Ad Widget

ಸುಳ್ಯ ವಕೀಲರ ಸಂಘಕ್ಕೆ ಸುಕುಮಾರ ಕೋಡ್ತುಗುಳಿ ಅಧ್ಯಕ್ಷ ಉಪಾಧ್ಯಕ್ಷತೆಗೆ ಚುನಾವಣೆ: ದಿಲೀಪ್ ಬಾಬ್ಲು ಬೆಟ್ಟು ಭರ್ಜರಿ ಗೆಲುವು

ಜಗದೀಶ್ ಡಿ.ಪಿ‌ ಸುಳ್ಯ ವಕೀಲರ ಸಂಘದ ಮುಂದಿನ ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಸುಕುಮಾರ್ ಕೋಡ್ತುಗುಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದಿಲೀಪ್ ಬಾಬ್ಲುಬೆಟ್ಟು ಭರ್ಜರಿ ಗೆಲುವು ಪಡೆದಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಡಿ.ಪಿ ಸಹ ಕಾರ್ಯದರ್ಶಿಯಾಗಿ ಅನಿತಾ ಆರ್. ನಾಯಕ್, ಕೋಶಾಧಿಕಾರಿಯಾಗಿ ಹರ್ಷಿತ್ ಕಾರ್ಜ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಮ...

ಅಜ್ಜಾವರ : ಕೊರಂಗುಬೈಲು ಗದ್ದೆಯಲ್ಲಿ ನಾಟಿ ಉತ್ಸವ ಕಾರ್ಯಕ್ರಮ

ಪ್ರತಾಪ ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ ಇವುಗಳ ಜಂಟಿ ಆಶ್ರಯದಲ್ಲಿ ಅಜ್ಜಾವರದ ಕೊರಂಗುಬೈಲು ಗದ್ದೆಯಲ್ಲಿ ನಾಟಿ ಉತ್ಸವ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ನೇಜಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ...
Ad Widget

ಅಜ್ಜಾವರ : ಕೃಷಿ ಇಲಾಖೆಯ ಕಟ್ಟಡವನ್ನು ಅಕ್ರಮವಾಗಿ ಬಾಡಿಗೆಗೆ ನೀಡಿದ ಗ್ರಾಮ ಪಂಚಾಯತ್ – ಕೃಷಿ ನಿರ್ದೇಶಕರಿಂದ ನೋಟಿಸ್ ಜಾರಿಗೆ ಚಿಂತನೆ – ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಸುಳ್ಯ ಕೃಷಿ ಇಲಾಖೆಯ ಕಟ್ಟಡವನ್ನು ಹಲವಾರು ವರ್ಷಗಳಿಂದ ಗ್ರಾಮ ಪಂಚಾಯತ್ ಬಾಡಿಗೆಗೆ ನೀಡಿದ್ದು ಇದರ ಕುರಿತಾಗಿ ಕೃಷಿ ನಿರ್ದೇಶಕರು ಅಜ್ಜಾವರಕ್ಕೆ ತೆರಳಿದ ಸಂದರ್ಭದಲ್ಲಿ ಗಮನಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಾಗಿದೆ. ಅಜ್ಜಾವರದ ಸ.ಹಿ.ಪ್ರಾ.ಶಾಲಾ ಆಟದ ಮೈದಾನದ ಬದಿಯಲ್ಲಿ ಕೃಷಿ ಇಲಾಖೆಗೆ ಸಂಬಂದಿಸಿದ ಸುಮಾರು 10 ಸೆಂಟ್ಸ್ ಸ್ಥಳದಲ್ಲಿ ಕೃಷಿ ಇಲಾಖೆಯ ಕಟ್ಟಡವಿದ್ದು ಇದನ್ನು ಕೃಷಿ...

ಜೇಸಿಐ ಸೀನಿಯರ್ ಚೇಂಬರ್ ವತಿಯಿಂದ ರಾಮಕೃಷ್ಣ ಭಟ್ ಚೊಕ್ಕಾಡಿಯವರಿಗೆ ಸನ್ಮಾನ

ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸುಳ್ಯ ಪಯಸ್ವಿನಿ ಘಟಕ ಮತ್ತು ಜೆ.ಸಿ.ಐ ವತಿಯಿಂದ ಇತ್ತೀಚಿಗೆ ನಿವೃತ್ತರಾದ ಸಾಹಿತ್ಯ, ಸಾಂಸ್ಕೃತಿಕ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅನರ್ಘ್ಯ ಸೇವೆ ಸಲ್ಲಿಸಿದ ರಾಮಕೃಷ್ಣ ಭಟ್ ಚೊಕ್ಕಾಡಿಯವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ ಅಧ್ಯಕ್ಷರಾದ ಚಂದ್ರಶೇಖರ ನಂಜೆ, ಸೀನಿಯರ್ ಕೆ.ಆರ್.ಗಂಗಾಧರ್, ಜೆ.ಸಿ.ಐ ಅಧ್ಯಕ್ಷ ಗುರುಪ್ರಸಾದ್, ಸೀನಿಯರ್ ಲೊಕೇಶ್ ಪೆರ್ಲಂಪಾಡಿ,ಸೀನಿಯರ್ ದೇವಿಪ್ರಸಾದ್ ಕುದ್ಪಾಜೆ,...

