Ad Widget

ಸುಳ್ಯ ಆಲ್ ಇಂಡಿಯಾ KMCC ಸಭೆ ಸೆಪ್ಟೆಂಬರ್ 5 ರಿಂದ 30 ರ ವರೆಗೆ ಸದಸ್ಯತ್ವ ಅಭಿಯಾನ

ಆಲ್ ಇಂಡಿಯಾ KMCC ಸುಳ್ಯ ವಲಯದ ವಿಶೇಷ ಸಭೆಯು ಆರಂತೋಡು ತೆಕ್ಕಿಲ್ ಸಭಾಂಗಣದಲ್ಲಿ ಆಗಸ್ಟ್ 28 ರಂದು ಖಲಂದರ್ ಎಲಿಮಲೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೆಪ್ಟೆಂಬರ್ 5 ರಿಂದ 30 ರವರೆಗೆ ಸದಸ್ಯತ್ವ ಅಭಿಯಾನ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಖಲಂದರ್ ಎಲಿಮಲೆಯವರು ಸದಸ್ಯತ್ವ ಅಭಿಯಾನ, ಅಂಬುಲನ್ಸ್ ಸೇವೆ,ಸಾಮೂಹಿಕ ವಿವಾಹ ಪಾಲಿಯೇಟಿವ್ ಕೇರ್ ಕೇರ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು,ಆಲ್ ಇಂಡಿಯಾ KMCC ವತಿಯಿಂದ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿದೆಡೆ ಅಂಬುಲನ್ಸ್ ಸೇವೆ ಇದ್ದು ಸುಳ್ಯದಲ್ಲೂ ಸೇವೆ ಆರಂಭಿಸಿದೆ ಎಂದರು,ಅಲ್ ಇಂಡಿಯಾ KMCC ದ,ಕ,ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಫ್ಹಾಂ ಅಲೀ ತಂಙಳ್ KMCC ನೀಡುತ್ತಿರುವ ಸೇವೆಗಳ ಬಗ್ಗೆ ಸದಸ್ಯರಿಗೆ ವಿವರಿಸಿದರು, KPCC ಪ್ರದಾನ ಕಾರ್ಯದರ್ಶಿ ಟಿ,ಎಂ,ಶಾಹಿದ್ ಮಾತನಾಡಿ ವಯನಾಡ್ ದುರಂತ ಸಂದರ್ಭದಲ್ಲಿ KMCC ನೀಡಿದ ಸೇವೆಗಳ ಕುರಿತು ಪ್ರಶಂಸಿಸಿದರು,ದ,ಕ,ಜಿಲ್ಲಾ ಆಲ್ ಇಂಡಿಯಾ KMCC ಕೋಶಾಧಿಕಾರಿ ಇಬ್ರಾಹಿಂ ಹಾಜಿ ಖತ್ತಾರ್,ಸುಳ್ಯ KMCC ಮೆಡಿಕಲ್ ಇಂಚಾರ್ಜ್ ಫೈಸಲ್ ಜಟ್ಟಿಪಲ್ಲ, ಶಾಹಿದ್ ಪಾರೆ, ಸಂಶುದ್ದೀನ್ ಆರಂತೋಡು, ಸಿರಾಜ್ ನೆಟ್ಟಾರ್,ತಾಜುದ್ದೀನ್ ಆರಂತೋಡು, ಹನೀಫ್ ಮುಖ್ವೆ,ಹನೀಫ್ ನಂದಿನಿ,ಆಶಿಕ್ ಆರಂತೋಡು, ಶಿಹಾಬ್ ಜಟ್ಟಿಪಲ್ಲ ಸಭೆಯಲ್ಲಿ ಬಾಗವಹಿಸಿದ್ದರು,ಸುಳ್ಯ ಆಲ್ ಇಂಡಿಯಾ KMCC ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಾಗತಿಸಿ ವಂದಿಸಿದರು,

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!