Ad Widget

*ಪ್ರಕೃತಿ ವಿಕೋಪದ ಮುನ್ಸೂಚನೆ ಪ್ರಾಣಿ ಪಕ್ಷಿಗಳಿಗೆ ಮೊದಲೇ ತಿಳಿದುಬರುತ್ತದೆ*

✍️ ಭಾಸ್ಕರ ಗೌಡ ಜೋಗಿಬೆಟ್ಟು ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನರ ಜೀವನ ಅತಂತ್ರವಾಗಿದೆ. ಹಲವು ಕಡೆಗಳಲ್ಲಿ ಭೂ ಕುಸಿತದಂತಹ ಪ್ರಕೃತಿ ವಿಕೋಪಗಳು ಆಗುತ್ತಿವೆ. ಮುಖ್ಯವಾಗಿ ಶಿರಾಡಿ ಘಾಟ್, ಶಿರೂರು , ವಯನಾಡು ಮುಂತಾದ ಕಡೆಗಳಲ್ಲಿ ಗಂಭೀರವಾದ ಸಮಸ್ಯೆಗಳಾಗಿವೆ. ಇಂತಹ ಪ್ರಕೃತಿ ವಿಕೋಪ ಆಗುವ ಮೊದಲೇ ಪ್ರಾಣಿ ಪಕ್ಷಿಗಳಿಗೆ ಮುನ್ಸೂಚನೆ ಇರುತ್ತದೆ ಎಂಬುವುದಕ್ಕೆ ಕೆಲವೊಂದು ಘಟನೆಗಳು ಪುಷ್ಠಿ...

ಹರಿಹರ ಪಲ್ಲತ್ತಡ್ಕ : ಊರಿನವರಿಂದ ಶ್ರಮದಾನ

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ, ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಹಾಗೂ ದೇವಚಳ್ಳ ಗ್ರಾಮದ ಕರಂಗಲ್ಲು ಊರಿನವರಿಂದ ಆ.03 ರಂದು ಹರಿಹರ-ಕಜ್ಜೋಡಿ ರಸ್ತೆಯಿಂದ ಕರಂಗಲ್ಲು ವರೆಗೆ HT ಲೈನ್ ಗೆ ತಾಕುವ ಮರದ ಗೆಲ್ಲುಗಳನ್ನು ಹಾಗೂ ರಸ್ತೆ ಬದಿಯ ಕಾಡುಗಳನ್ನು ಕಡಿಯಲಾಯಿತು.ಕಜ್ಜೋಡಿ, ಮುಳ್ಳುಬಾಗಿಲು ಹಾಗೂ ಕರಂಗಲ್ಲು ಊರಿನವರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಮೆಸ್ಕಾಂ ಇಲಾಖೆಯವರು ಸಹಕರಿಸಿದರು.(ವರದಿ : ಉಲ್ಲಾಸ್...
Ad Widget

ಕಾಂತಮಂಗಲ ಶಾಲೆಯಲ್ಲಿ ಶ್ರಮದಾನ

ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಉನ್ನತಿಕರಿಸಿದ ಹಿರಿಯ ಪಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಹಾಗೂ ಪೊಷಕರ ಸಹಕಾರದೊಂದಿಗೆ ಶ್ರಮದಾನ ನಡೆಯಿತು.‌ ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು, ಪೋಷಕರು, ಊರವರು ಭಾಗವಹಿಸಿದ್ದರು.