ಸುಳ್ಯ: ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಪೋಷಕರ ಸಭೆ

ಸುಳ್ಯದ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆಯು ಆಗಸ್ಟ್ 3 ರಂದು ನಡೆಯಿತು.ಸಮಾರಂಭದ ಸಭಾಧ್ಯಕ್ಷತೆಯನ್ನು ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜ ವಹಿಸಿ ಮಾತನಾಡುತ್ತಾ, ಮಕ್ಕಳನ್ನು ಈಗಿನಿಂದಲೇ ಪರೀಕ್ಷೆಗಳಿಗೆ ಯಾವ ರೀತಿ ತಯಾರಿ ಗೊಳಿಸಬೇಕು, ದೈನಂದಿನ ಚಟುವಟಿಕೆ, ಶಿಸ್ತು, ಗೌರವ ತಾಳ್ಮೆ ಈ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸುವಂತೆ ಹೆತ್ತವರು ತಮ್ಮ...

ಕೊರಂಗುಬೈಲು ಗದ್ದೆಯಲ್ಲಿ ಭತ್ತ ಬೇಸಾಯ – ಶಾಲಾ ಮಕ್ಕಳ ಶಿಕ್ಷಕರು ನಾಗರಿಕರ ಜೊತೆಗೆ ಸಂವಾದ ನಡೆಸಿದ ಕೃಷಿ ನಿರ್ದೇಶಕ ಗುರುಪ್ರಸಾದ್ ಎಂ ಎಸ್ 

ಭತ್ತ ಕೃಷಿಗಳಿಗೆ ಔಷಧಿ, ಯಂತ್ರೋಪಕರಣಗಳ ಸಹಾಯ ನೀಡುವ ಭರವಸೆ

ಅಜ್ಜಾವರ : ಅಜ್ಜಾವರ ಗ್ರಾಮದ ಕೊರುಂಗು ಬೈಲು ಗದ್ದೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಭತ್ತದ ನಾಟಿ ಕಾರ್ಯಕ್ರಮವು ನಡೆಯಿತು. ಭತ್ತದ ನಾಟಿ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಊರಿನ ನಾಗರಿಕರು ಮಹಿಳೆಯರು ಭಾಗವಹಿಸಿದ್ದು ಭತ್ತದ ನಾಟಿ ಕಾರ್ಯಕ್ರಮಕ್ಕೆ ಸುಳ್ಯ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಎಂ ಎಸ್ ರವರು ಆಗಮಿಸಿ ಕೃಷಿಯ...

ಯೋಗಾಸನದಲ್ಲಿ 04ನೇ ವಿಶ್ವ ದಾಖಲೆ  ಮಾಡಿದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ  ನಿಹಾನಿ ವಾಲ್ತಾಜೆ

ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ , ಯೋಗಮುದ್ರಾಸನ ದಲ್ಲಿ 41 ನಿಮಿಷ  02 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ.  ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.ಮತ್ತು 04 ಅಗಸ್ಟ್ 2024 ಆದಿತ್ಯವಾರ ದಂದು  ಮೈಸೂರು ನಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ...

ಸುಳ್ಯ ನಗರ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಸುಳ್ಯ: ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತ ಅವಧಿ‌ ಮುಗಿದು ಸುಮಾರು ಒಂದೂವರೆ ವರ್ಷಗಳ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ.20 ಸದಸ್ಯರ ನಗರ ಪಂಚಾಯತ್‌ನಲ್ಲಿ 14 ಮಂದಿ...

ಬಳ್ಪ : ಅಕ್ಕೇಣಿಯ ಅಶೋಕ್   ನಾಪತ್ತೆ – ಪೋಲೀಸ್ ದೂರು

ಬಳ್ಪ ಗ್ರಾಮದ ಅಕ್ಕೇಣಿಯ ಅಶೋಕ್ (33)ಎಂಬವರು ಆ.5 ರಂದು  ಬೆಳಿಗ್ಗೆಯಿಂದ ಕಾಣೆಯಾಗಿರುವುದಾಗಿ ತಿಳಿದು ಬಂದಿದೆ. ಅವಿವಾಹಿತರಾಗಿದ್ದು, ತಾಯಿ ಮಗಳ ಮನೆಗೆ ಹೋಗಿದ್ದ ವೇಳೆ  ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಹೋದರ ಹರೀಶ ರವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಳ್ಳಕ್ಕ ಸೇತುವೆ ಸಮೀಪ ಹೊಳೆ ಬದಿಯಲ್ಲಿ ಮೊಸಳೆ ಪತ್ತೆ

ಗುತ್ತಿಗಾರು ಪಂಜ ರಸ್ತೆಯಲ್ಲಿ ಸಿಗುವ ಬಳ್ಳಕ ಸೇತುವೆ ಸಮೀಪ ಹೊಳೆ ಬದಿಯಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಸದಾಶಿವ ಕುದ್ವ ಅವರು ಈ ರಸ್ತೆಯಲ್ಲಿ ಹೋಗುವಾಗ ಮೊಸಳೆ ಇರುವುದು ಕಂಡುಬಂದಿದೆ. ಮೊಸಳೆ ಹೊಳೆಯ ದಡದಲ್ಲಿ ಮಲಗಿರುವ ಫೋಟೋ ತೆಗೆದು ಹಂಚಿಕೊಂಡಿದ್ದು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.
Loading posts...

All posts loaded

No more posts

error: Content is protected !!