Ad Widget

ತಡೆಗೋಡೆ ರಹಿತವಾದ ಸೇತುವೆಯ ಕೆಳಕ್ಕೆ ಬಿದ್ದ ರಿಕ್ಷಾ,ಚಾಲಕ ಪಾರು.

*ಹೊಳೆಯಲ್ಲಿ ನೀರಿನ ಪ್ರಮಾಣ ಅಧಿಕವಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ*

Oplus_131072

ಪೆರಾಜೆಯಿಂದ ಆಲೇಟ್ಟಿ ಪಂಚಾಯತ್ ವ್ಯಾಪ್ತಿಯ ಅಂಜಿಕಾರು,ನೆಡ್ಚಿಲು ಸಂಪರ್ಕಕಲ್ಪಿಸುವ ಕುಕ್ಕುಂಬಳ್ಳ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾವೊಂದು ಸೇತುವೆಯಿಂದ ಕೆಳಗೆ ಬಿದ್ದ ಘಟನೆ ವರದಿಯಾಗಿದೆ. ಚಾಲಕ ವೇಣು ಎಂಬವರು ಅಪಾಯದಿಂದ ಪಾರಾಗಿದ್ದಾರೆ.

ಚಾಲಕ ವೇಣು ಎಂಬವರು ಪೆರಾಜೆಯಿಂದ ಮನೆಗೆಕಡೆಗೆ ಹೋಗುವ ವೇಳೆ ಈ ಘಟನೆ ನಡೆದಿದ್ದು ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು ರಿಕ್ಷಾ ಜಖಂಗೊಂಡಿದೆ.

ಈ ಸೇತುವೆಗೆ ತಡೆಗೋಡೆ ಇಲ್ಲದೆ ನಿರ್ಮಾಣವಾಗಿದ್ದು ಅಪಾಯಕಾರಿಯಾಗಿದೆ ದಿನ ನಿತ್ಯ ಇದೇ ಮಾರ್ಗದಲ್ಲಿ ಶಾಲಾಮಕ್ಕಳು ಸೇರಿದಂತೆ ಸಾರ್ವಜನಿಕರು ಸಂಚಾರಿಸುತಿದ್ದು. ಇಲ್ಲಿಯ ಜನ ಹೊಸ ಸೇತುವೆಯ ನಿರ್ಮಾಣಕ್ಕೆ ಅನೇಕ ವರ್ಷಗಳಿಂದ ಮನವಿಸಲ್ಲಿಸುತ್ತ ಬಂದಿರುತ್ತಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅಪಾಯಕಾರಿಯಾದ ಸೇತುವೆಯನ್ನು , ವ್ಯವಸ್ಥಿತವಾಗಿ ಮರುನಿರ್ಮಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!