ಬಿಳಿನೆಲೆ-ಕೈಕಂಬ: ಆಟಿ ಆಚರಣೆಯ ಸಂಭ್ರಮ

ಸುಬ್ರಹ್ಮಣ್ಯ, ಆಗಸ್ಟ್ 4: ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ-ಕೈಕಂಬ ನಡುತೋಟ ಕುಟುಂಬದಲ್ಲಿ ರವಿವಾರ ವರ್ಷ ಪ್ರತಿಯಂತೆ ಈ ವರ್ಷವೂ ಆಟಿ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆಟಿ ಅಮಾವಾಸ್ಯೆಯ ರವಿವಾರದಂದು ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಹಾಲೆಯ ಮರದ ಕೆತ್ತೆಯನ್ನು ತಂದು ಕಷಾಯ ಮಾಡಿ ತದನಂತರ ಪ್ರತಿವರ್ಷದಂತೆ ಮನೆಯ ಪಕ್ಕದ ಹಳ್ಳಕ್ಕೆ ಹೋಗಿ ಮಿಂದು ನವಧಾನ್ಯಗಳನ್ನು ಒಳಗೊಂಡ ಹೂವು,...

ಆ.17 ರಂದು ಗುತ್ತಿಗಾರಿನಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು, ಅಮರಸೇನಾ ರಕ್ತದಾನಿಗಳ ಸಂಘ ಗುತ್ತಿಗಾರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಲಯನ್ಸ್ ಕ್ಲಬ್ ಗುತ್ತಿಗಾರು ಹಾಗೂ ಅಮರ ಸಂಜೀವಿನಿ ಗ್ರಾಮ ಪಂಚಾಯತ್...

ನಾಲ್ಕೂರು : ನಿವೇದಿತಾ ಸಂಚಾಲನ ಸಮಿತಿ ರಚನೆ – ಸಂಚಾಲಕರಾಗಿ ಪ್ರಶಾಂತಿ ಮರಕತ- ಸಹ ಸಂಚಾಲಕರಾಗಿ ಪ್ರಮೀಳಾ ಭಾಸ್ಕರ

ನಿವೇದಿತಾ ಸಂಚಾಲನ ಸಮಿತಿ ರಚನೆ ಆ.04 ರಂದು ನಾಲ್ಕೂರಿನಲ್ಲಿ ನಡೆಯಿತು. ಸಂಚಾಲಕರಾಗಿ ಶ್ರೀಮತಿ ಪ್ರಶಾಂತಿ ಮರಕತ, ಸಹ ಸಂಚಾಲಕರಾಗಿ ಶ್ರೀಮತಿ ಪ್ರಮೀಳಾ ಭಾಸ್ಕರ ಆಯ್ಕೆಯಾದರು. ಸದಸ್ಯರುಗಳಾಗಿ ಶ್ರೀಮತಿ ಪಲ್ಲವಿ ಕೊಚ್ಚಿ, ಶ್ರೀಮತಿ ತಿಲಕ ಕೊಲ್ಯ, ಶ್ರೀಮತಿ ಸವಿತಾ ಕುಳ್ಳಂಪಾಡಿ, ಶ್ರೀಮತಿ ಮೋಹನಂಗಿ ಎಚ್, ಶ್ರೀಮತಿ ಸವಿತಾ ಹುಲಿಮನೆ, ಶ್ರೀಮತಿ ಲೀಲಾವತಿ ಆಂಜೇರಿ ಶ್ರೀಮತಿ ಭಾರತಿ ಸಾಲ್ತಾಡಿ...

ಎಲಿಮಲೆ : ಮಾತೃ ಶಕ್ತಿ ಮತ್ತು ದುರ್ಗಾ ವಾಹಿನಿ ಘಟಕ ಉದ್ಘಾಟನೆ

ವಿಶ್ವ ಹಿಂದೂ ಪರಿಷದ್ ಅಯೋಧ್ಯೆ ಶಾಖೆ ಎಲಿಮಲೆ ಇದರಮಾತೃ ಶಕ್ತಿ ಮತ್ತು ದುರ್ಗಾ ವಾಹಿನಿ ಘಟಕ ಉದ್ಘಾಟನೆ ಆ.08 ರಂದು ಜ್ಞಾನದೀಪ ಶಾಲಾ ಸಭಾಂಗಣದಲ್ಲಿ ನಡೆಯಿತು. ಘಟಕದ ಉದ್ಘಾಟನೆ ಯನ್ನು ಮಾತೃ ಶಕ್ತಿ ಜಿಲ್ಲಾ ಸಂಯೋಜಕರಾದ ಶ್ರೀಮತಿ ಗೀತಾ ಕಡಬ ಉದ್ಘಾಟಿಸಿದರು. ವೇದಿಕೆ ಯಲ್ಲಿ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸೋಮಶೇಖರ ಪೈಕ,...

