Ad Widget

ಪೆರಾಜೆ ಅಪಘಾತ : ಸಹೋದರನ ಹಾದಿ ಹಿಡಿದ ನವೀನ್ – ಚಿಕ್ಕಪ್ಪನ ಮಗನು ಕಳೆದ ವರ್ಷ ಅಪಘಾತದಲ್ಲಿ ಮೃತ್ಯು

ಪೆರಾಜೆ ಬಳಿಯ ಕಲ್ಚರ್ಪೆ ಎಂಬಲ್ಲಿ ಸ್ಕೂಟಿ ಮತ್ತು ರಿಕ್ಷ ಮಧ್ಯೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ನವೀನ್ ಮೃತಪಟ್ಟ ಘಟನೆ ಇಂದು ನಡೆದಿದ್ದು, ದ್ವಿತೀಯ ವರ್ಷದ ಐಟಿಐ ಪರೀಕ್ಷೆ ಬರೆದಿದ್ದು, ಪರೀಕ್ಷೆ ಫಲಿತಾಂಶ ಬರುವ ಮೊದಲೇ ವಿಧಿ ಬರಹ ಬೇರೆಯಾಗಿತ್ತು. ಈತ ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ. ನವೀನ್ ತಂದೆ,ತಾಯಿ, ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.

ನವೀನ್ ನ ಚಿಕ್ಕಪ್ಪ ತೇಜೇಶ್ವರ ಬೊಳ್ಳೂರು ಅವರ ಏಕೈಕ ಪುತ್ರ ಐಟಿಐ ವ್ಯಾಸಂಗ ಮಾಡುತ್ತಿದ್ದ ಪ್ರತೀಕ್ ಕಳೆದ ವರ್ಷ ಪರಿವಾರಕಾನದಲ್ಲಿ ಬೈಕ್ ಹಾಗೂ ರಿಕ್ಷಾ ಮಧ್ಯೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ. ಶೋಕ ಸಾಗರದಲ್ಲಿದ್ದ ಕುಟುಂಬಕ್ಕೆ ವಿಧಿ ಮತ್ತೊಂದು ಅಘಾತ ನೀಡಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!