Ad Widget

ಬಳ್ಪದಲ್ಲಿ ಸಾಹಸ ಮೆರೆದು ಶವವನ್ನು ನೀರಿನಿಂದ ಹೊರ ತಂದ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪ್ರಗತಿ ಅಚ್ಚು ಮತ್ತು ತಂಡಕ್ಕೆ ಸನ್ಮಾನ

ಬಳ್ಪ : ಶ್ರೀ ಕೃಷ್ಣ ಭಜಾನ ಮಂದಿರ ಅಡ್ಡಬೈಲು ಇಲ್ಲಿ ನಡೆದ ಮೊಸರು ಕುಡಿಕೆ ಉತ್ಸವ ಮತ್ತು ಸನ್ಮಾನ ಕಾರ್ಯಕ್ರಮವು ಬಳ್ಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧಿ ಆಟೋಟ ಸ್ಪರ್ಧೆಗಳು ನಡೆದು ಸಭಾ ಕಾರ್ಯಕ್ರಮ ಬಹುಮಾನ ವಿತರಿಸಲಾಯಿತು. ಸಭಾ ವೇದಿಕೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಅಕ್ಕಿನೇನಿಯ ನಿವಾಸಿ ಆಶೋಕ್ ರವರು ನಾಪತ್ತೆಯಾದ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿ ತಮ್ಮ ಕಾರ್ಯಾಚರಣೆಯನ್ನು ಸೇವೆಯ ರೂಪದಲ್ಲಿ ಮಾಡಿ ಶವವನ್ನು ಆ ನೀರಿನ ಸೆಳೆತವನ್ನು ಲೆಕ್ಕಿಸದೇ ಅವಿರತವಾಗಿ ಪರಿಶ್ರಮಿಸಿ ಶವವನ್ನು ಹೊರತೆಗೆದು ಅವರ ಅಂತಿಮ ಕ್ರಿಯ ವಿಧಿವಿಧಾನಗಳು ನಡೆಯುವ ತನಕ ಮನೆಯವರ ಜೊತೆಗಿದ್ದು ಓರ್ವ ಉತ್ತಮ ಸಮಾಜ ಸೇವಕನಾಗಿ ಮತ್ತೊಮ್ಮೆ ತಮ್ಮ ಸೇವಾ ಮನೋಭಾವವನ್ನು ಪ್ರದರ್ಶಿಸಿದ್ದು ಇವರು ಎಲ್ಲರಿಗು ಮಾದರಿಯಾಗಿದ್ದು ಇವರ ಜೊತೆಗೆ ಅವಿರತವಾಗಿ ಕೈ ಹಿಡಿದು ಹುಡುಕಾಟದಲ್ಲಿ ಭಾಗವಹಿಸಿದ್ದ ಅಭಿಲಾಷ್ ಮತ್ತಪ್ಪನ್ ಆ್ಯಂಬುಲೆನ್ಸ್ ಹಾಗೂ ಚಿದಾನಂದ ಎಂ ಕೆ ಮಾಡನಮನೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!