Ad Widget

ಮರೆಯದಿರು ನೀ..

ಮಳೆಹನಿಗಳು ನಾ ಮೇಲು-ತಾ ಮೇಲು ಎನ್ನುತ್ತಾ ಪುಟಿದು
ಒಂದಾಗಿ ಹರಿಯುವುದು ನೀ ಕಂಡಿಯಾ?
ಇನ್ನೇಕೆ ನಮ್ಮೊಳಗಿನ ಜಗಳ
ನಾವೆಲ್ಲರೂ ಒಂದೇ ಎಂದು ನೀ ಮರೆತೆಯಾ?

. . . . . . . . .

ಮಳೆಗೆ ಬಾಗಿದ ಗಿಡಗಳು ಖುಷಿಯಾಗಿ ನಿಲ್ಲುವುದು
ತಾ ಬಾಗಿದರೂ, ಬಾಯಾರಿದ ಬೇರು ತನಿಯಿತೆಂದು..
ಬಂದ ಕಷ್ಟವ ಎದುರಿಸಿ ನೀ ಧೈರ್ಯದಿ ನಿಲ್ಲು..
ಅನುಭವಗಳಿಂದ ಗಟ್ಟಿಯಾದೆನೆಂದು..

. . . . . . .

ಗಾಳಿಯಾಡಲು ಖುಷಿಯಾದ ಮರಗಳು
ಭೂಮಿಯ ಮುಟ್ಟುವ ಯತ್ನದಲ್ಲಿ..
ತಾನು ನಿಲ್ಲಲು ಭೂಮಿಯೇ ಕಾರಣವೆಂಬ
ಹೆಮ್ಮೆ ಅವುಗಳಲ್ಲಿ..

ಖುಷಿಯಾಡೊಡನೆ ಭೂಮಿಯ ಬಿಟ್ಟು
ಹಾರಲು ನೋಡುವ ನೀನು!
ಈ ಮಣ್ಣಿನಲ್ಲಿ ಬೆಳೆದ..
ನಿನ್ನ ಜೀವನವೇ ರತ್ನ ಎಂಬುದ ಮರೆತೆಯಾ?

ಮರೆಯದಿರು ನಿನ್ನ ಅಡಿಪಾಯವ
ನೆನಪಿನಲ್ಲಿಡು ಸೋಲಿನಲಿ ನೀ ಕಲಿತ ಪಾಠವ

                         ರಚನೆ:-ದೀಪ್ತಿ ಎಂ,ಎ.ಚೆಂಬು
                                    ಎನ್ನೆಂಸಿ, ಸುಳ್ಯ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading