Ad Widget

ಸುಳ್ಯ: ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಅರಿವು ಕಾರ್ಯಕ್ರಮ

ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ ಇವರ ವತಿಯಿಂದ ಆ.23ರಂದು ಸುಳ್ಯದ ಶ್ರೀ ಚೆನ್ನಕೇಶವ ವೃತ್ತದ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಕಾನೂನು ಸೇವೆಗಳ ಸಮಿತಿ ಸುಳ್ಯ ಇದರ ಪ್ಯಾನಲ್ ವಕೀಲರಾದ ಎಂ ಎಂ ಬೊಳ್ಳಪ್ಪ ಇವರು ಮೋಟಾರು ವಾಹನ ಕಾಯ್ದೆ ಕುರಿತು ಮಾಹಿತಿ ನೀಡಿದರು....

ಮಯೂರ್.ಎನ್.ಪಿ ಗುಡ್ಡೆಮನೆ ಅಥ್ಲೆಟಿಕ್ ನಲ್ಲಿ ಪ್ರಥಮ ; ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಮಂಗಳೂರು ಮಂಗಳ ಸ್ಟೇಡಿಯಂ ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹೈಸ್ಕೂಲ್ ವಿಭಾಗದ ಕ್ರೀಡಾಕೂಟದ ಅಥ್ಲೆಟಿಕ್ ವಿಭಾಗದಲ್ಲಿ ನಡುತೋಟ ಗುಡ್ಡೆಮನೆ ಮಯೂರ್.ಎನ್.ಪಿ ಇವರು 4×400 ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ಬೀದರ್ ನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಯಾದ ಇವರು ಬಾಳುಗೋಡು ಗ್ರಾಮದ...
Ad Widget

ಆ.25: ಏನೆಕಲ್ಲಿನಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ -2024

ಕಲಾಮಾಯೆ (ರಿ) ಏನೆಕಲ್ ವತಿಯಿಂದ, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ, ಮೂರನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ವೇಷ ಸ್ಪರ್ಧೆ -2024 ಕಾರ್ಯಕ್ರಮ ದಿನಾಂಕ 25 ಆಗಸ್ಟ್ 2024 ಆದಿತ್ಯವಾರ, ಶ್ರೀಆದಿಶಕ್ತಿ ಭಜನಾ ಮಂದಿರ (ರಿ)ಬಾಲಾಡಿ ಏನೆಕಲ್ ಇಲ್ಲಿ ನಡೆಯಲಿದೆ. ಮೂರು ವರ್ಷದ ಒಳಗಿನ ಮಕ್ಕಳಿಗೆ "ಮುದ್ದುಕೃಷ್ಣ", ಮೂರರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ "ಪುಟಾಣಿ ಕೃಷ್ಣ", ಆರರಿಂದ...

ಶಾಲಾ ಮೈದಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಿಷೇಧ , ಶಾಂತಿ ಸಭೆ. ಶಾಲಾ ಮೈದಾನ ಹಿಂದಿನಂತೆ ಆಚರಣೆಗೆ ನೀಡಲು ಮನವಿ.

ಮೇಲಾಧಿಕಾರಿಗಳ ಜತೆ ಚರ್ಚಿಸಿದಾಗ ಅನುಮತಿ ಕೊಡಬಾರದೆಂದು ಹೇಳಿದ್ದಾರೆ - ಶೀತಲ್ ಯು ಕೆ . ಸುಳ್ಯ: ಶಾಲಾ ಮೈದಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಬಾರದೆನ್ನುವ ಸರಕಾರದ ಆದೇಶದ ಸುತ್ತೋಲೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸಭೆ ಆಯೋಜನೆ ಮಾಡುವಂತೆ ಕೇಳಿಕೊಂಡಿರುವ ಮೇರೆಗೆ ಆ. 23 ರ ಸಂಜೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಂಜುನಾಥ್‌...

ಸುಳ್ಯ ಸಿಎ ಬ್ಯಾಂಕ್ ಗೆ ಸಹಕಾರ ಸಂಘಗಳ ಅಪರ ನಿಬಂಧಕರು(credit), ಸಹಕಾರ ಇಲಾಖೆ, ಬೆಂಗಳೂರು ಇವರ ಭೇಟಿ

ಶ್ರೀ ಬಾಲಶೇಖರ್, ಸಹಕಾರ ಸಂಘಗಳ ಅಪರ ನಿಬಂಧಕರು ( cerdit), ಸಹಕಾರ ಇಲಾಖೆ ಬೆಂಗಳೂರು ಇವರು ಸುಳ್ಯ ಸಿಎ ಬ್ಯಾಂಕಿಗೆ ಇಂದು ಭೇಟಿ ನೀಡಿ ಪರೀವೀಕ್ಷಣೆ ನಡೆಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ಶ್ರೀಯುತರನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್ ಪಿ ಸಂಘದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು. ಶ್ರೀ ರಮೇಶ್...

ಮಡಪ್ಪಾಡಿ : ತೆಂಗಿನಕಾಯಿ ಹೆಕ್ಕಲು ಹೋದ ಕೃಷಿಕ ಕೆರೆಗೆ ಬಿದ್ದು ದಾರುಣ ಮೃತ್ಯು

ತೆಂಗಿನಕಾಯಿ ಹೆಕ್ಕಲು ಹೋಗಿದ್ದಾಗ ಕೆರೆಗೆ ಜಾರಿ ಬಿದ್ದು ಕೃಷಿಕರೊಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಮಡಪ್ಪಾಡಿ ಯಿಂದ ವರದಿಯಾಗಿದೆ.ಮಡಪ್ಪಾಡಿ ಗ್ರಾಮದ ವಿಶ್ವನಾಥ ಗೋಳ್ಯಾಡಿ ಎಂಬವರೇ ಮೃತ ದುರ್ದೈವಿ. ಇಂದು ಮಧ್ಯಾಹ್ನ 11 ಗಂಟೆಯ ವೇಳೆಗೆ ವಿಶ್ವನಾಥರವರು ತೆಂಗಿನಕಾಯಿ ಹೆಕ್ಕಲೆಂದು ತೋಟಕ್ಕೆ ಹೋಗಿದ್ದರೆನ್ನಲಾಗಿದೆ. ಮಧ್ಯಾಹ್ನದವರೆಗೆ ಅವರು ಬಾರದಿದ್ದ ಕಾರಣ ಮನೆಯವರು ತೋಟದಲ್ಲಿ ನೋಡಿದಾಗ ತೆಂಗಿನಕಾಯಿ ತರಲೆಂದು ತೆಗೆದುಕೊಂಡು ಹೋಗಿದ್ದ...

ಸುಳ್ಯ ಪೊಲೀಸ್ ಠಾಣೆಯಲ್ಲಿ ಎಸ್.ಸಿ., ಎಸ್.ಟಿ. ಜನಸಂಪರ್ಕ ಸಭೆ

ಸುಳ್ಯ ಪೊಲೀಸ್ ಠಾಣೆಯಲ್ಲಿ ಆ.23 ರಂದು ಎಸ್.ಸಿ, ಎಸ್.ಟಿ. ಕುಂದುಕೊರತೆ ಸಭೆಯನ್ನು ನಡೆಸಲಾಯಿತು. ಸುಳ್ಯ ಠಾಣಾಧಿಕಾರಿಯವರಾದ ಈರಯ್ಯ ದೂಂತೂರುರವರ ಮುಂದಾಳತ್ವದಲ್ಲಿ ಸಭೆ ನಡೆದು ವರ್ತಮಾನದ ಸಮಸ್ಯೆಗಳ ಬಗ್ಗೆ ಮತ್ತು ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು.  ಈ ಸಭೆಯಲ್ಲಿ ದಲಿತ ಮುಖಂಡರುಗಳಾದ ನಂದರಾಜ್ ಸಂಕೇಶ, ಕರುಣಾಕರ ಪಲ್ಲತಡ್ಕ, ಶಂಕರ್ ಪೆರಾಜೆ, ಸಂಜೀವ ಪೈಚಾರು, ಸರಸ್ವತಿ ಬೊಳಿಯಮಜಲು,ಸೀತಾಲಕ್ಷ್ಮಿ, ವಿಜಯ...

