Ad Widget

ಪೆರಾಜೆ:-ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಸ.ಕಿ.ಪ್ರಾ.ಶಾಲೆ ಪುತ್ಯ ಪೆರಾಜೆ, ಹಿರಿಯ ವಿದ್ಯಾರ್ಥಿ ಸಂಘ ಪುತ್ಯ ಪೆರಾಜೆ, ಯುವ ಸ್ಪೂರ್ತಿ ಸಂಘ ಕರಂಟಡ್ಕ ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಿವೃತ್ತರಾದ ಶಾಲಾ ಶಿಕ್ಷಕರು ಶ್ರೀ ಪದ್ಮಯ್ಯ ಮಾಸ್ತರು ಅಡ್ಕದ ಮನೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ನಡೆಯಿತು, ಮತ್ತು ಬೆಳಿಗ್ಗೆಯಿಂದ ಜಾರುಕಂಬ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸ್ಪೂರ್ತಿ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಮೂಲೆಹಿತ್ಲು ಅವರು ವಹಿಸಿದ್ದರು, ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಪದ್ಮಯ್ಯ ಮಾಸ್ತರು ಅಡ್ಕ, ಶಾಲಾ S.D.M.C ಅಧ್ಯಕ್ಷರಾದ ಯತೀಶ್ ಎನ್.ಎಂ, ಶಾಲಾ ಮುಖ್ಯಗುರುಗಳಾದ ಶ್ರೀ ಮೋಹನ್ ಮಾಸ್ತರ್ ಪೆರುಮುಂಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೋಜ್ ಕುಂಟಿಕಾನ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲಿಗೆ ಶ್ರೀ ಗಿನಿತ್ ಪಾತಿ ಕಲ್ಲುಅವರು ಪ್ರಾರ್ಥನೆ ಮಾಡಿದರು,ನೋಹಿತ್ ನಿಡ್ಯಮಲೆ ಸ್ವಾಗತ ಹಾಗೂ ಲೋಹಿತಾಶ್ವ ನಿಡ್ಯಮಲೆ ಅವರು ವಂದನಾರ್ಪಣೆ ಮಾಡಿದರು, ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮೋಹನ್ ಪಡ್ಪು ಮಾಡಿದರು, ಕಾರ್ಯಕ್ರಮದಲ್ಲಿ ಊರಿನವರು, ಶಾಲಾ ಮಕ್ಕಳು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!