ವಯನಾಡ್ ದುರಂತಕ್ಕೆ ಸಿಲುಕಿದವರ ನೆರವಿಗೆ ಧಾವಿಸಿದ ಸೇವಾ ಭಾರತಿ – ಕೈ ಜೋಡಿಸಿದ ಆಲೆಟ್ಟಿಯ ಜನನಿ ಫ್ರೆಂಡ್ಸ್ ಕ್ಲಬ್ ಮತ್ತು ಮರ್ಕಂಜದ ಶಾಸ್ತಾವು ಯುವಕ ಮಂಡಲ

ಕೇರಳದ ವಯಾನಾಡ್ ನಡೆದ ಗುಡ್ಡ ಕುಸಿತ ದುರಂತದಲ್ಲಿ ತೊಂದರೆಗೆ ಸಿಲುಕಿದ ಜನರ ಸೇವೆಗೆ ಸುಳ್ಯದ ಸೇವಾ ಭಾರತಿ ತಂಡ ಧಾವಿಸಿದೆ. ಜತೆಗೆ ಆಲೆಟ್ಟಿ ಜನನಿ ಪ್ರೆಂಡ್ಸ್ ಕ್ಲಬ್ ಹಾಗೂ ಮರ್ಕಂಜದ ಶಾಸ್ತಾವು ಯುವಕ ಮಂಡಲದ ಸದಸ್ಯರ ತಂಡ ಸೇವಾಕಾರ್ಯಕ್ಕೆ ಆ.03 ರಂದು ತೆರಳಿದೆ. ತೊಂದರೆಗೆ ಒಳಗಾದವರಿಗೆ ನೆರವಾಗುವ ದೃಷ್ಟಿಯಿಂದ ಸುಳ್ಯ ಪೇಟೆ ಹಾಗೂ ದಾನಿಗಳಿಂದ ಸಂಗ್ರಹ...

ಸುಳ್ಯ : ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ನಡೆಯುವ ಮೊಸರು ಕುಡಿಕೆ ಉತ್ಸವ ಸಮಿತಿ ರಚನೆ – ಅಧ್ಯಕ್ಷರಾಗಿ ಎ.ವಿ.ತೀರ್ಥರಾಮ, ಕಾರ್ಯದರ್ಶಿ ಪ್ರಕಾಶ್ ಯಾದವ್, ಕೋಶಾಧಿಕಾರಿ ನವೀನ್ ಎಲಿಮಲೆ

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನ ಅಂಗವಾಗಿ ಹಲವು ವರ್ಷಗಳಿಂದ ಸುಳ್ಯದಲ್ಲಿ ವಿಜೃಂಭಣೆಯಿಂದ ಮೊಸರು ಕುಡಿಕೆ ಉತ್ಸವ ಆಚರಣೆ ನಡೆಯುತ್ತಿದೆ. ಈ ಬಾರಿ ನಡೆಯುವ 11ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವದ ಬಗ್ಗೆ ಚೆನ್ನಕೇಶವ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ...

ಕಳಂಜ: ಪಟ್ಟೆ ಗುಳಿಗ ಬನದಲ್ಲಿ ಆಟಿಯ ಅಗೇಲು ಸೇವೆ

ಸುಮಾರು 100 ವರ್ಷಗಳಿಗೂ ಅಧಿಕ ಇತಿಹಾಸವಿರುವ ಕಳಂಜ ಗ್ರಾಮದ ಪಟ್ಟೆ ಗುಳಿಗ ದೈವಕ್ಕೆ ವರ್ಷಂಪ್ರತಿಯಂತೆ ಆಟಿಯ ಅಗೇಲು ಸೇವೆ ಆ.04ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಅನೇಕ ಭಕ್ತರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!