Ad Widget

ಮಡಪ್ಪಾಡಿ : ತೆಂಗಿನಕಾಯಿ ಹೆಕ್ಕಲು ಹೋದ ಕೃಷಿಕ ಕೆರೆಗೆ ಬಿದ್ದು ದಾರುಣ ಮೃತ್ಯು

ತೆಂಗಿನಕಾಯಿ ಹೆಕ್ಕಲು ಹೋಗಿದ್ದಾಗ ಕೆರೆಗೆ ಜಾರಿ ಬಿದ್ದು ಕೃಷಿಕರೊಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಮಡಪ್ಪಾಡಿ ಯಿಂದ ವರದಿಯಾಗಿದೆ.ಮಡಪ್ಪಾಡಿ ಗ್ರಾಮದ ವಿಶ್ವನಾಥ ಗೋಳ್ಯಾಡಿ ಎಂಬವರೇ ಮೃತ ದುರ್ದೈವಿ. ಇಂದು ಮಧ್ಯಾಹ್ನ 11 ಗಂಟೆಯ ವೇಳೆಗೆ ವಿಶ್ವನಾಥರವರು ತೆಂಗಿನಕಾಯಿ ಹೆಕ್ಕಲೆಂದು ತೋಟಕ್ಕೆ ಹೋಗಿದ್ದರೆನ್ನಲಾಗಿದೆ. ಮಧ್ಯಾಹ್ನದವರೆಗೆ ಅವರು ಬಾರದಿದ್ದ ಕಾರಣ ಮನೆಯವರು ತೋಟದಲ್ಲಿ ನೋಡಿದಾಗ ತೆಂಗಿನಕಾಯಿ ತರಲೆಂದು ತೆಗೆದುಕೊಂಡು ಹೋಗಿದ್ದ ತೆಂಗಿನಕಾಯಿ ತುಂಬಿಸಿದ್ದ ಕೈಗಾಡಿ ಕೆರೆಯ ಬಳಿ ಕಂಡುಬಂತೆನ್ನಲಾಗಿದೆ. ಕೆರೆಯಲ್ಲಿ ನೋಡಿದಾಗ ವಿಶ್ವನಾಥರ ದೇಹ ತೇಲುತ್ತಿರುವುದು ಕಂಡುಬಂತೆನ್ನಲಾಗಿದೆ. ಬಳಿಕ ಸ್ಥಳೀಯರು ಸೇರಿ ದೇಹವನ್ನು ಮೇಲಕ್ಕೆತ್ತದರಾದರೂ ಅದಾಗಲೇ ಕೊನೆಯುಸಿರೆಳೆದಿದ್ದರೆಂದು ತಿಳಿದು ಬಂದಿದೆ. ವಿಚಾರ ಪೊಲೀಸರಿಗೆ ತಿಳಿಸಿಲಾಗಿರುವುದಾಗಿ ತಿಳಿದು ಬಂದಿದೆ.ಮೃತರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!