Ad Widget

ಸುಳ್ಯ : ಮೆಸ್ಕಾಂ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ನಿವೃತ್ತ ಜೆಇ ಬೋರಯ್ಯ ರವರು ಧ್ವಜಾರೋಹಣ ನೆರವೇರಿಸಿದರು. ‌ಈ ಸಂದರ್ಭದಲ್ಲಿ ಎಇಇ ಹರೀಶ್ ನಾಯ್ಕ್, ಜೂನಿಯರ್ ಇಂಜಿನಿಯರ್ ಗಳಾದ ದಿವ್ಯ , ಉಷಾ, ಪುತ್ತೂರು ವಿಭಾಗದ ಕಂದಾಯ ಸಹಾಯಕ ರಾಜೇಶ್, ಮೇಲ್ವಿಚಾರಕರಾದ ಧರ್ಮಪಾಲ ಕೆ.,ಜಯಪ್ರಕಾಶ್ ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗುತ್ತಿಗಾರು- ಪೈಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಸಂಭ್ರಮ

ಎಸ್.ಡಿ,ಯಂ, ಸಿ, ಅಧ್ಯಕ್ಷರಾದ ಶ್ರೀ ಮಂಜುನಾಥ ಭಟ್ ಪೈಕರವರು ಧ್ವಜಾರೋಹಣ ಮಾಡಿದರು.ಈ ಸಂದರ್ಭದಲ್ಲಿ ಎಸ್. ಡಿ. ಯಂ, ಸಿ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳಾದ ಶ್ರೀ ಸದಾಶಿವ ಕುದ್ವ, ಶ್ರೀ ಬಿ ಪೂರ್ಣಚಂದ್ರ ಊರು ಗೌಡರ ಪ್ರಮುಖರಾದ ಶ್ರೀ ಜಗದೀಶ ಪೈಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾದ ಶ್ರೀ ಲೋಕೇಶ್ವರ. ಡಿ. ಆರ್....
Ad Widget

ಪಯಸ್ವಿನಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ-ದತ್ತಿನಿಧಿ ವಿತರಣೆ

ಪಯಸ್ವಿನಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ದತ್ತಿನಿಧಿ ವಿತರಣೆ ಕಾರ್ಯಕ್ರಮ ನಡೆಯಿತು.ಧ್ವಜ ರೋಹಣವನ್ನು ಪಯಸ್ವಿನಿ ಪ್ರೌಢ ಶಾಲಾ ಸಂಚಾಲಕ ಜಾತೆ ಸದಾನಂದ ನೆರವೇರಿ ಮಾತನಾಡಿದರು. ನಂತರ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಜಯಲತಾ ಕೆ.ಆರ್, ಶಿಕ್ಷಕರಾದ ಮೀನಕುಮಾರಿ, ಶಿವಪ್ರಕಾಶ.ಕೆ, ಸವಿತಾ ಕುಮಾರಿ, ಕುಮಾರ್ ಲಮಾಣಿ, ಸಿಬ್ಬಂದಿ ಬೇಬಿ. ಕೆ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ...

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಸ್ವಾತಂತ್ರ‍್ಯೋತ್ಸವದ ಆಚರಣೆ

ಕೆವಿಜಿ : ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ 78ನೇ ವರ್ಷದ ಸ್ವಾತಂತ್ರ‍ ದಿನಾಚರಣೆಯನ್ನು ವಿಜೃಂಭಣೆಯಿ0ದ ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕುರುಂಜಿಭಾಗ್, ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ ಇವರು ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ‍ದ ಮಹತ್ವವನ್ನು ಸಾರಿದರು. ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕುರುಂಜಿಭಾಗ್...

ಸುಬ್ರಹ್ಮಣ್ಯ : ಮೆಸ್ಕಾಂ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸುಬ್ರಹ್ಮಣ್ಯ ಮೆಸ್ಕಾಂ ಉಪವಿಭಾಗದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಬೆಳ್ಳಾರೆ : ಕ್ರೇನ್ ಹಾಗೂ ರಿಕ್ಷಾ ಅಪಘಾತ

ಬೆಳ್ಳಾರೆ ಪೇಟೆಯಲ್ಲಿ ಕ್ರೇನ್ ಹಾಗೂ ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ರಿಕ್ಷಾ ಚಾಲಕ ಕಲ್ಪಡ ರಾಮಚಂದ್ರ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.‌

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ಹಾಜಿ ಮತ್ತು ಸಂಚಾಲಕರಾದ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಯು.ಪಿ ಬಶೀರ್ ಮತ್ತು ನಿರ್ದೇಶಕರಾದ ಆರಿಫ್ ಬೆಳ್ಳಾರೆ ಶುಭಕೋರಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಯ್ಯದ್ ಮುದಸ್ಯರ, ಆಯಿಶ ಶಹಮ, ಝುಲ್ಫಾ ಫಾತಿಮಾ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು....

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಬಿ. ಸಿ. ಎಂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

ವಿವೇಕಾನಂದ ವೃತ್ತದ ಬಳಿ ಇರುವ  ಬಿ. ಸಿ. ಎಂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ  ಆಚರಣೆ ನಡೆಸಲಾಯಿತು. ಧ್ವಜಾರೋಹಣವನ್ನು  ಜೆಸಿಐ ವಲಯ 15ರ ಪೂರ್ವದ್ಯಕ್ಷ jci ppp.ಅಶೋಕ್ ಚೂಂತರ್ ನೆರವೇರಿಸಿ ಶುಭಾಶಯ ಕೋರಿದರು.  ಮತ್ತು ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದೆ  ಶಿಕ್ಷಣಕ್ಕೆ  ಬೇಕಾದ ಪೂರಕ ಚಟುವಟಿಕೆಯೊಂದಿಗೆ ಭವಿಷ್ಯವನ್ನು...

ಕೊಲ್ಲಮೊಗ್ರು : ಮುಳ್ಳುಬಾಗಿಲು ಸಮೀಪ ಲ್ಯಾಂಡ್ ಲೈನ್ ಕೇಬಲ್ ಕಳವುಗೈಯ್ಯಲು ಯತ್ನ

ಸತತವಾಗಿ ನಡೆಯುತ್ತಿರುವ ಈ ಕೃತ್ಯಕ್ಕೆ ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳುವರೇ ಸಂಬಂಧಪಟ್ಟ ಅಧಿಕಾರಿಗಳು…?

(ವರದಿ : ಉಲ್ಲಾಸ್ ಕಜ್ಜೋಡಿ)ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿಯಿಂದ ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಕಡೆಗೆ ಹೋಗುವ ರಸ್ತೆಯಲ್ಲಿ ಈ ಹಿಂದೆ ಮೂರು ಬಾರಿ ಲ್ಯಾಂಡ್ ಡೆಡ್ ಲೈನ್ ಕೇಬಲ್ ಅನ್ನು ಕಳವುಗೈದ ಘಟನೆ ನಡೆದಿದ್ದು, ಇದೀಗ ಮತ್ತೆ ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಬಿ.ಎಸ್.ಎನ್.ಎಲ್ ಟವರ್ ಹತ್ತಿರ ಲ್ಯಾಂಡ್ ಡೆಡ್ ಲೈನ್ ಕೇಬಲ್ ಅನ್ನು ಮತ್ತೆ ಕಳವುಗೈಯ್ಯಲು...

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಜಲಸಿರಿ, ಜಲನಿಧಿ ಹಾಗೂ ಸಂರಕ್ಷಣೆ ಬಗ್ಗೆ ಕಾರ್ಯಗಾರ

ಸುಬ್ರಹ್ಮಣ್ಯ  : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಕಾರ್ಯಕ್ರಮವಾದ ಜಲನಿಧಿ, ಜಲಸಿರಿ ಹಾಗೂ ಜಲ ಸಂರಕ್ಷಣಾ ಕಾರ್ಯಾಗಾರವನ್ನು ಮಂಗಳವಾರ ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಪೂರ್ವ ಅಸಿಸ್ಟೆಂಟ್ ಗವರ್ನರ್ ಶಿವರಾಮ್ ಏನೆಕಲ್ಲು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ...
Loading posts...

All posts loaded

No more posts

error: Content is protected !!