Ad Widget

ಅರ್ಥಪೂರ್ಣವಾಗಿ ಸ್ವಚ್ಚತೆಯ ಮೂಲಕ ಸ್ವಾತಂತ್ರೋತ್ಸವ ಆಚರಿಸಿದ ಉಬರಡ್ಕ ಯುವಕರ ತಂಡ

. . . . . . . . .

ಉಬರಡ್ಕ: ಉಬರಡ್ಕ ಗ್ರಾಮದ ಕಿಂಡಿ ಅಣೆಕಟ್ಟಿನಲ್ಲಿ ಕಳೆದ ಕೆಲವು ಸಮಯಗಳಿಂದ ಸುರಿಯುತ್ತಿದ್ದ ಮಳೆಗೆ ನೀರಿನಲ್ಲಿ ತೇಲಿಬಂದ ಮರದ ದಿಮ್ಮಿ, ಕಸ ತುಂಬಿ ನೀರಿನ ಹರಿವಿಕೆಗೆ ಸಮಸ್ಯೆಯಾಗುವುದನ್ನು ಮನಗಂಡು ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು.‌

. . . . . . .

ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಚರ್ಚಿಸಿದ ಸ್ಥಳೀಯ ಯುವಕರ ತಂಡ ಮುಂಜಾನೆಯಿಂದಲೇ ಈ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಉಬರಡ್ಕ ಗ್ರಾಮದ ಯುವಕರಾದ ಗಂಗಾಧರ ನಾಯರ್, ಪ್ರಕಾಶ್ ಶೆಟ್ಟಿ, ಜನಾರ್ಧನ ಪೂಜಾರಿ, ಚೇತನ್ ಅಮೈ, ರಮೇಶ್ ಕಕ್ಕೆಬೆಟ್ಟು, ಸಂದೀಪ್ , ಪುನೀತ್ ಪೈಕ, ಆಕಾಶ್ ಮದಕ ಅಲ್ಲದೆ , ನಿವೃತ್ತ ಮಾಜಿ ಸೈನಿಕ ಮಾಧವ ಮದಕ ಕೂಡ ತುಂಬಿ ಹರಿಯುವ ನೀರಿಗೆ ಇಳಿದು ಮರದ ದಿಮ್ಮಿಗಳನ್ನು ಸರಿಸುವ ಕೆಲಸಕ್ಕೆ ಸಹಕರಿಸಿದ್ದು ಇವರ ಈ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading