ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಇದರ ಸದಸ್ಯ ಕೃಷಿಕರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 14 ರಂದು ಸಂಸ್ಥೆಯ ಅಧ್ಯಕ್ಷರಾದ ಮೂಲಚಂದ್ರ ಕುಕ್ಕಾಡಿ ಇವರ ಅಧ್ಯಕ್ಷತೆಯಲ್ಲಿ ಅಯ್ಯನಕಟ್ಟೆಯ ಪಂಡಿತ್ ದೀನ್ ದಯಾಳ್ ಸಭಾಂಗಣದಲ್ಲಿ ನಡೆಯಿತು.
ವಾರ್ಷಿಕ ವರದಿ ಹಾಗೂ ಲೆಕ್ಕಾಚಾರಗಳನ್ನು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ಸಭೆಗೆ ಮಂಡಿಸಿದರು. ಸಂಸ್ಥೆಗೆ ಕೇಂದ್ರ ಸರಕಾರದ ರಾಷ್ಟ್ರೀಯ ಜೇನು ಮಂಡಳಿಯ ಹಾಗೂ ಸಣ್ಣ ಕೃ ಷಿಕರ ವ್ಯಾಪಾರ ಒಕ್ಕೂಟ (SFAC) ವತಿಯಿಂದ ಸಹಾಯಧನದಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ಜೇನು ಸಂಸ್ಕರಣಾ ಘಟಕದ ಕಾರ್ಯ ಚಟುವಟಿಕೆಗಳ ಪ್ರಗತಿ ಬಗ್ಗೆ ಮಾಹಿತಿ ನೀಡಲಾಯಿತು.ಈ ಪ್ರಕಾರ ಮುಂದಿನ ಜನವರಿ ತಿಂಗಳ ಆರಂಭದಲ್ಲಿ ಕೆಲಸ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಒಪ್ಪಂದ ಆಧಾರಿತ ಜೇನು ಕೃಷಿಯು ಹೊಸ ನಿಯಮಗಳ ಮೂಲಕ ಮತ್ತೆ ವಿಸ್ತರಿಸಿ ಮುಂದುವರೆಸಲಾಗುವುದು, ಜೇನಿನ ವ್ಯವಹಾರಗಳೊಂದಿಗೆ ಹಲಸು ಹಾಗೂ ಬಿದಿರು ಕೃಷಿಯ ಕಾರ್ಯ ಯೋಜನೆಗಳು ನಡೆಯುತ್ತಿದ್ದು ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕಂಪನಿಯಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಅಡಿಕೆ ಕೊಯಿಲು ಹಾಗೂ ಅಡಿಕೆಗೆ ಔಷಧಿ ಸಿಂಪಡಿಸುವ ಅಡಿಕೆ ಕೌಶಲ್ಯ ತಂಡವನ್ನು ರಚನೆ ಮಾಡುವುದು ಸೇರಿದಂತೆ ಹಲವು ವಿಚಾರಗಳನ್ನು ಮಹಾಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.
ಕಂಪನಿಗೆ ನಿರ್ದೇಶಕರಾಗಿ ನಿರಂಜನ್ ಪೊಳ್ಯ ರವರನ್ನು ಅನುಮೋದಿಸಲಾಯಿತು, ಶೇರು ಬಂಡವಾಳವನ್ನು 50 ಲಕ್ಷಕ್ಕೆ ಏರಿಕೆ ಮಾಡುವುದೆಂದು ತೀರ್ಮಾನಿಸಲಾಯಿತು. ಸಲಹಾ ಸಮಿತಿ ಸದಸ್ಯರುಗಳಾದ ಎಂ.ಜಿ ಸತ್ಯನಾರಾಯಣ, ಅಣ್ಣಾ ವಿನಯಚಂದ್ರ ಹಾಗೂ ಡಾ. ಯಶಸ್ವಿನಿ ಭಾರದ್ವಾಜ್, ಪ್ರಸನ್ನ ಕುಂಞಿಹಿತ್ಲು ಮತ್ತು ಸದಸ್ಯರುಗಳಾದ ಆರ್.ಕೆ .ಭಟ್ ಕುರುಂಬುಡೇಲು, ಬಾಲಕೃಷ್ಣ ಗೌಡ ಮರೆಂಗಾಲ, ರಾಮಪ್ರಸಾದ್ ಕರಿಯಾಲ ಮುಂತಾದವರು ಸಂಸ್ಥೆಯ ಅಭಿವೃದ್ಧಿಯ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ಸಂಸ್ಥೆಯ ನಿರ್ದೇಶಕರುಗಳು ಸಲಹಾ ಸಮಿತಿ ಸದಸ್ಯರುಗಳು ಹಾಗೂ ಸಂಸ್ಥೆಯ ಸದಸ್ಯ ಕೃಷಿಕರು ಗ್ರಾಮಜನ್ಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.