Ad Widget

ಎಲಿಮಲೆ ::ಕ್ರೀಡಾ ವೈಭವ 2024 ಕ್ರೀಡಾ ಕೂಟದ ಅಂಗವಾಗಿ ಲಕ್ಕಿ ಕೂಪನ್ ಬಿಡುಗಡೆ

ಕರ್ನಾಟಕ ಸರಕಾರ, ದ.ಕ ಜಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಇವುಗಳ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ಅಕ್ಟೋಬರ್ 25 ಮತ್ತು 26 ರಂದು ನಡೆಯಲಿರುವ ಕ್ರೀಡಾ ವೈಭವ 2024 ಕ್ರೀಡಾ ಕೂಟಕ್ಕೆ ಧನ ಸಂಗ್ರಹದ ಸಲುವಾಗಿ ಲಕ್ಕಿ ಕೂಪನ್ ಬಿಡುಗಡೆ ನಡೆಯಿತು. ಈ ಲಕ್ಕಿ ಕೂಪನ್ ಜ್ಞಾನದೀಪ ವಿದ್ಯಾಸಂಸ್ಥೆಯ ಸಂಚಾಲಕರಾದ ಎ.ವಿ ತೀರ್ಥರಾಮ ಇವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧನಂಜಯ ಬಾಳೆತೋಟ ವಹಿಸಿದ್ದರು,ಕಾರ್ಯಕ್ರಮದಲ್ಲಿ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಕ್ರೀಡಾ ಕೂಟದ ಅಧ್ಯಕ್ಷರಾದ ವಿಷ್ಣುಭಟ್ ಮೂಲೆತೋಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಅಂಬೆಕಲ್ಲು, ವಿಶೇಷ ಆಹ್ವಾನಿತರಾಗಿ ನಿವೃತ್ತ ಮೂಖ್ಯೋಪಾಧ್ಯಾಯರಾದ ಪುರುಷೋತ್ತಮ ಕೇಪಳಕಜೆ, ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಮುರಳಿಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!