭಾಗದಲ್ಲಿ ಸ್ವಚ್ಛತಾ ಆಂದೋಲನಕ್ಕೆ ದೇವಸ್ಥಾನದ ಆಡಳಿತಧಿಕಾರಿ ಮತ್ತು ಪೆರುವಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಚಾಲನೆ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪೆರುವಾಜೆ ಡಾ. ಕೆ ಶಿವರಮ...

ನಡುಗಲ್ಲು : ಅನಾರೋಗ್ಯದಿಂದ ಯುವಕ ಮೃತ್ಯು

ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಕಲ್ಲಾಜೆ ಯುವಕನೋರ್ವ ಅಸೌಖ್ಯದಿಂದ ಸಾವನ್ನಪ್ಪಿದ ಘಟನೆ ಸೆ.16ರ ತಡರಾತ್ರಿ ಸಂಭವಿಸಿದೆ. ಕಲ್ಲಾಜೆ ನಿವಾಸಿ ಲಕ್ಷ್ಮಣಗೌಡರವರ ಪುತ್ರ ಲಿಖಿತ್ ಕಲ್ಲಾಜೆ(26) ಮೃತ ದುರ್ದೈವಿ.ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಲಿಖಿತ್ ಚಿಕಿತ್ಸೆ ಫಲಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!