Ad Widget

ಮೈಸೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ಎಸ್.ಅಂಗಾರ

ಮೈಸೂರು ಚಲೋ ಪ್ರತಿಭಟನೆಯಲ್ಲಿ ಸುಳ್ಯದಿಂದ 400 ಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಿದ್ದು,  ಮಾಜಿ ಸಚಿವ ಎಸ್.ಅಂಗಾರ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದರು.

ಮೈಸೂರು ಚಲೋ ಪ್ರತಿಭಟನೆಗೆ ಸುಳ್ಯದಿಂದ ಭಾಗವಹಿಸಿದ ಕಾರ್ಯಕರ್ತರು

ಬೆಂಗಳೂರಿನಿಂದ ಆರಂಭಗೊಂಡಿರುವ ಮೈಸೂರು ಚಲೋ ಪ್ರತಿಭಟನೆ ಇಂದು ಮೈಸೂರಿಗೆ ಆಗಮಿಸಲಿದ್ದು ಸುಳ್ಯದಿಂದ ಸುಮಾರು 430 ಮಂದಿ ಕಾರ್ಯಕರ್ತರು ಭಾಗವಹಿಸಿದ್ದಾರೆ.
Ad Widget

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ : ಬಾಲಕ – ಬಾಲಕಿಯರ ಎರಡು ವಿಭಾಗಗಳಲ್ಲಿಯೂ ಕುಮಾರಸ್ವಾಮಿ ವಿದ್ಯಾಲಯ ಪ್ರಥಮ

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಆ.06 ರಂದು ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಕುಮಾರಸ್ವಾಮಿ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಹಾಗೂ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಆಟಗಾರ ಕಾರ್ತಿಕ್ ಕಕ್ಕೆ ಪದವು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ವೇದಿಕೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಚಂದ್ರಶೇಖರ್ ನಾಯರ್ ವಹಿಸಿದ್ದರು, ಸಮಾರಂಭದ...

ಅಜ್ಜಾವರ : ಶತಮಾನೋತ್ಸವ ಆಚರಣೆಗೆ ಸಿದ್ಧತೆಯಲ್ಲಿರುವ ಶಾಲೆಯ ನೂತನ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಪುಷ್ಪ ಕರ್ಲಪ್ಪಾಡಿ

ಅಜ್ಜಾವರ : ಅಜ್ಜಾವರ ಗ್ರಾಮದ ಸ.ಹಿ ಪ್ರಾ ಶಾಲೆ ಅಜ್ಜಾವರ ಸುಮಾರು ನೂರು ವರ್ಷಗಳ ಇತಿಹಾಸವನ್ನು ಕಂಡಿದ್ದು ಸುಮಾರು ನಾಲ್ಕು ಸಾವಿರಕ್ಕು ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿ ಇದೀಗ ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದೆ. ಆ.05 ರಂದು ನಡೆದ ಪೋಷಕರ ಸಭೆಯಲ್ಲಿ ನೂತನ ಎಸ್.ಡಿ.ಎಂ.ಸಿ.ರಚಿಸಲಾಯಿತು. ನೂತನ ಸಮಿತಿ ಅಧ್ಯಕ್ಷರಾಗಿ ಪುಷ್ಪ ಕರ್ಲಪ್ಪಾಡಿ , ಉಪಾಧ್ಯಕ್ಷರಾಗಿ ಶರೀಫ್ ಪಿ...

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಿದ ದ ಕ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವ ಬೇಡಿಕೆಯ ಪ್ರಸ್ತುತ ಹಂತ ಹಾಗೂ ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವಂತೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದ ಜನರು ಒತ್ತಾಯಿಸುತ್ತಿರುವುದು ಸರಕಾರದ ಗಮನದಲ್ಲಿ ಇದೆಯೇ ? ಎಂದು ಪ್ರಶ್ನೆಯನ್ನು ಮಾಡಿದರು ಮತ್ತು ಸರ್ಕಾರ ಈ...

ರಾಷ್ಟ್ರ ಮಟ್ಟದ ಬೀಚ್ ಕಬಡ್ಡಿಗೆ ಎನ್.ಎಂ.ಸಿ. ವಿದ್ಯಾರ್ಥಿ ವಿನಯ್ ರಾವತ್ ಆಯ್ಕೆ

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ದ್ವಿತೀಯ ಬಿ.ಕಾಂ ಪದವಿ ವಿದ್ಯಾರ್ಥಿ ವಿನಯ್ ರಾವತ್ ಇವರು ಆಗಸ್ಟ್ 8 ರಿಂದ 12ರ ವರೆಗೆ ಬಿಹಾರದ ಭೋಧಗಯಾ ಇಲ್ಲಿ ನಡೆಯುವ 11ನೇ ಅಖಿಲ ಭಾರತ ರಾಷ್ಟ್ರೀಯ ಬೀಚ್ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು 5ನೇ ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ – ಮತ್ತೆ ಹೋರಾಟ ನಡೆಸಲು ಆ.08 ರಂದು ಸುಬ್ರಹ್ಮಣ್ಯದಲ್ಲಿ ರೈತರ ಸಭೆ

