Ad Widget

ದಯಾನಂದ ಡಿ.ಕೆ. ಯವರಿಗೆ ಸೇವಾರತ್ನ ಅವಾರ್ಡ್

ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಹಾಗೂ ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕೊಡಮಾಡುವ ಸೇವಾ ರತ್ನ ಅವಾರ್ಡ್ ಗೆ ಅಜ್ಜಾವರ ಗ್ರಾಮದ ದೊಡ್ಡೇರಿ ನಿವಾಸಿ, ಉದ್ಯಮಿ ದಯಾನಂದ ಡಿ.ಕೆ. ಭಾಜನರಾಗಿದ್ದು, ಸೆ.13ರಂದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಜ್ಜಾವರ ಗ್ರಾಮದ ದೊಡ್ಡೇರಿ ಮುಳ್ಯ ಕ್ರಾಸ್ ಬಳಿ ಆರ್.ಕೆ. ಇಂಟರ್ನ್ಯಾಷನಲ್ ಹೋಲಿಡೆ ಆನ್ ಪಾಸ್ ಪೋರ್ಟ್, ವೀಸಾ ಆಂಡ್ ಏರ್ ಲೈನ್ ಟಿಕೆಟ್ ಬುಕ್ಕಿಂಗ್ ಉದ್ಯಮ ಸಂಸ್ಥೆಯನ್ನು ಇವರು ನಡೆಸುತ್ತಿದ್ದಾರೆ. ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಶಾಲೆಯ ಅಧ್ಯಕ್ಷರಾಗಿ ದುಡಿಯುತ್ತಿರುವ ಇವರು ಹಲವು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ ಯವರು ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದಾರೆ. ಮಗ ರಿತೇಶ್ ಕುಮಾರ್ ಡಿ ದೊಡ್ಡೇರಿ ಶಾಲೆಯ ವಿದ್ಯಾರ್ಥಿ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!