Ad Widget

ಮೊಗ್ರ : ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಣೆ – ಗಿಡ ನೆಡುವ ಕಾರ್ಯಕ್ರಮ



ಮೊಗ್ರ ಬೂತಿನ ಕಾರ್ಯಕರ್ತರ ಸಭೆಯು ಕಮಿಲ ತೀರ್ಥರಾಮ ಗೌಡ ಇವರ ಮನೆಯಲ್ಲಿ ಹಣ್ಣಿನ ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಬೂತ್ ಅಧ್ಯಕ್ಷರಾದ ಜಗದೀಶ್ ಚಿಕ್ಮುಳಿ ವಹಿಸಿದ್ದರು. ಶಕ್ತಿ ಕೇಂದ್ರದ ಮಾಜಿ ಪ್ರಮುಖ್ ಜಯಪ್ರಕಾಶ್ ಮೊಗ್ರ ಕಾರ್ಯಕರ್ತರ ಸಮಸ್ಯೆಗಳನ್ನು ಪರಿಹರಿಸಿ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸುವ ಚಿಂತನೆ ಮಾಡಿದರು. ಎಲ್ಲರೂ ಜೊತೆಯಾಗಿ ಮಾನ್ಯ ಪ್ರಧಾನ ಮಂತ್ರಿಗಳ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಿದರು. ಸಭೆಯಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು. ಜಗದೀಶ್ ಚಿಕ್ಮುಳಿ ಸ್ವಾಗತಿಸಿ,ನಿತ್ಯಾನಂದ ಅಂಬೆಕಲ್ಲು ವಂದಿಸಿದರು. ಕಾರ್ಯದರ್ಶಿ ಲೋಕೇಶ್ ಕಮಿಲ ಮತ್ತು ರಾಧಾಕೃಷ್ಣ ತುಪ್ಪದಮನೆ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!