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಸರಕಾರ 5ನೇ ಕರಡು ಅಧಿಸೂಚನೆ ಪ್ರಕಟಿಸಿರುವುದನ್ನು ವಿರೋಧಿಸಿ ಆ. 08 ರಂದು ಗುರುವಾರ ಬೆಳಿಗ್ಗೆ ಗಂಟೆ 10:30ಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಪಂಚಾಯತಿನ ಬಳಿ ತುರ್ತು ಸಭೆ ಕರೆಯಲಾಗಿದೆ. ಪಶ್ಚಿಮ ಘಟ್ಟ ಸೂಕ್ಷ್ಮವಲಯ ಘೋಷಣೆಯ ಮತ್ತು ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಹೋರಾಟದ ರೂಪುರೇಷೆಗಳನ್ನು ಶೀಘ್ರ ತಯಾರಿ...

ಸುಳ್ಯ ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಸುಕುಮಾರ ಕೋಡ್ತುಗುಳಿ ಅವಿರೋಧ ಆಯ್ಕೆ – ಉಪಾಧ್ಯಕ್ಷರಾಗಿ ದಿಲೀಪ್ ಬಾಬ್ಲುಬೆಟ್ಟು – ಪ್ರಧಾನ ಕಾರ್ಯ ದರ್ಶಿಯಾಗಿ ಜಗದೀಶ್ ಡಿ.ಪಿ.

ಪ್ರತಿಷ್ಠಿತ ಸುಳ್ಯ ವಕೀಲರ ಸಂಘದ ಆಡಳಿತ ಸಮಿತಿಯ ಅಧ್ಯಕ್ಷತೆಗೆ ಸುಕುಮಾರ ಕೋಡ್ತುಗುಳಿ ಹಾಗೂ ಭಾಸ್ಕರ್ ರಾವ್‌ರವರು ನಾಮಪತ್ರ ಸಲ್ಲಿಸಿದ್ದರು. ಭಾಸ್ಕರ್ ರಾವ್ ರವರು ನಾಮಪತ್ರ ಹಿಂಪಡೆದಿದ್ದರಿಂದ ಮುಂದಿನ ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ಸುಕುಮಾ‌ರ್ ಕೋಡ್ತುಗುಳಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷತೆಗೆ ಮಾತ್ರ ಚುನಾವಣೆ : ಉಪಾಧ್ಯಕ್ಷತೆಯ ಸ್ಥಾನಕ್ಕೆ 4 ಮಂದಿ ವಕೀಲರು ನಾಮಪತ್ರ ಸಲ್ಲಿಸಿದ್ದರು. ಕಾರ್ಯದರ್ಶಿ...

ಯೂತ್ ಕಾಂಗ್ರೆಸ್ ಗೆ ಚುನಾವಣಾ ಪ್ರಕ್ರಿಯೆ ಆರಂಭ : ರಾಜ್ಯ ಪ್ರ.ಕಾರ್ಯದರ್ಶಿಗೆ ಸುಳ್ಯದಿಂದ ಒಂದು ನಾಮಪತ್ರ – ಸುಳ್ಯ ಕ್ಷೇತ್ರಕ್ಕೆ ಮೂರು ನಾಮಪತ್ರ – ಸುಳ್ಯ ಬ್ಲಾಕ್ ಗೆ ಎರಡು ನಾಮಪತ್ರ

ಯೂತ್ ಕಾಂಗ್ರೆಸ್ ಹಾಲಿ ಪದಾಧಿಕಾರಿಗಳ ಅಧಿಕಾರಾವಧಿ ಮುಕ್ತಾಯಗೊಂಡಿದ್ದು ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ.ಈ ಬಾರಿ ಆನ್ ಲೈನ್ ಮೂಲಕ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆ ಅವಧಿ ಆ.2ರಂದು ಮುಕ್ತಾಯಗೊಂಡಿದೆ. ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸುಳ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಶಾಹುಲ್ ಹಮೀದ್ ಕುತ್ತಮೊಟ್ಟೆ ನಾಮಪತ್ರ ಸಲ್ಲಿಸಿದ್ದಾರೆ, ಸುಳ್ಯ...

ಸುಳ್ಯ : ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಸಭೆ ,ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ

ಹಾನಿಯ ಪರಿಹಾರ ಬಾರದೇ ಇದ್ದಲ್ಲಿ ಶಾಸಕರ ಅನುದಾನ ನೀಡುತ್ತೇನೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು - ಭಾಗೀರಥಿ ಮುರುಳ್ಯ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಸರಕಾರದಿಂದ ತುರ್ತು ಪರಿಹಾರಕ್ಕೆ ಅನುದಾನ ಬಿಡುಗಡೆ - ರಾಜಣ್ಣ ಸುಳ್ಯ: ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಯ ಸಭೆಯು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು . ಸಭೆಯಲ್ಲಿ...
Loading posts...

All posts loaded

No more posts

error: Content is protected !!