ಗೌಡ ಯುವ ಸೇವಾ ಸಂಘದ ವತಿಯಿಂದ ಸಹಾಯಧನ ವಿತರಣೆ

ಇತ್ತೀಚಿಗೆ ನಿಧನರಾದ ನಿತ್ಯಾನಂದ ಹೊಸೊಳಿಕೆ, ಜಬಳೆ ಇವರ ಮನೆಯವರಿಗೆ ಸುಳ್ಯದ ಗೌಡ ಯುವ ಸೇವಾ ಸಂಘದ ವತಿಯಿಂದ ಆರ್ಥಿಕ ಸಹಕಾರವನ್ನು ನೀಡಲಾಯಿತು. ಗೌಡ ಯುವ ಸೇವಾ ಸಂಘ ನಿರ್ದೇಶಕರಾದ ನವೀನ್ ಜಾಕೆ ಯವರು ನಿತ್ಯಾನಂದ ಅವರ ಪತ್ನಿ ಹೇಮ  ಎಸ್ ನಂದ ರವರಿಗೆ ಸಹಾಯಧನ  ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಹೆಚ್ ಬಿ ಕೇಶವ ಹೊಸೊಳಿಕೆ ಜಯಂತ ಅಂಬೆಕಲ್ಲು...

ಹೆಣ್ಣೆಂಬ ಅಬಲೆಯ ಮೇಲಿನ ಅತ್ಯಾಚಾರದ ಪದವನ್ನು ಮರೆಯಾಚೂವಿರಾ

ಪ್ರಾಚೀನ ಭಾರತದಲ್ಲಿ ಅನಾದಿಕಾಲದಿಂದಲೂ ತಾಯಿಗೆ ಮಹತ್ವದ ಸ್ಥಾನಮಾನವನ್ನು ನೀಡಿದ ಕಣ್ಣಿಗೆ ಮೊದಲು ಕಾಣುವ ಏಕೈಕ ದೇವತೆಯೇ ಎಂದು ಈಕೆಯನ್ನು ಸಂಬೋಧಿಸಲಾಗಿದೆ. ಹುಟ್ಟುವ ಪ್ರತಿಯೊಂದು ಮಗು ಉಚ್ಚರಿಸುವ ತೊದಲು ನುಡಿಯೇ ಅ…. ಮ್ಮಾ… ಈ ಮಹಾ ತಾಯಿಯೆಂಬ ರೂಪವನ್ನು ತಾಳಿರುವ ಮೂಲ ರೂಪವೇ ಈ ಹೆಣ್ಣು. ಈಕೆ ಹೆಣ್ಣೆಂದು ಪದ ನಾಮವನ್ನು ಹಣೆ ಪಟ್ಟಿಯಲ್ಲಿ ಧರಿಸಿ ಭವಿಷ್ಯದಲ್ಲಿ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ಸಹಯೋಗದೊಂದಿಗೆ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಗಾರ

ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಎಚ್ ಆರ್ ಅಂಡ್ ಪ್ಲೇಸ್ಮೆಂಟ್ ಸೆಲ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಸಹಯೋಗದೊಂದಿಗೆ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. ಚಂದ್ರಶೇಖರ ನಾಯರ್ ಅಧ್ಯಕ್ಷರು ರೋಟರಿ ಕ್ಲಬ್ ಸುಬ್ರಹ್ಮಣ್ಯ ಇವರು ವಹಿಸಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೊ. ವೆಂಕಟೇಶ್ ಎಚ್.ಎಲ್ . ಉಪಾಧ್ಯಕ್ಷರು...
Loading posts...

All posts loaded

No more posts

error: Content is protected !!