Ad Widget

ನಿಧನ : ಪರಮೇಶ್ವರಿ ನಡುತೋಟ

ಸುಬ್ರಹ್ಮಣ್ಯ ಸಮೀಪದ ಕೈಕಂಬ ನಡುತೋಟ ದಿವಂಗತ ಬೊಳಿಯಣ್ಣ ಗೌಡ ಅವರ ಧರ್ಮಪತ್ನಿ ಪರಮೇಶ್ವರಿ ಅವರು ವಯೋಸಹಜವಾಗಿ ಸೋಮವಾರ ರಾತ್ರಿ ನಿಧನ ಹೊಂದಿದರು. ಮೃತರಿಗೆ 99 ವರ್ಷ ವಯಸ್ಸಾಗಿತ್ತು.ಮೃತರು ಬಂಧು-ಮಿತ್ರರು ಹಾಗೂ ನಡುತೋಟ ಕುಟುಂಬಸ್ಥರನ್ನು ಅಗಲಿದ್ದಾರೆ.

ಕವನ : ಹೆಸರಿಗಷ್ಟೇ ಮನುಷ್ಯ ಎಂದೆನಿಸಿಕೊಂಡರೆ ಸಾಕೇ…!?

ಹೆಸರಿಗಷ್ಟೇ ಮನುಷ್ಯ ಎಂದೆನಿಸಿಕೊಂಡರೆ ಸಾಕೇ..? ಮನುಷ್ಯತ್ವವ ಮರೆತು ಬದುಕಿದರೆ ಆ ಬದುಕಿಗೆ ಅರ್ಥವಾದರೂ ಉಂಟೇ…!?ಜೀವನಪರ್ಯಂತ ಬರೀ ಹಣ, ಆಸ್ತಿ-ಅಂತಸ್ತನ್ನು ಗಳಿಸಿಕೊಂಡರೆ ಸಾಕೇ..? ನಾವು ಸತ್ತ ನಂತರವೂ ನಮ್ಮ ಹೆಸರನ್ನು ಉಳಿಸುವ ಮಾನವೀಯ ಮೌಲ್ಯಗಳಿಗಿಂತ ದೊಡ್ಡ ಆಸ್ತಿ ಬೇಕೇ…!?ಸಮಾಜದಲ್ಲಿ ಎಲ್ಲರೆದುರು ತಲೆ ಎತ್ತಿ ಬದುಕಬೇಕು ಎಂದುಕೊಂಡರಷ್ಟೇ ಸಾಕೇ..? ಹಿರಿಯರೆದುರು ತಲೆ ತಗ್ಗಿಸಿ, ಕಿರಿಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ಗುಣವಿಲ್ಲದಿದ್ದರೆ...
Ad Widget

ಪಡಿಕಲ್ಲು ಚಾಳೆಪ್ಪಾಡಿ ರಸ್ತೆ ಅವ್ಯವಸ್ಥೆ – ಕೇಳುವವರೇ ಇಲ್ಲದಾಗಿದೆ ಜನತೆ ಆಕ್ರೋಶ

ಕೊಲ್ಲಮೊಗ್ರು ಪೇಟೆಯಿಂದ ಪಡಿಕಲ್ಲು ಚಾಳೆಪ್ಪಾಡಿಗೆ ಹೋಗುವ ಪಂಚಾಯತ್ ರಸ್ತೆ ಕಳೆದ ಹಲವಾರು ವರುಷಗಳಿಂದ ಅಭಿವೃದ್ಧಿಯಾಗದೇ ನೀರೆಲ್ಲಾ ರಸ್ತೆಯಲ್ಲಿಯೇ ಹರಿದು ಈ ಭಾಗದ ಜನ ಕಷ್ಟ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯಿತ್ ಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನ ದೊರಕದೆ ಜನ ಕಂಗಲಾಗಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಕೊಲ್ಲಮೊಗರು ನಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿಯೂ...
error: Content is protected !!